ಗೌರಿ ಹತ್ಯೆ ದಿನ ಬೈಕ್ ರೈಡ್ ಮಾಡಿದ್ದ ಆರೋಪದಲ್ಲಿ ಬಂಧಿತವಾಗಿರುವ ಗಣೇಶ್ ಮಿಸ್ಕಿ ಪೊಲೀಸ್ ಕಸ್ಟಡಿಗೆ!

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗಣೇಶ್ ಮಿಸ್ಕಿ ಮತ್ತು ಅಮಿತ್ ರಾಮಚಂದ್ರ ರನ್ನು ೩ ನೇ ಎಸಿಎಂಎಂ ನ್ಯಾಯಾಲಯ ೧೪ ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

ನಿನ್ನೆ ಹುಬ್ಬಳ್ಳಿ ಮೂಲದ ಇಬ್ಬರು ವ್ಯಕ್ತಿಗಳ ಬಂಧಿಸಿರುವ ಎಸ್ಐಟಿ ಪೊಲೀಸರು ಬಂಧಿಸಿದ್ದರು‌. ಈ ಇಬ್ಬರಲ್ಲಿ ಗಣೇಶ್ ಮಿಸ್ಕಿ ಹತ್ಯೆ ದಿನ ಬೈಕ್ ರೈಡ್ ಮಾಡಿದ್ದ ಎಂದು ತಿಳಿದು ಬಂದಿದೆ. ಇನ್ನೂ ಇತರೆ ಆರೋಪಿಗಳಿಗೆ ಸಹಾಯ ಮಾಡಿದ್ದ ಆರೋಪದಲ್ಲಿ ಅಮಿತ್ ರಾಮಚಂದ್ರ ಬದ್ದಿಯನ್ನು ಬಂಧಿಸಲಾಗಿದೆ.

ಆರೋಪಿಗಳಿಂದ ಗನ್ ಹಾಗು ಹತ್ಯೆ ದಿನ ಬಳಸಿದ್ದ ಬೈಕ್ ವಶಕ್ಕೆ ಪಡೆಯಲು ತಯಾರಿ ನಡೆಸಲಾಗಿದ್ದು, ಮಂಗಳೂರು, ಗೋವಾ ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಕರೆದೊಯ್ದು ಮಹಜರು ಮಾಡಲು ಸಿದ್ದತೆ ನಡೆಸಲಾಗಿದೆ.

Related Articles

Comments (0)

Leave a Comment