ಕುಂದಾನಗರಿಯಲ್ಲಿ ಭಾರೀ ಮಳೆ: ಜನ ಜೀವನ ಅಸ್ತವ್ಯಸ್ತ
- by Suddi Team
- June 3, 2020
- 25 Views

ಬೆಳಗಾವಿ: ರಾಜ್ಯದಲ್ಲಿ ಮುಂಗಾರು ಆರಂಭವಾಗಿದ್ದು, ಮಳೆರಾಯನ ಆರ್ಭಟ ಜೋರಾಗಿದೆ. ಕಳೆದ ಎರಡು ದಿನದಿಂದ ಆಗಾಗ ಸುರಿದ ಮಳೆ ಇಂದು ಎಡೆಬಿಡದೇ ಸುರಿದಿದ್ದರಿಂದ ಕುಂದಾ ನಗರಿ ಜನರ ಜೀವನ ಅಸ್ತವ್ಯಸ್ತಗೊಂಡಿದೆ.
ಬಾರಿ ಮಳೆ ಹಿನ್ನಲೆಯಲ್ಲಿ ಬೆಳಗಾವಿಯ ಆಟೋ ನಗರ ಮತ್ತು ಇಂಡಾಲ್ಕೊ ಕಂಪನಿ ಆವರಣದಲ್ಲಿ ನಿರ್ಮಿಸಿದ ತಾತ್ಕಾಲಿಕ ತರಕಾರಿ ಮಾರುಕಟ್ಟೆಗೆ ನೀರು ನುಗ್ಗಿದೆ, ತರಕಾರಿ ಅಂಗಡಿ, ಶೆಡ್ ಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಭಾರಿ ಮಳೆಯಿಂದಾಗಿ ತರಕಾರಿ ವ್ಯಾಪಾರಸ್ಥರು, ಸಗಟು ಮಾರಾಟಗಾರರು ಹೈರಾಣಾಗಿದ್ದಾರೆ.
ಇನ್ನೂ ನಗರದ ಕೆಲ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ನೀರು ಹೊರಹಾಕಲು ಸಾರ್ವಜನಿಕರು ಹರಸಾಹಸ ಪಡುವಂತಾಗಿದೆ.
Related Articles
Thank you for your comment. It is awaiting moderation.
Comments (0)