ಸಂವಿಧಾನದ ಆಶಯ ಜಾರಿಗೆ ಎಲ್ಲರೂ ಶ್ರಮಿಸೋಣ: ಪರಮೇಶ್ವರ್

ಬೆಂಗಳೂರು: ನಮ್ಮಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದ್ದರೂ ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವಲ್ಲಿ ಸಂಪೂರ್ಣ ಯಶಸ್ಸು ಕಂಡಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.‌ಪರಮೇಶ್ವರ್ ಅಭಿಪ್ರಾಯಪಟ್ಟರು.

ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ
ಭಾರತದ ಒಂದು ಕಾರ್ಯನಿರತ ಪ್ರಜಾಪ್ರಭುತ್ವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಜಾಪ್ರಭುತ್ವ, ರಾಜಕೀಯ ವ್ಯವಸ್ಥೆ ಬಗ್ಗೆ ವಿಧ ವಿಧವಾದ ವ್ಯಾಖ್ಯಾನಗಳು ಬರುತ್ತಿದೆ.

ನಮ್ಮದು ಸಫಲತೆಯ ಪ್ರಜಾಪ್ರಭುತ್ವ. ಸಂವಿಧಾನದ ಆಶಯಗಳನ್ನು ಪ್ರಜಾಪ್ರಭುತ್ವದ ಹಿನ್ನೆಲೆಯಲ್ಲಿ ಸಾಕಾರ ಗೊಳಿಸಲು ಸಾಧ್ಯವಾಗಿದೆಯಾ ಎಂಬ ಪ್ರಶ್ನೆ ಈಗಲೂ ಮೂಡುತ್ತಿದ್ದೆ.

ದೇಶದಲ್ಲಿ ಹಣ ‌ಮತ್ತು ಅಧಿಕಾರ ಕೆಲವೇ ವ್ಯಕ್ತಿಗಳಿಗೆ ಸೀಮಿತವಾಗಿದೆ. ದೇಶದಲ್ಲಿ ಅತ್ಯಾಚಾರ, ಅವ್ಯವಹಾರ ಬೀದಿಯಲ್ಲಿ ನಡೆಯುತ್ತಿದೆ. ಇದಕ್ಕೆಲ್ಲಾ ಅಂತ್ಯ ಹಾಡಬೇಕಿದೆ.

ದೇಶದಲ್ಲಿ ಜಾತಿ ವ್ಯವಸ್ಥೆ ಇದೆ. ಆದರೆ ಈ ವ್ಯವಸ್ಥೆ ಇರ ಬಾರದು ಎಂದು ಏಕೆ ಚಿಂತನೆ ಬರುತ್ತಿಲ್ಲ. ನಾವು ಯಾವ ರೀತಿಯ ಪ್ರಜಾಪ್ರಭುತ್ವದಲ್ಲಿ ಇದ್ದೇವೆ. ಇದಕ್ಕೆ ಉತ್ತರ ಸಿಗ ಬೇಕಿದೆ. ಇಲ್ಲವಾದಲ್ಲಿ ಆಡಳಿತ, ಪ್ರಜಾಪ್ರಭುತ್ವ ವ್ಯವಸ್ಥೆ‌ಗೆ ಸಂಚಕಾರ ಬರಲಿದೆ.

ಪ್ರಜಾಪ್ರಭುತ್ವ ಫಲ, ಸ್ವಾತಂತ್ರ್ಯ ದ ಫಲ ಪ್ರತಿಯೊಬ್ಬರಿಗೂ ಸಿಗಬೇಕಾದರೆ ನಾವೆಲ್ಲರೂ ಚಿಂತನೆ ಮಾಡಬೇಕು. ಸಂವಿಧಾನದ ಆಶಯಗಳ‌ ಅನುಷ್ಠಾನಕ್ಕೆ ಎಲ್ಲರೂ ಪ್ರಯತ್ನಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಇತರರು ಇದ್ದರು.

Related Articles

Comments (0)

Leave a Comment