ಬೆಂಗಳೂರಿನಲ್ಲಿ ಐವರು ಪೊಲೀಸರ ವಿರುದ್ಧವೇ ಎಫ್ಐಆರ್

Photo credit-facebook

ಬೆಂಗಳೂರು: ಮಹಿಳೆಯೊಬ್ಬರ ಮನೆಗೆ ಅತಕ್ರಮ ಪ್ರವೇಶ ಮಾಡಿದ್ದ ರೌಡಿಗಳ ವಿರುದ್ಧ ದೂರು ದಾಖಲಿಸಿಕೊಳ್ಳಲು ನಿರಾಕರಿಸಿ ರೌಡಿಗಳ ಪರವಾಗಿ ನಿಂತ ಆರೋಪದ ಮೇಲೆ ಅವರು ಪೊಲೀಸರ ವಿರುದ್ಧವೇ ಇದೀಗ ಎಫ್ಐಆರ್ ದಾಖಲಿಸಲಾಗಿದೆ.

ಪಿಎಸ್ಐ ಮಂಜುನಾಥ್, ಪಿಎಸ್ಐ ರಂಗಪ್ಪ , ಎಎಸ್ಐ ಮುನಿರಾಜ,ಮುಖ್ಯಪೇದೆ ಹರೀಶ, ಮಹಿಳಾ ಮುಖ್ಯಪೇದೆ ಮಂಜುಳಾ ವಿರುದ್ದ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.ಪ್ರಭಾವತಿ ಎಂಬುವರ ಮನೆಗೆ ರೌಡಿಗಳು ಅತಿಕ್ರಮ ಪ್ರವೇಶ ಮಾಡಿ ಮನೆ ಬಾಗಿಲು, ಗೃಹಪಯೋಗಿ ವಸ್ತುಗಳು ಧ್ವಂಸ ಮಾಡಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ರೌಡಿಗಳ ಜೊತೆ ಕೆ.ಆರ್ ಪುರ ಪೊಲೀಸರೂ ಭೂ ಕಬಳಿಕೆ ಯತ್ನ ಮಾಡಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಐಪಿಸ ಸೆಕ್ಷನ್ 341,324,354,506,504,34 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

ಪ್ರಭಾವತಿ ಎಂಬುವರ ಮನೆಗೆ ತೆರಳಿದ್ದ ರೌಡಿಗಳು ಬದರಿಕೆ ಒಡ್ಡಿದ್ದರು ಈ ವೇಳೆ ಕೆ.ಆರ್ ಪುರ ಪೊಲೀಸ್ ಠಾಣೆಗೆ ರೌಡಿಗಳ ವಿರುದ್ದ ದೂರು ನೀಡಲು ತೆರಳಿದ್ದ ಪ್ರಭಾವತಿಯಿಂದ ದೂರು ಪಡೆಯಲು ಪೊಲೀಸರು ಹಣದ ಬೇಡಿಕೆ ಇಟ್ಟಿದ್ದರು. ಹಣ ನೀಡಲು ನೀರಾಕರಿಸಿದಾಗ ದೂರು ಪಡೆಯಲು ನಿರಾರಿಸಿದ್ದ ಪೊಲೀಸರು ರೌಡಿಗಳಿಗೆ ಸಾಥ್ ನೀಡಿ ದೂರುದಾರರಿಗೆ ಜೀವಬೆದರಿಕೆ ಹಾಕಿದ್ದರು ಎನ್ನುವ ಆರೋಪ ಕೇಳಿಬಂದಿದೆ.

ಪೊಲೀಸ್ರು ದೂರು ಪಡೆಯಲು ವಿಫಲವಾದ ಹಿನ್ನಲೆ ಕೊರ್ಟ್ ಮೊರೆ ಹೋಗಿದ್ದ ದೂರುದಾರೆ ಪೊಲೀಸರ ವಿರುದ್ಧವೇ ದೂರು ನೀಡಿದ್ದರು. ಆಸ್ತಿ ವಿಚಾರದಲ್ಲಿ ಪೊಲೀಸ್ರು ಮಧ್ಯ ಪ್ರವೇಶ ಮಾಡಬಾರದು ಎಂದು ನ್ಯಾಯಾಲಯದ ಆದೇಶವಿದ್ದರು ಆದೇಶ ನಿರ್ಲಕ್ಷ್ಯಿಸಲಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಎಫ್ಐಆರ್ ದಾಖಲಿಸಿ ಐವರು ಪೊಲೀಸರ ವಿರುದ್ಧವೇ ತನಿಖೆ ನಡೆಸುವಂತೆ ವೈಟ್ ಫಿಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಗೆ 10ನೇ ಎಸಿಎಂಎಂ ನ್ಯಾಯಾಲಯ ಸೂಚನೆ ನೀಡಿದೆ.

Related Articles

Comments (0)

Leave a Comment