ಬೆಂಗಳೂರಿನಲ್ಲಿ ಡಾ. ವಿದ್ಯಾಭೂಷಣ ನೇತೃತ್ವದಲ್ಲಿ ‘ಭಜ ಮನ’ ಸಂಗೀತ ಕಾರ್ಯಾಗಾರ; ವೇದಿಕೆ ಹಂಚಿಕೊಳ್ಳಲು ಅಪರೂಪದ ಅವಕಾಶ!

ಬೆಂಗಳೂರು:ಸಂಗೀತ ಆಸಕ್ತರು ಮತ್ತು ವಿದ್ಯಾರ್ಥಿಗಳಿಗೆ ಹರಿದಾಸ ಸಾಹಿತ್ಯ ಹಾಗೂ ಭಜನೆಗಳನ್ನು ನೇರವಾಗಿ ಕಲಿಯಲು ಸುದೀರ್ಘ ಅವಕಾಶ ಒದಗಿಬಂದಿದೆ. ನಗರದ ಜಯನಗರದಲ್ಲಿರುವ ‘ಯುವಕ ಸಂಘ’ದ ಆವರಣದಲ್ಲಿ ಆಗಸ್ಟ್ 6 ಮತ್ತು 7 ರಂದು ಎರಡು ದಿನಗಳ ವಿಶೇಷ ಕಛೇರಿ-ಪೂರ್ವ (Pre-Concert) ಗಾಯನ ಕಾರ್ಯಾಗಾರ ‘ಭಜ ಮನ’ ಆಯೋಜನೆಗೊಂಡಿದೆ.

‘ಪರಮ್ ಕಲ್ಚರ್’, ‘ಹರಿವಂಶ ಗ್ರೂಪ್’ ಹಾಗೂ ‘ಯುವಕ ಸಂಘ’ದ ಜಂಟಿ ಆಶ್ರಯದಲ್ಲಿ ಈ ಸಾಂಸ್ಕೃತಿಕ ತರಬೇತಿ ನಡೆಯಲಿದ್ದು, ಪ್ರತಿದಿನ ಸಂಜೆ 6 ರಿಂದ 8 ಗಂಟೆಯವರೆಗೆ ಕ್ಲಾಸ್‌ಗಳು ಇರಲಿವೆ.

ಖ್ಯಾತ ಗಾಯಕರಿಂದ ನೇರ ತರಬೇತಿ:

ನಾಲ್ಕು ದಶಕಗಳ ಸುದೀರ್ಘ ಸಂಗೀತ ಪಯಣ ಹೊಂದಿರುವ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಹಾಗೂ ‘ಸಂಗೀತ ವಿದ್ಯಾ ನಿಧಿ’ ಬಿರುದು ವಿಜೇತ ಪ್ರಸಿದ್ಧ ವಿದ್ವಾಂಸ ಡಾ. ವಿದ್ಯಾಭೂಷಣ ಮತ್ತು ಅವರ ಪುತ್ರಿ ಮೇಧಾ ವಿದ್ಯಾಭೂಷಣ ಅವರು ಈ ಕಾರ್ಯಾಗಾರದ ನೇತೃತ್ವ ವಹಿಸಲಿದ್ದಾರೆ. ನೂರಕ್ಕೂ ಹೆಚ್ಚು ಆಲ್ಬಮ್‌ಗಳ ಮೂಲಕ ಹರಿದಾಸ ಸಾಹಿತ್ಯವನ್ನು ಮನೆಮನಕ್ಕೆ ತಲುಪಿಸಿರುವ ಗಾಯಕರಿಂದ ನೇರವಾಗಿ ದಾಸರಪದ ಮತ್ತು ಭಕ್ತಿಗೀತೆಗಳ ಗಾಯನ ಶೈಲಿಯನ್ನು ಕಲಿಯುವ ಸುವರ್ಣಾವಕಾಶ ವಿದ್ಯಾರ್ಥಿಗಳಿಗೆ ಸಿಗಲಿದೆ.

ಮುಖ್ಯ ಕಛೇರಿಯಲ್ಲಿ ಹಾಡುವ ಚಾನ್ಸ್!

ಒಟ್ಟು 4 ಗಂಟೆಗಳ ಕಾಲ ನಡೆಯುವ ಈ ತರಬೇತಿಯಲ್ಲಿ ಪಾಲ್ಗೊಳ್ಳುವವರಿಗೆ ವಿಶೇಷ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಗುತ್ತದೆ. ಇದರೊಂದಿಗೆ, ಕಾರ್ಯಾಗಾರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಯ್ದ ಅಭ್ಯಾಸಿಗಳಿಗೆ ಆಗಸ್ಟ್ 8 ರಂದು ಸಂಜೆ 5 ಗಂಟೆಗೆ ಎನ್‌ಎಂಕೆಆರ್‌ವಿ ಕಲಾಕ್ಷೇತ್ರದ ಮಂಗಳ ಮಂಟಪದಲ್ಲಿ ನಡೆಯಲಿರುವ ಮುಖ್ಯ ಕಛೇರಿಯಲ್ಲಿ (Main Concert) ಡಾ. ವಿದ್ಯಾಭೂಷಣ ಅವರೊಂದಿಗೆ ವೇದಿಕೆ ಹಂಚಿಕೊಂಡು ಹಾಡುವ ಅಪರೂಪದ ಅವಕಾಶವನ್ನು ಕಲ್ಪಿಸಿಕೊಡಲಾಗುವುದು.

ನೋಂದಣಿ ಹೇಗೆ?

ಈ ವಿಶೇಷ ಗಾಯನ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತಿ ಇರುವವರು ‘ಬುಕ್‌ಮೈಶೋ’ (BookMyShow) ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.

 

bhaja-mana-dr-vidyabhushana-music-workshop-bengaluru

 

ಭಜ ಮನ ಕಾರ್ಯಾಗಾರ, ಡಾ ವಿದ್ಯಾಭೂಷಣ ಸಂಗೀತ, ಜಯನಗರ ಯುವಕ ಸಂಘ, ದಾಸರ ಪದಗಳು ಕಲಿಕೆ,

Bhaja Mana workshop, Dr Vidyabhushana music, Jayanagar Yuvaka Sangha, Dasara padagalu learning,

Related Articles

Comments (0)

Leave a Comment