ದಯಾನಂದ್ ಅಮಾನತು ವಿಚಾರದಲ್ಲಿ ಬಿಜೆಪಿ ಜಾತಿ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ: ಕಾಂಗ್ರೆಸ್ ಟೀಕೆ

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ದಯಾನಂದ್ ಅವರ ಸಮುದಾಯವನ್ನು ಇಟ್ಟುಕೊಂಡು ಅವರ ಪರವಾಗಿ ಮಾತನಾಡಲಾಗುತ್ತಿದೆ ಆದರೆ ಶ್ರೀರಾಮುಲು ಅವರನ್ನು ಡಿಸಿಎಂ ಮಾಡುತ್ತೇನೆ ಎಂದು ಚುನಾವಣೆ ವೇಳೆ ಹೇಳಿ ಅವರಿಗೆ ಹಾಗೂ ಅವರ ಸಮುದಾಯಕ್ಕೆ ಮೋಸ ಮಾಡಲಾಯಿತು. ಅದೇ ಸಮಯದಾಯದ ನಾಗೇಂದ್ರ ಅವರನ್ನು ತುಳಿಯಲಾಯಿತು. ಬಿಜೆಪಿಯವರು ಇಷ್ಟೆಲ್ಲಾ ಮಾಡಿ ಈಗ ಮೊಸಳೆ ಕಣ್ಣೀರು ಸುರಿಸಲಾಗುತ್ತಿದೆ. ಬಿಜೆಪಿ ಜಾತಿ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಇದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ದಯಾನಂದ್ ಅವರ ಸಮುದಾಯವನ್ನು ಇಟ್ಟುಕೊಂಡು ಅವರ ಪರವಾಗಿ ಮಾತನಾಡಲಾಗುತ್ತಿದೆ. ಅವರನ್ನು ಆಯುಕ್ತರನ್ನಾಗಿ ಮಾಡುವಾಗ ಅವರ ಸಮುದಾಯದ ಯಾರೂ ಸಹ ಇವರಿಗೆ ಅಧಿಕಾರ ನೀಡಿ ಎಂದು ಮನವಿ ಮಾಡಿರಲಿಲ್ಲ. ಸಿದ್ದರಾಮಯ್ಯ ಅವರು ಎಲ್ಲಾ ಸಮುದಾಯಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಾರೆ. ಇದು ಸ್ವತಃ ಸಿಎಂ ಅವರದ್ದೇ ನಿರ್ಧಾರ. ಇಲ್ಲಿ ಯಾವುದೇ ಸಮುದಾಯದ ವಿಚಾರ ಬರುವುದಿಲ್ಲ. ಅವರನ್ನು ಎರಡು ಸಲ ಮುಂದುವರೆಸುವ ಅವಕಾಶವನ್ನು ಸಿಎಂ ನೀಡಿದ್ದಾರೆ. ಈಗ ಬರುತ್ತಿರುವ ಅಭಿಪ್ರಾಯಗಳು ಬಿಜೆಪಿ ಪ್ರಣೀತ ಅಭಿಪ್ರಾಯಗಳು ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುಂಚಿತವಾಗಿ ಬಿಜೆಪಿ ಅಧಿಕಾರದಲ್ಲಿತ್ತು. ಆಗಲೂ ದಯಾನಂದ್ ಅವರು ಎಲ್ಲಾ ಅರ್ಹತೆ ಹೋಂದಿದ್ದರು ಆದರೂ ಅವರನ್ನು ಏಕೆ ಆಯುಕ್ತರನ್ನಾಗಿ ಮಾಡಲಿಲ್ಲ. ಯಾವುದೇ ಸನ್ನಿವೇಶ ಬಂದರೂ ರಾಜಕೀಯ ಮಾಡುವುದು ಬಿಜೆಪಿಯ ಗುಣ. ಸಿದ್ದರಾಮಯ್ಯ ಅವರು ಸಾಮಾಜಿ ನ್ಯಾಯದ ಮೇಲೆ ನಂಬಿಕೆಯನ್ನಿಟ್ಟಿರುವರು. ನಮ್ಮ ಸರ್ಕಾರವನ್ನು ಪ್ರಶ್ನಿಸುವ ನೈತಿಕತೆ ನಿಮಗಿಲ್ಲ ಎಂದರು.

