ಮರೀನಾ ಬೀಚ್ ನಲ್ಲಿ ಕರುಣಾನಿಧಿ ಅಂತ್ಯ ಸಂಸ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಗ್ರೀನ್ ಸಿಗ್ನಲ್
- by Suddi Team
- August 8, 2018
- 301 Views

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅಂತ್ಯಕ್ರಿಯೆಯನ್ನು ಮರೀನಾ ಬೀಚ್ನಲ್ಲಿ ನಡೆಸಲು ಮದ್ರಾಸ್ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ಮರೀನಾ ಬೀಚ್ನಲ್ಲಿ ಕರುಣಾನಿಧಿ ಅಂತ್ಯಕ್ರಿಯೆ ನಡೆಸಬಾರದು ಎಂದು ಸಲ್ಲಿಕೆಯಾಗಿದ್ದ ಐದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ವಾದ ಪ್ರತಿ ವಾದ ಆಲಿಸಿ ಮರೀನಾ ಬೀಚ್ ನಲ್ಲಿಯೇ ಅಂತ್ಯ ಸಂಸ್ಕಾರ ನಡೆಸಲು ಅವಕಾಶ ಕಲ್ಪಿಸಿ ತೀರ್ಪು ನೀಡಿತು.
ವಿಚಾರಣೆ ವೇಳೆ ಹಾಲಿ ಸಿಎಂ ಮತ್ತು ಮಾಜಿ ಸಿಎಂ ಇಬ್ಬರು ಒಂದೇ ಅಲ್ಲ. ಅಧಿಕಾರದಲ್ಲಿದ್ದ ಮುಖ್ಯಮಂತ್ರಿಗಳು ಸಾವನ್ನಪ್ಪಿದಾಗ ಮರೀನಾ ಬೀಚ್ನಲ್ಲಿಯೇ ಸ್ಥಳ ನೀಡಲಾಗಿತ್ತು. ಹಾಗಾಗಿ ಕರುಣಾನಿಧಿ ಅವರಿಗೆ ಮರೀನಾ ಬೀಚ್ನಲ್ಲಿಯೇ ಸ್ಥಳಾವಕಾಶ ನೀಡಲು ಸಾಧ್ಯವಿಲ್ಲ. ಬೇಕಾದರೆ ಗಾಂಧಿ ಮಂಟಪದ ಬಳಿ 2 ಎಕರೆ ಸ್ಥಳ ನೀಡಲು ಸಿದ್ಧವಾಗಿದೆ ಎಂದು ಆಡಳಿತಾರೂಢ ಸರ್ಕಾರ ಪರ ವಕೀಲರು ವಾದ ಮಂಡಿಸಿದ್ದರು.
ಸಾವಿನಲ್ಲೂ ದ್ವೇಷದ ರಾಜಕಾರಣ ಬೇಡ. ಕೋಟಿ ಕೋಟಿ ತಮಿಳುಗರ ಭಾವನೆಗಳಿಗೆ ಧಕ್ಕೆ ತರೋದು ಬೇಡ. ಕರುಣಾನಿಧಿ ಅವರ ಅಂತ್ಯಕ್ರಿಯೆಯ ಮರೀನಾ ಬೀಚ್ ನಲ್ಲಿ ನಡೆಸುವ ಸರ್ಕಾರ ಗೌರವ ಸಲ್ಲಿಸಬೇಕು. ಗಾಂಧಿ ಮಂಟಪದ ಬಳಿ ಅಂತ್ಯಕ್ರಿಯೆ ನಮ್ಮ ಆಯ್ಕೆ ಅಲ್ಲ. ಕರುಣಾನಿಧಿ ಸಾವಿನ ಬಳಿಕ ಒಂದು ವಾರ ಶೋಕಾಚರಣೆ ಮಾಡುತ್ತಿದ್ದೀರಿ. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದೀರಿ. ಹಾಗಾದ್ರೆ ಸ್ಥಳ ಕೊಡುತ್ತಿಲ್ಲ ಯಾಕೆ ಎಂದು ಡಿಎಂಕೆ ಪರ ವಕೀಲರು ಪ್ರತಿವಾದ ಮಂಡಿಸಿದ್ದರು.
ಈ ವೇಳೆ ಮರೀನಾ ಬೀಚ್ ಗೆ ಸಂಬಂಧಿಸಿದ ಎಲ್ಲ ಪಿಐಎಲ್ ಅರ್ಜಿಗಳನ್ನು ಅರ್ಜಿದಾರರು ವಾಪಾಸ್ ಪಡೆದರು. ಹೀಗಾಗಿ ಕರುಣಾನಿಧಿ ಅವರ ಅಂತ್ಯಕ್ರಿಯೆಗೆ ಸಂಬಂಧಿಸಿದ ವಿವಾದಕ್ಕೆ ತೊಡಕಾಗಿದ್ದ ಎಲ್ಲ 5 ಅರ್ಜಿಗಳು ವಜಾಗೊಳಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹೆಚ್.ಜಿ ರಮೇಶ್ ಕರುಣಾನಿಧಿ ಅಂತ್ಯ ಸಂಸ್ಕಾರಕ್ಕೆ ಮರೀನಾ ಬೀಚ್ ನಲ್ಲಿ ಅವಕಾಶ ಕಲ್ಪಿಸಿ ಆದೇಶ ಹೊರಿಡಿಸತು.
ಆದೇಶದಿಂದಾಗಿ ಮರೀನಾ ಬೀಚ್ನಲ್ಲಿ ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್, ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಮತ್ತು ಡಿಎಂಕೆ ಸ್ಥಾಪಕ ಅಣ್ಣಾದೊರೈ ಅವರನ್ನು ಅಂತ್ಯಸಂಸ್ಕಾರ ಮಾಡಲಾಗಿದ್ದು ಅವರ ಪಕ್ಕದಲ್ಲಿ ಕರುಣಾನಿಧಿ ಅಂತ್ಯ ಸಂಸ್ಕಾರ ನಡೆಯಲಿದೆ.
Related Articles
Thank you for your comment. It is awaiting moderation.
Comments (0)