ಪಾಕಿಸ್ತಾನ ಸೋಲಿಸಿದ್ದ ಬ್ರಿಗೇಡಿಯರ್ ಕುಲದೀಪ್ ಸಿಂಗ್ ನಿಧನ: ಜಿಟಿಡಿ ಸಂತಾಪ

ಬೆಂಗಳೂರು:ಬ್ರಿಗೇಡಿಯರ್ ಕುಲದೀಪ್​ ಸಿಂಗ್​ ಚಂದ್​ಪುರಿ ಅವರ ಅಕಾಲಿಕ ನಿಧನಕ್ಕೆ ಸಚಿವ ಜಿಟಿ ದೇವೇಗೌಡ ಸಂತಾಪ ಸೂಚಿಸಿದ್ದಾರೆ.

1971ರ ಯುದ್ಧದಲ್ಲಿ ಪಾಕ್ ಪಡೆಯನ್ನು ಮಣಿಸಿ “ಭಾರತದ ಹೀರೋ” ಎನಿಸಿಕೊಂಡಿದ್ದ ಬ್ರಿಗೇಡಿಯರ್ ಕುಲದೀಪ್​ ಸಿಂಗ್​ ಚಂದ್​ಪುರಿ ಅವರು ಅಕಾಲಿಕ ನಿಧನ ಈ ದೇಶಕ್ಕೆ ತುಂಬಲಾರದ ನಷ್ಟ. 1997ರಲ್ಲಿ ತೆರೆಕಂಡಿದ್ದ ಸೂಪರ್​ಹಿಟ್​ “ಬಾರ್ಡರ್​“ ಚಿತ್ರಕ್ಕೆ ಸ್ಪೂರ್ತಿಯಾಗಿದ್ದ ಕುಲದೀಪ್​ ಸಿಂಗ್​ ಚಂದ್​ಪುರಿ ಅವರು “ಲಾಂಗೆವಾಲಾ” ಯುದ್ಧದ ಮೂಲಕ ಹೆಸರು ವಾಸಿಯಾಗಿದ್ದರು. ಅವರ ಆತ್ಮಕ್ಕೆ ತಾಯಿ ಚಾಮುಂಡೇಶ್ವರಿ ಶಾಂತಿ ನೀಡಲಿ. ಅವರ
ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಕರುಣಿಸಲಿ‌ ಎಂದು‌ ತಿಳಿಸಿದ್ದಾರೆ.

Related Articles

Comments (0)

Leave a Comment