11 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡ ವೇಳೆ ಈ ಮಾಹಿತಿಯನ್ನು ಮುಟ್ಟಿಸುವಲ್ಲಿ ವಿಫಲರಾದವರು ಪೊಲೀಸ್ ಆಯಕ್ತರಾದ ದಯಾನಂದ್ ಅವರು. 5 ಗಂಟೆಯ ಹೊತ್ತಿಗೆ ಮುಖ್ಯಮಂತ್ರಿಗಳು ಅವರ ಬಳಿ ಮಾಹಿತಿ ಕೇಳಿದಾಗ ಒಬ್ಬರು ಮಾಡತ್ರ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಅವರು ಏಕೆ ಈ ರೀತಿ ಹೇಳಿದ್ದಾರೆ ಎಂಬುದು ತಿಳಿಸಿದಿಲ್ಲ. ಇವರ ಮೇಲೆ ಯಾವುದೇ ಪೂರ್ವಾಗ್ರಹ ಪೀಡಿತರಾಗಿ ಕ್ರಮ ತೆಗೆದುಕೊಂಡಿಲ್ಲ ಎಂದರು.

ಬೆಳಿಗ್ಗೆ 8.30 ಹಾಗೂ 9.30 ಕ್ಕೆ ಒಮ್ಮೆ ಅವರನ್ನು ಕರೆಸಿಕೊಂಡು ಕಾರ್ಯಕ್ರಮ ಏರ್ಪಾಟಿನ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಈಗ ಮಾಧ್ಯಮಗಳಲ್ಲಿ ಬರುತ್ತಿರುವಂತೆ ಮುಖ್ಯಮಂತ್ರಿಗಳಿಗೆ ಪೂರ್ವ ಮಾಹಿತಿ ನೀಡಲಾಗಿತ್ತು ಎನ್ನುವುದು ಸತ್ಯಕ್ಕೆ ದೂರವಾದ ಮಾಹಿತಿ. ಮುಖ್ಯಮಂತ್ರಿಗಳ ಗಮನಕ್ಕೆ 5 ಗಂಟೆಯ ವರೆಗೆ ಮಾಹಿತಿ ತರದೇ ಇರುವುದು ಅವರ ವೈಫಲ್ಯ.

ಬೆಂಗಳೂರು ಹಾಗೂ ಪೊಲೀಸ್ ಇಲಾಖೆಯ ಇತಿಹಾಸದಲ್ಲಿ ಪೊಲೀಸ್ ಆಯುಕ್ತರನ್ನು ಅಮಾನತು ಮಾಡಿರುವುದು ಇದೇ ಮೊದಲು. ದಯಾನಂದ್ ಅವರನ್ನು ಮಾತ್ರ ಅಮಾನತು ಮಾಡಿಲ್ಲ. ಐದು ಜನ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇದರ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ಇಂತಹ ಘಟನೆಗಳು ಭವಿಷ್ಯದಲ್ಲಿ ನಡೆಯದಂತೆ ಸಿದ್ದರಾಮಯ್ಯ ಅವರು ಹಾಗೂ ಡಿ.ಕೆ.ಶಿವಕುಮಾರ್ ಅವರು ತೀರ್ಮಾನ ಮಾಡಿದ್ದಾರೆ. ಇದರ ಬಗ್ಗೆ ನಿಯಮ ರೂಪಿಸಲಾಗುತ್ತಿದೆ. ದಯಾನಂದ್ ಅವರ ವಿರುದ್ದ ತೆಗೆದುಕೊಂಡಿರುವ ಕ್ರಮ ಸರಿಯಾದುದು.ಈ ಘಟನೆಗೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆಯ ವೈಫಲ್ಯವೂ ಇದೆ. ತಪ್ಪಾಗಿರವುದನ್ನು ಸರ್ಕಾರ ಒಪ್ಪಿಕೊಂಡಿದೆ. ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ತಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಈ ಘಟನೆ ಸಂಬಂಧ ನ್ಯಾಯಾಂಗ ತನಿಖೆ ನಡೆಯುತ್ತಿದೆ. ಕ್ರೀಡಾಂಗಣದಲ್ಲಿ ಎಲ್ಲಾ ಗೇಟ್ ಗಳನ್ನು ತೆರೆದಿದ್ದರೆ ಘಟನೆ ನಡೆಯುತ್ತಿರಲಿಲ್ಲ ಎನ್ನುವ ಅಭಿಪ್ರಾಯವಿದೆ ಎಂದರು.

