ಟೌನ್ ಹಾಲ್ ನಲ್ಲಿ ಅಟಲ್ ಜೀಗೆ ನುಡಿನಮನ: ಶತ್ರುಗಳು ಕೂಡ ಮರೆಯದಂತೆ ಬದುಕಿದವರು ವಾಜಪೇಯಿ ಎಂದ್ರು ಪೇಜಾವರ ಶ್ರೀ

ಬೆಂಗಳೂರು: ದೇಶದ ರಾಜಕಾರಣಿಗಳಿಗೆ ವಾಜಪೇಯಿ ಮಾದರಿ ನಾಯಕ.ಶತ್ರುಗಳು ಮರೆಯದ ರೀತಿ ಬದುಕಿದವರು ವಾಜಪೇಯಿ ಎಂದು ವಾಜಪೇಯಿ ಅವ್ರು ದೇಶಕ್ಕೆ ಸಲ್ಲಿಸಿದ ಆಡಳಿತ ಸೇವೆ ಬಗ್ಗೆ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳ ಮೆಲಕು ಹಾಕಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವ್ರಿಗೆ ಶೃದ್ದಾಂಜಲಿ ಸಲ್ಲಿಕೆ ಮಾಡಲಾಯಿತು.ನಗರದ ಟೌನ್ ಹಾಲ್ ನಲ್ಲಿ ನಡೆದ ಶೃದ್ದಾಂಜಲಿ ಸಭೆಯಲ್ಲಿ ಪಕ್ಷಾತೀತವಾಗಿ ಶ್ರದ್ಧಾಂಜಲಿ ಸಲ್ಲಿಕೆ ಮಾಡಲಾಯಿತು.ಸಭೆಯಲ್ಲಿ ಉಡುಪಿಯ ಪೇಜಾವರ್ ಶ್ರೀಗಳು, ಚಿತ್ರದುರ್ಗದ ಮಾದರ ಚೆನ್ನಯ್ಯ ಸ್ವಾಮಿಜಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಕಾಂಗ್ರೆಸ್ ನಾಯಕ ಜಾಫರ್ ಶರೀಪ್, ಸಾಹಿತಿಗಳಾದ ಚಿದಾನಂದಮೂರ್ತಿ, ಚಂದ್ರಶೇಖರ ಕಂಬಾರ್, ಕೇಂದ್ರ ಸಚಿವರಾದ ಅನಂತಕುಮಾರ, ಡಿ.ವಿ.ಸದಾನಂದಗೌಡ, ಮಾಜಿ ಡಿಸಿಎಂ ಆರ್.ಅಶೋಕ್, ಬಿಜೆಪಿ ನಾಯಕರಾದ ರಾಮಚಂದ್ರೇಗೌಡ, ಪಿಜಿ.ಆರ್.ಸಿಂದ್ಯಾ, ದೊಡ್ಡರಂಗೇಗೌಡರು ಸೇರಿದ್ದಂತೆ ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು.

ಸಭೆಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು,ದಕ್ಷತೆ ಮತ್ತು ಸೇವೆ ಎರಡು ವಾಜಪೇಯಿ ಅವ್ರಲ್ಲಿ ಇದ್ದವು.ನಿರ್ಧಾರ ಕೈಗೊಳ್ಳುವಾಗ ಅಟಲ್(ಅಚಲ)..
ಕಾರ್ಯವೈಖರಿಯಲ್ಲಿ ವಿಹಾರ್(ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡವರು) ತೋರಿದರು.ವಾಜಪೇಯಿ ಶಿವನ ಗುಣದವರು.ವಾಜಪೇಯಿ ಅನೇಕ ಬಾರಿ ನಮ್ಮ ಮಠಕ್ಕೆ ಭೇಟಿ ಮಾಡಿದ್ರು.ಶ್ರೇಷ್ಟ ರಾಷ್ಟ್ರಪುತ್ರ ವಾಜಪೇಯಿ.ಎಲ್ಲ ರಾಜಕಾರಣಿಗಳು ವಾಜಪೇಯಿ ಅವ್ರನ್ನು ಅನುಸರಿಸಬೇಕು. ಚತುಷ್ಪದ ಯೋಜನೆ, ಕಾವೇರಿ ಯೋಜನೆ ಸೇರಿದ್ದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ವಾಜಪೇಯಿ ಕೈಗೊಂಡರು. ಮಠದ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ಶ್ರೀಗಳ ಆಜ್ಞೆ ಬರುತ್ತೇನೆ ಅಂತ ಹೇಳಿದ್ರು.ವಾಜಪೇಯಿ ಮತ್ತೊಮ್ಮೆ ದೇಶದಲ್ಲಿ ಹುಟ್ಟಿ ಬರಲಿ ಎಂದರು.

