ದಿನನಿತ್ಯದ ಯೋಗಾಭ್ಯಾಸದಿಂದ ಸದೃಢ ಆರೋಗ್ಯ ಸಾಧ್ಯ: ರಂಭಾಪುರಿ ಶ್ರೀಗಳು

ಸಿದ್ಧರಬೆಟ್ಟ: ಯೋಗ ಸಾಧನೆಯು ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ, ಪ್ರತಿಯೊಬ್ಬರ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಕರೆ ನೀಡಿದ್ದಾರೆ.

ವಿಶ್ವ ಯೋಗ ದಿನಾಚರಣೆ ಅಂಗವಾಗಿ ಕೊರಟಗೆರೆ ತಾಲೂಕಿನ ಐತಿಹಾಸಿಕ ಸಿದ್ಧರಬೆಟ್ಟ ಕ್ಷೇತ್ರದಲ್ಲಿ ಯೋಗಾಭ್ಯಾಸ ನಡೆಸಿದ ನಂತರ ಜಗದ್ಗುರುಗಳು ಆಶೀರ್ವಚನ ನೀಡಿದರು. ಭಾರತೀಯ ಪರಂಪರೆಯಲ್ಲಿ ಯೋಗಕ್ಕೆ ಅತ್ಯುನ್ನತ ಸ್ಥಾನವಿದೆ. ನಮ್ಮ ಪೂರ್ವಜರು, ಋಷಿಮುನಿಗಳು ಹಾಗೂ ಆಚಾರ್ಯರು ಯೋಗ ಶಕ್ತಿಯ ಮೂಲಕವೇ ಜಗತ್ತಿಗೆ ಶ್ರೇಷ್ಠ ಸಂದೇಶಗಳನ್ನು ನೀಡಿದ್ದಾರೆ. ಶರೀರ, ಬುದ್ಧಿ ಮತ್ತು ಮನಸ್ಸನ್ನು ಸಮತೋಲನದಲ್ಲಿಟ್ಟುಕೊಳ್ಳಲು ಯೋಗ ಪ್ರಮುಖ ಸಾಧನವಾಗಿದೆ ಎಂದು ಅವರು ತಿಳಿಸಿದರು.

ದೈನಂದಿನ ಒತ್ತಡದ ಬದುಕಿನಲ್ಲಿ ನಕಾರಾತ್ಮಕ ಆಲೋಚನೆಗಳನ್ನು ದೂರಮಾಡಿ, ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಲು ಯೋಗ ನೆರವಾಗುತ್ತದೆ. ನಿತ್ಯವೂ ಪ್ರಾಣಾಯಾಮ, ಆಸನಗಳು, ಕಪಾಲಭಾತಿ ಹಾಗೂ ಧ್ಯಾನ ಮಾಡುವುದರಿಂದ ಇಡೀ ದೇಹದಲ್ಲಿ ಹೊಸ ಚೈತನ್ಯ ಮೂಡುತ್ತದೆ. ಜಗತ್ತಿನ ಎಲ್ಲ ಐಶ್ವರ್ಯಗಳಿಗಿಂತ ಆರೋಗ್ಯವೇ ಮಹಾಭಾಗ್ಯ. ರೋಗಮುಕ್ತ ಮತ್ತು ಆನಂದಮಯ ಜೀವನವನ್ನು ನಡೆಸಲು ಯೋಗಾಭ್ಯಾಸ ಅತಿ ಅಗತ್ಯ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

 

 

 

Related Articles

Comments (0)

Leave a Comment