ನಾವು ನಮ್ಮ ತಪ್ಪನ್ನು ನೇರವಾಗಿ ಒಪ್ಪಿಕೊಂಡಿದ್ದೇವೆ. ಆರ್ ಸಿಬಿ ಅವರಿಗೆ ಸನ್ಮಾನ ಮಾಡಬೇಕು ಎಂದು 2 ಗಂಟೆಯ ತನಕ ವೈಭವೀಕರಣ ಮಾಡಿ ಟ್ವೀಟ್ ಮಾಡಿದವರು ಬಿಜೆಪಿಯವರು. ಘಟನೆ ನಡೆದ ನಂತರ ಸಂತ್ರಸ್ತರನ್ನು ಇಬ್ಬರೂ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಅನೇಕ ಆಟಗಾರರು ವಿದೇಶಕ್ಕೆ ತೆರಳುತ್ತಾರೆ ಎನ್ನುವ ಕಾರಣಕ್ಕೆ ಮುಂಚಿತವಾಗಿ ಇಟ್ಟುಕೊಳ್ಳಲಾಯಿತು. ಎರಡು ಗಂಟೆಯ ತನಕ ಮೆರವಣಿಗೆ ಬೇಕು ಎಂದು ಹೆಳುತ್ತಿದ್ದ ಬಿಜೆಪಿಗರು ಬೇಡ ಎಂದು ಹೇಳಬಹುದಿತ್ತಲ್ಲವೇ? ಆರ್. ಅಶೋಕ್, ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಹೀಗೆ ಯಾರಾದರೊಬ್ಬರು ಹೇಳಬಹುದಿತ್ತಲ್ಲವೇ? ಇವರ ಮನಸ್ಥಿತಿಗಳು ಹೇಗೆ ಎಂದರೆ ಗೆದ್ರೆ ಆಡೋಕೆ ಬಂದಿದ್ದೆ, ಸೋತ್ರೇ ನೋಡೋಕೆ ಬಂದಿದ್ದೆ ಎನ್ನುವಂತಾಗಿದೆ ಎಂದರು.

ಸಿಎಂ ಹಾಗೂ ಡಿಸಿಎಂ ಅವರಿಗೆ ಈ ಘಟನೆಯಿಂದ ಮಾನಸಿಕವಾಗಿ ಆಘಾತವಾಗಿದೆ. ಇನ್ನೂ ಈ ದುರ್ಘಟನೆಯಿಂದ ಅವರು ಹೊರ ಬಂದಿಲ್ಲ. ತಪ್ಪು ಸಂದೇಶ, ಮಾಹಿತಿಗಳನ್ನು ನೀಡುವುದೇ ಬಿಜೆಪಿ ಕೆಲಸ. ಮೋದಿ ಅವರು ಅಧಿಕಾರ ವಹಿಸಿಕೊಂಡು ಇಲ್ಲಿಯ ತನಕ ದೇಶದಾದ್ಯಂತ 2 ಸಾವಿರಕ್ಕು ಹೆಚ್ಚು ಜನ ಕಾಲ್ತುಳಿತದಿಂದ ಸತ್ತಿದ್ದಾರೆ. ದಯಾನಂದ್ ಅವರು ತಮ್ಮ ಅಧಿಕಾರವಧಿಯಲ್ಲಿ ಚೆನ್ನಾಗಿ ಕೆಲಸ ಮಾಡಿದ್ದಾರೆ. ಈ ಮೊದಲು ಗುಪ್ತಚರ ಇಲಾಖೆಯಲ್ಲಿದ್ದರು. ದಯಾನಂದ್ ಅವರ ಮನವಿಯನ್ನು ಪರಿಗಣಿಗೆ ಅವರಿಗೆ ಹುದ್ದೆ ನೀಡಲಾಯಿತು ಹಾಗೂ ಅವರನ್ನು ಎರಡು ವರ್ಷಗಳಿಗೆ ಅಧಿಕಾರವಧಿಗೆ ವಿಸ್ತರಿಸಲಾಯಿತು ಎಂದರು.

 

Related Articles

Comments (0)

Leave a Comment