ಕಾವೇರಿ ವಿಚಾರ: ಕಾನೂನು ತಜ್ಞರ ಜತೆ ಸಮಾಲೋಚಿಸಿ ಮುಂದಿನ ನಿರ್ಧಾರ: ಸಿಎ
- by Suddiloka Team
- June 2, 2018
- 34 Views
ಬೆಂಗಳೂರು: ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ವಿಚಾರವಾಗಿ ಕೇಂದ್ರ ಸರ್ಕಾರ ನಿನ್ನೆ ಅಧಿಸೂಚನೆ ಹೊರಡಿಸಿದ್ದು, ಈ ಬಗ್ಗೆ ಕಾನೂನು ತಜ್ಞರು ಮತ್ತು ಪರಿಣತರ ಜತೆ ಸಭೆ ನಡೆಸಲಿದ್ದೇವೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾನೂನು ತಜ್ಞರು, ಪರಿಣತರ ಜತೆ ಚರ್ಚಿಸಿ, ಅಧಿಸೂಚನೆಯಿಂದಾಗುವ ಸಾಧಕ ಬಾಧಕಗಳ ಬಗ್ಗೆ ಸಮಾಲೋಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟ ಪಡಿಸಿದರು.
ಶೀಘ್ರ ಬಜೆಟ್ ಸಿದ್ಧತಾ ಸಭೆ:
ಇದೇ ವೇಳೆ ಬಜೆಟ್ ಮಂಡನೆ ಬಗ್ಗೆ ಮಾತನಾಡಿದ ಅವರು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಹೊಸ ಬಜೆಟ್ ಮಂಡನೆ ಮಾಡಬೇಕು ಮತ್ತು ಜಂಟಿ ಅಧಿವೇಶನ ಕರೆಯಬೇಕಾಗಿದೆ. ಇನ್ನು ಮೂರು ನಾಲ್ಕು ದಿನಗಳಲ್ಲಿ ಬಜೆಟ್ ಸಿದ್ಧತಾ ಸಭೆ ನಡೆಸಲಿದ್ದೇವೆ. ಕಳೆದ ವರ್ಷದ ಬಜೆಟ್ ಮಂಡನೆ ಅಂಶಗಳು, ಹಿಂದಿನ ಸರ್ಕಾರದ ಜನಪ್ರಿಯ ಯೋಜನೆ, ಕಾಂಗ್ರೆಸ್ ಪ್ರಣಾಳಿಕೆ ಮತ್ತು ನಮ್ಮ ಪ್ರಣಾಳಿಕೆ ಗಳನ್ನು ಒಳಗೊಂಡಂತೆ ಹೊಸ ಯೋಜನೆಗಳನ್ನು ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು.
ಖಾತೆ ಹಂಚಿಕೆಯಲ್ಲಿ ಜೆಡಿಎಸ್ ಒತ್ತಡ ಇಲ್ಲ:
ಖಾತೆ ಹಂಚಿಕೆ ವಿಚಾರವಾಗಿ ದೇವೇಗೌಡರು ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದು ಸಿಎಂ ಸ್ಪಷ್ಟ ಪಡಿಸಿದರು.
ದೇವೇಗೌಡರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ, ಖಾತೆ ಹಂಚಿಕೆ ವಿಚಾರವಾಗಿ ಜಟಾಪಟಿ ಆಯ್ತು ಎಂಬುದು ಕಪೋಕಲ್ಪಿತ ಸುದ್ದಿ. ಇಂಧನ ಖಾತೆ ಸಂಬಂಧ ಡಿಕೆಶಿ ಮತ್ತು ರೇವಣ್ಣ ಇಬ್ಬರಿಗೂ ಆಸಕ್ತಿ ಇದ್ದಿದ್ದು ನಿಜ. ಸಮ್ಮಿಶ್ರ ಸರ್ಕಾರದಲ್ಲಿ ಕೊಟ್ಟು ತೆಗೆದುಕೊಳ್ಳುವ ನೀತಿ ಅನ್ವಯ ಕೆ.ಸಿ. ವೇಣುಗೋಪಾಲ್ ಪಟ್ಟಿ ಅಂತಿಮ ಗೊಳಿಸಲು ದೇವೇಗೌಡರ ಜತೆ ಸಭೆ ನಡೆಸಿದ್ದರು. ಆದರೆ ಅವರು ಈ ವಿಚಾರದಲ್ಲಿ ಯವುದೇ ರೀತಿಯ ಮೂಗುತೂರಿಸಿಲ್ಲ. ರೇವಣ್ಣರಿಗೆ ಇಂಧನ ಖಾತೆ ನೀಡುವ ಬಗ್ಗೆ ಮಧ್ಯಪ್ರವೇಶ ಮಾಡಿಲ್ಲ. ಅದು ಕಪೋಕಲ್ಪಿತ ಎಂದು ಸ್ಪಷ್ಟ ಪಡಿಸಿದರು.
ಕಾಂಗ್ರೆಸ್ ನಾಯಕರಿಗೂ ಈ ವಿಚಾರ ಗೊತ್ತಿದೆ. ನಾನು ಹಣಕಾಸು ಖಾತೆ ಕೇಳಿದ್ದು ನಿಜ. ಬೇರೆ ಖಾತೆಗಳ ಸಂಬಂಧ ಜಟಾಪಟಿ ಇಲ್ಲ. ಜೆಡಿಎಸ್ ಯಾವುದೇ ವಿಚಾರವಾಗಿ ಒತ್ತಡ ಹೇರಿಲ್ಲ. ಡಿಕೆಶಿ ಜತೆನೂ ಈ ಬಗ್ಗೆ ಮಾತನಾಡಿದ್ದೇನೆ. ಡಿಕೆಶಿಗೆ ಖಾತೆ ನೀಡುವ ಬಗ್ಗೆ ಕಾಂಗ್ರೆಸ್ ನಾಯಕರು ನಿರ್ಧಾರ ಕೈಗೊಳ್ಳುತ್ತಾರೆ. ಖಾತೆ ಹಂಚಿಕೆ ಪಟ್ಟಿಯನ್ನು ಕಾಂಗ್ರೆಸ್ ನಾಯಕರೇ ಸಮಾಲೋಚನೆ ಮಾಡಿ ಅಂತಿಗೊಳಿಸಿದ್ದಾರೆ. ಮಂತ್ರಿ ಮಂಡಲ ರಚನೆಯಾದ ಬಳಿಕ ಖಾತೆ ಹಂಚಿಕೆ ಆಗುತ್ತದೆ ಎಂದು ತಿಳಿಸಿದರು
Related Articles
Thank you for your comment. It is awaiting moderation.
Comments (0)