ಸಭೆಯಲ್ಲಿ ಮಾತನಾಡಿದ ಸಾಹಿತಿ ಚಂದ್ರಶೇಖರ ಕಂಬಾರ್, ವಾಜಪೇಯಿ ಅವ್ರನ್ನು ಮೊದಲು ನ್ಯೂಯಾರ್ಕ್ ನಲ್ಲಿ ಭೇಟಿಯಾಗಿದ್ದೆ.ಕವಿಗಳಿಗೆ ಕನಸು ಇರುತ್ತವೆ ಆದ್ರೆ ಕನಸು ನನಸು ಮಾಡಲು ಕವಿಗಳಿಗೆ ಅಧಿಕಾರ ಇರಲ್ಲ. ರಾಜಕಾರಣಿಗಳಿಗೆ ಕನಸು ಇರಲ್ಲ ಅಧಿಕಾರ ಮಾತ್ರ ಇರುತ್ತೆ.
ಆದ್ರೆ ವಾಜಪೇಯಿ ಅವ್ರಿಗೆ ಕನಸು ಇತ್ತು, ಕನಸನ್ನು ನನಸು ಮಾಡುವ ಅಧಿಕಾರ ಕೂಡಾ ಇತ್ತು ಎಂದರು.

ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ವಾಜಪೇಯಿ ಅವ್ರ ಕವನಗಳನ್ನು ಉಲ್ಲೇಖಿಸಿದ ಕಂಬಾರ್.ವಾಜಪೇಯಿ ಕವನದ ಸ್ಪೋರ್ತಿಯಿಂದ ಹಲವು ಯುವಕವಿಗಳು ಸೃಷ್ಟಿಯಾದ ಉದಾಹರಣೆ ಇವೆ.ಪಾಕಿಸ್ತಾನದ ಅಧ್ಯಕ್ಷರೂ ಕೂಡಾ ವಾಜಪೇಯಿ ಕವನ ಪ್ರೀತಿಸುತ್ತಿದ್ದರು.ಪಾಕಿಸ್ತಾನ ಭೇಟಿ ವೇಳೆ ಆಗಿನ ಅಧ್ಯಕ್ಷ ಷರೀಫ್ ಕಾರ್ಯಕ್ರಮವೊಂದರಲ್ಲಿ ವಾಜಪೇಯಿ ಅವ್ರಿಗೆ ಭಾಷಣ ಬೇಡ ಪದ್ಯವೊಂದನ್ನು ಹೇಳಿ ಅಂತ ಮನವಿ ಮಾಡಿಕೊಂಡಿದ್ರು.ಕಾರ್ಗಿಲ್ ಯುದ್ಧದಿಂದಾಗಿ ವಾಜಪೇಯಿ ಅವ್ರ ಕವಿ ಮನಸ್ಸಿಗೆ ನೋವಾಗಿತ್ತು ಎಂದರು.

