ಮುಸ್ಲಿಂ ಕುಟುಂಬದಿಂದ ವರಮಹಾಲಕ್ಷ್ಮಿ ಹಬ್ಬ ಆಚರಣೆ

ಮೈಸೂರು: ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ವಿಭಿನ್ನವಾಗಿ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಲಾಯಿತು.ಸಾಮರಸ್ಯ ಬಿಂಬಿಸುವಂತ ರೀತಿಯಲ್ಲಿ ಹಬ್ಬ ಆಚರಿಸಿದ್ದು ವಿಶೇಷ.

ಮೈಸೂರಿನ ಕೋಟೆ ಹುಂಡಿಯಲ್ಲಿ ಜಾಕೀರ್ ಹುಸೇನ್ ದಂಪತಿಯಿಂದ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಲಾಯಿತು.ಜಾಕೀರ್ ಹುಸೇನ್ ಹಾಗೂ ಮಮತ ಪರಸ್ಪರ ಪ್ರೀತಿಸಿ ಮದುವೆ ಆಗಿದ್ರು.ಆದ್ರೆ ಹಬ್ಬದ ವಿಚಾರದಲ್ಲಿ ಹಿಂದು-ಮುಸ್ಲಿಂ ಎರಡು ಹಬ್ಬವನ್ನು ದಂಪತಿ ಆಚರಿಸುತ್ತಿದೆ.ಈ ರೀತಿ ಅನೇಕ ವರ್ಷಗಳಿಂದ ಕುಟುಂಬ ಸೌಹಾರ್ದತೆ ಮೆರೆಯುತ್ತಿದೆ.

ಕಳೆದ ಎರಡು ವರ್ಷದಿಂದ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡುತ್ತಿದ್ದಾರೆ.ಮೊನ್ನೆಯಷ್ಟೇ ಮನೆಯಲ್ಲಿ ಬಕ್ರೀದ್ ಹಬ್ಬ ಆಚರಣೆ ಮಾಡಿ ಇದೀಗ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಲಾಯಿತು.

ವೃತ್ತಿಯಲ್ಲಿ ಮಮತಾ ಶಿಕ್ಷಕಿ ಆಗಿದ್ದು,ಜಾಕೀರ್ ಕರ್ನಾಟಕ ರಾಜ್ಯ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ.ಎಲ್ಲರೂ ಒಗ್ಗೂಡಬೇಕೆಂಬ ಒತ್ತಾಸೆಯಲ್ಲಿ ಹಬ್ಬ ಆಚರಣೆ ಮಾಡಲಾಯಿತು.ಹಬ್ಬದಲ್ಲಿ ಹಿರಿಯ ಸಾಹಿತಿ ಚಿಂತಕ ಫ್ರೋ.ಭಗವಾನ್,ದಲಿತ ಮುಖಂಡ ಹೋರಾಟಗಾರ ಶಿವರಾಮು ಸೇರಿದಂತೆ ಘಟಾನುಘಟಿ ಚಿಂತಕರು ಭಾಗಿಯಾದರು.

Related Articles

Comments (0)

Leave a Comment