ಪರಿಷತ್ ವಿಪಕ್ಷ ನಾಯಕ, ಸಚೇತಕರ ನೇಮಕ!
- by Suddi Team
- June 29, 2018
- 242 Views
ಬೆಂಗಳೂರು: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿ ಕೋಟಾ ಶ್ರೀನಿವಾಸ ಪೂಜಾರಿ ಹಾಗು ಮುಖ್ಯ ಸಚೇತಕರನ್ನಾಗಿ ಮಹಾಂತೇಶ್ ಕವಟಗಿ ಮಠ್ ಅವರನ್ನು ನೇಮಕ ಮಾಡುವ ನಿರ್ಧಾರವನ್ನು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಕಾರ್ಯಕಾರಿಣಿ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅರವಿಂದ ಲಿಂಬಾವಳಿ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಕಾರ್ಯಕಾರಿಣಿ ಸಭೆಯಲ್ಲಿ ಮುಖಂಡರ ಸಹಮತ ಪಡೆದು ಎರಡು ಸ್ಥಾನಕ್ಕೆ ನೇಮಕ ಮಾಡಲಾಯಿತು ಎಂದರು.
ಇದರೊಂದಿಗೆ ರಾಜಕೀಯ ದೊಂಬರಾಟ ಬಿಟ್ಟು ರಾಜ್ಯದ ಬಗ್ಗೆ ಕಾಳಜಿ ಇದ್ದರೆ ಆಡಳಿತ ಆರಂಭಿಸಿ ಇಲ್ಲವೇ ಬಿಜೆಪಿ ಹೊರಾಟ ಎದುರಿಸಿ ಎನ್ನುವ ನಿರ್ಣಯ ಮತ್ತು ಕೇಂದ್ರ ಸರ್ಕಾರದ ಸಾಧನೆಯ ಸಾರ್ಥಕ ನಾಲ್ಕು ವರ್ಷಗಳಿಗೆ ರಾಜ್ಯ ಬಿಜಪಿ ಅಭಿನಂದನೆ ಸಲ್ಲಿಸುವ ನಿರ್ಣಯವನ್ನು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಅಂಗೀಕಾರ ನೀಡಿತು ಎಂದರು.
Related Articles
Thank you for your comment. It is awaiting moderation.


Comments (0)