ರವಿಚಂದ್ರನ್ ಹೊಸ ಚಿತ್ರ ಪೀಸ್ ಪೀಸ್:ಮಾಸ್ ರೌಡಿ ಗೆಟಪ್ ನಲ್ಲಿ ಕನಸುಗಾರ

ಬೆಂಗಳೂರು: ತಂದೆಯ ಗೆಟಪ್ ನೊಂದಿಗೆ ಕಳೆದು ಹೋದರು ಎನ್ನುವಾಗಲೇ ಸಾಲು ಸಾಲು ಸಿನಿಮಾಗಳಲ್ಲಿ ಮತ್ತೆ ನಾಯಕನಾಗಿ ಬಣ್ಣ ಹಚ್ಚಿರುವ ಕನ್ನಡದ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಇದೀಗ ಕೈಯಲ್ಲಿ ರೋಸ್ ಬದಲು ಲಾಂಗ್ ಹಿಡಿಯುತ್ತಿದ್ದಾರೆ.

ಹೌದು,ರವಿಚಂದ್ರನ್ ಅಂದ್ರೇನೆ ಹಾಗೆ ಕೈಯಲ್ಲಿ ರೋಸ್ ಇಲ್ಲವೇ ಗಿಟಾರ್ ಇರಬೇಕು, ಅವರ ಬಹುತೇಕ ಎಲ್ಲಾ ಚಿತ್ರಗಳಲ್ಲಿ ಈ ದೃಶ್ಯ ಇದ್ದೇ ಇರುತ್ತೆ,ಲಾಂಗು ಮಚ್ಚಿನಿಂದ ದೂರವೇ ಇದ್ದ ಕಲಾವಿದ ಈಗ ಅದೇಕೋ ಮನಸ್ಸು ಬದಲಾಯಿಸಿದ್ದಾರೆ.ಕೈಯಲ್ಲಿ ಮಚ್ಚು ಹಿಡಿದು ಫೀಲ್ಡಿಗಿಳಿಯಲು ಮುಂದಾಗಿದ್ದಾರೆ.ಪಕ್ಕಾ ನೆಗಟಿವ್ ರೋಲ್ ನಲ್ಲಿ ಮಾಸ್ ರೌಡಿಸಂ ಸಬ್ಜೆಕ್ಟ್ ನಲ್ಲಿ ರಸಿಕನನ್ನು ನಾಯಕನಾಗಿ ನೋಡಬಹುದಾಗಿದೆಯಂತೆ.

ಅಷ್ಟಕ್ಕೂ ಇದೆಲ್ಲಾ ರವಿಮಾಮ ಹೊಸ‌ಚಿತ್ರ ಪೀಸ್ ಪೀಸ್ ಗಾಗಿ ಮಾಡ್ತಿದ್ದಾರೆ.ತಮಿಳು ನಿರ್ದೇಶಕ ಶಿವರಾಜ್ ನಿರ್ದೇಶನ ಚಿತ್ರದಲ್ಲಿ ಲಾಂಗ್ ಹಿಡಿಯುತ್ತಿದ್ದಾನೆ ರಣಧೀರ. 2004 ರಲ್ಲಿ ತಮಿಳಿನಲ್ಲಿ ನಿರ್ಮಾಣಗೊಂಡಿದ್ದ ಅಡಿತಡಿ ಎಂಬ ಸಿನಿಮಾವನ್ನು 14 ವರ್ಷದ ನಂತರ ಕನ್ನಡಕ್ಕೆ ರೀಮೇಕ್ ಆಗುತ್ತಿದ್ದು ಮುನಿರತ್ನಂ ನಿರ್ಮಾಣ ಮಾಡುತ್ತಿದ್ದು,ಸಾಹಿತ್ಯ ಸಂಗೀತದ ಹೊಣೆಯನ್ನು ರವಿಚಂದ್ರನ್ ವಹಿಸಿಕೊಂಡಿದ್ದಾರೆ.

ಪೀಸ್ ಪೀಸ್ ಸಿನಿಮಾದಲ್ಲಿ ಏಕಾಂಗಿಗೆ ನಾಯಕಿಯಾಗಿ ಅಪೂರ್ವ ಎರಡನೇ ಬಾರಿ ಜೋಡಿಯಾಗುತ್ತಿದ್ದು, ಮುನಿಜನಪದ, ಶೋಭರಾಜ್, ತೆಲುಗಿನ ಸಂಪತ್ ರಾಜ್ ಚಿತ್ರದಲ್ಲಿ ನಟಿಸಲಿದ್ದಾರೆ.

ಸಧ್ಯ ಪೀಸ್ ಪೀಸ್’ ಸಿನಿಮಾದ ಸ್ಕ್ರಿಪ್ಟಿಂಗ್ ಕೆಲಸ ನಡೆಯುತ್ತಿದ್ದು, ರವಿಚಂದ್ರನ್ ಅವರ ಮನೆಯಲ್ಲೇ ಹಾಡುಗಳ ಧ್ವನಿ ಮುದ್ರಣ ಪೂಜಾ ಕಾರ್ಯಕ್ರಮ ನೆರವೇರಿದೆ. ಆಗಸ್ಟ್ ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನುವ ಮಾಹಿತಿ ಚಿತ್ರತಂಡದಿಂದ ಸಿಕ್ಕಿದೆ.

Related Articles

Comments (0)

Leave a Comment