ಇಂಗ್ಲೀಷ್ ನಲ್ಲೇ ಮಾತಾಡೋಕೆ ನಾವೇನು ಆಂಗ್ಲರ ಗುಲಾಮರಾ: ಜಿಟಿ ದೇವೇಗೌಡ ಪರ ರಾಯರೆಡ್ಡಿ ಬ್ಯಾಟಿಂಗ್

ಕೊಪ್ಪಳ: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೆಗೌಡರು ಇಂಗ್ಲೀಷ್ ಮಾತನಾಡುವ ಅವಶ್ಯಕತೆ ಇಲ್ಲ. ಕನ್ನಡದಲ್ಲೇ ಮಾತನಾಡಬೇಕು. ಅವರಿಗೆ ಇಂಗ್ಲೀಷ್ ಬರಲ್ಲಾ ಎಂಬ ಕೆಲವರ ವಾದದಿಂದ ನನಗೆ ಬೇಜಾರಾಗಿದೆ.
ನಾವೇನು ಇಂಗ್ಲೀಷರ ಗುಲಾಮರಾ ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿ.ಟಿ‌. ದೇವೆಗೌಡ ಅವರು ಬಟ್ಲರ್ ಇಂಗ್ಲೀಷ್ ಮಾತನಾಡಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಜಿ.ಟಿ. ದೇವೇಗೌಡರು ಇಂಗ್ಲೀಷ್​ನಲ್ಲಿ ಮಾತನಾಡಕೂಡದು.
ಕನ್ನಡ ಮಾತನಾಡಿದರೆ ಕೀಳಿರಿಮೆ, ಇಂಗ್ಲೀಷ್ ಮಾತನಾಡಿದ್ರೆ ದೊಡ್ಡಸ್ತಿಕೆ ಎಂಬ ಭಾವ ತಪ್ಪು ಎಂದು ಹೇಳಿದರು.

ಕೊಟ್ಟಿರುವ ಖಾತೆ ಸಂವಿಧಾನತ್ಮಕವಾಗಿ ಸರಿ ಇದೆ
ನಾನು ಜಿ‌.ಟಿ.ದೇವೆಗೌಡರಿಗೆ ಫುಲ್ ಸಪೋರ್ಟ್ ಮಾಡ್ತೀನಿ.
ಖಾತೆ ಹೇಗೆ ನಿರ್ವಹಿಸುತ್ತಾರೆ ಅನ್ನೋದು ಮುಖ್ಯವೇ ಹೊರತು ಭಾಷೆ ಮುಖ್ಯವಲ್ಲ. ಅವರಿಗೆ ಕೊಟ್ಟಿರುವ ಖಾತೆ ಸಂವಿಧಾನತ್ಮಕವಾಗಿ ಸರಿ ಇದೆ. ನಮ್ಮ ಸಂವಿಧಾನದಲ್ಲಿ ಅನಕ್ಷರಸ್ಥರು ಕೂಡಾ ರಾಷ್ಟ್ರಪತಿ, ಪ್ರಧಾನಿ ಮುಖ್ಯಮಂತ್ರಿ ಆಗಲು ಅವಕಾಶವಿದೆ ಎಂದು ತಿಳಿಸಿದರು.

Related Articles

Comments (0)

Leave a Comment