ಸಭೆಯಲ್ಲಿ ಪ್ರಸ್ತಾವಿಕ ಭಾಷಣ ಮಾಡಿದ ಕೇಂದ್ರ ಸಚಿವ ಅನಂತ್ ಕುಮಾರ್, ೧೯೭೭ ರ ಎಬಿವಿಪಿ ವಾರಣಾಸಿ ರಾಷ್ಟ್ರೀಯ ಸಮ್ಮೇಳನ ಬಳಿಕ ವಾಜಪೇಯಿ ಅವ್ರನ್ನು ಮೊದಲ ಭಾರಿಗೆ ಭೇಟಿಯಾಗಿದ್ದೆ.೨೦೧೯ ರಿಂದ ೨೦೧೮ರವರೆಗೆ ವಾಜಪೇಯಿ ಮೌನಿಯಾಗಿದ್ದರು.ವಾಜಪೇಯಿ ಸಾವಿನಲ್ಲಿ ಪುಣ್ಯವಂತರ ಮಹಿಮೆಯನ್ನು ನೋಡಿದ್ದೇವೆ.ವಾಜಪೇಯಿ ರಾಜಕಾರಣದಲ್ಲಿದ್ದರೂ ಓರ್ವ ಕವಿ ಆಗಿದ್ದರು.ತುರ್ತುಪರಿಸ್ಥಿತಿ ಸಂದರ್ಭದಲ್ಲಿಯೂ ವಾಜಪೇಯಿ ಕವನ ಬರೆದಿದ್ರು.ಗೀತ್ ನಹೀ ಗಾವುಂಘಾ ಅನ್ನೋ ಕವನ ತುರ್ತು ಪರಿಸ್ಥಿತಿಯಲ್ಲಿ ಬರೆದು ಎಚ್ಚರಿಸಿದ್ರು.೧೯೮೪ ರಲ್ಲಿ ಬಿಜೆಪಿ ೪ ಸ್ಥಾನ ಪಡೆದಿತ್ತು.೪ ರಿಂದ ದೇಶದಲ್ಲಿ ಅನೇಕ ರಾಜ್ಯಗಳಲ್ಲಿ ಕಮಲ ಅರಳಲು ವಾಜಪೇಯಿ ಕಾರಣರಾದ್ರು.ಅಂದಿನಿಂದ ದೇಶದ್ಯಾಂತ ಪಕ್ಷ ಸಂಘಟಿಸಿ ರಾಷ್ಟ್ರಮಟ್ಟದಲ್ಲಿ ಮೂರು ಬಾರಿ ಆಡಳಿತ ನಡೆಸಲು ವಾಜಪೇಯಿ ಪ್ರೇರಣಾದಾಯಿ ಎಂದು ವಾಜಪೇಯಿ ಅವ್ರ ರಾಜಕೀಯ ಜೀವನದ ಪ್ರಮುಖ ಘಟನೆಗಳನ್ನು ಉಲ್ಲೇಖಿಸಿ ವಾಜಪೇಯಿ ಸಾಧನೆಗಳನ್ನು ಮೆಲುಕು ಹಾಕಿದರು.

ಪಾಕಿಸ್ತಾನ ಜೊತೆ ಸಂಬಂಧ ಸುಧಾರಣೆಗೆ ವಾಜಪೇಯಿ ಶ್ರಮಿಸಿದ್ರು ಆದರೆ ಪಾಕಿಸ್ತಾನ ಯುದ್ಧದ ಮಾರ್ಗ ಅನುಸರಿಸಿ ಕಾರ್ಗಿಲ್ ಕದನ ಆರಂಭಿಸಿತು.ಆಗ ದೃಢ ನಿರ್ಧಾರ ಕೈಗೊಂಡು ಕಾರ್ಗಿಲ್ ಯುದ್ಧ ಗೆದ್ದವರು ವಾಜಪೇಯಿ ಎಂದರು.

ಬೆಂಗಳೂರಿಗೆ ವಾಜಪೇಯಿ ಕೊಡುಗೆ ಅಪಾರ.ನಮ್ಮ ಮೆಟ್ರೋ ಯೋಜನೆ ಅಟಲ್ ಅವ್ರ ಕೊಡುಗೆ.ರಾಜ್ಯಕ್ಕೆ ನೈಋತ್ಯ ರೈಲ್ವೇ ಕೇಂದ್ರ ಒದಗಿಸಿದ್ದು ವಾಜಪೇಯಿ.ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸಲು ಅನುಮತಿ ನೀಡಿದ್ದು ವಾಜಪೇಯಿ.ಕಾವೇರಿ ನಾಲ್ಕನೆಯ ಹಂತ ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿ ವಾಜಪೇಯಿ ಕೊಡುಗೆಯಿದೆ‌ ಎಂದರು.

Related Articles

Comments (0)

Leave a Comment