ತಮಿಳುನಾಡಿಗೆ ಕಾವೇರಿ ನೀರು: ಜುಲೈ 19 ಕ್ಕೆ ನಿರ್ಧಾರ!

ನವದೆಹಲಿ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆಯಂತೆ ತಮಿಳುನಾಡಿಗೆ ನೀರು ಹರಿಸುವ ಸಂಬಂಧ ಜುಲೈ 19 ರಂದು ನಿರ್ಧಾರ ಕೈಗೊಳ್ಳುವ ತೀರ್ಮಾನಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ ಬಂದಿದೆ.

ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆಯಿತು.ಸಮಿತಿ ಅಧ್ಯಕ್ಷ ನವೀನ್ ಕುಮಾರ್ ನೇತೃತ್ವದಲ್ಲಿ ನಾಲ್ಕು ಗಂಟೆಗಳ‌ ಕಾಲ ಸಭೆ ನಡೆಸಲಾಯಿತು.ಪ್ರಾಧಿಕಾರದ ಸೂಚನೆ,ಜಲಾಶಯದ ವಸ್ತುಸ್ಥಿತಿ,ಮಳೆ ಪ್ರಮಾಣ ಕುರಿತು ಚರ್ಚೆ ನಡೆಸಲಾಯಿತು.

ಸಭೆಯ ಬಳಿಕ ಮಾತನಾಡಿದ ನವೀನ್ ಕುಮಾರ್, ಇಂದಿನ ಸಭೆ ಸುಸೂತ್ರವಾಗಿ ನಡೆಯಿತು.ಪ್ರಾಧಿಕಾರದ ಸೂಚನೆ ಪಾಲನೆ ಬಗ್ಗೆ ಚರ್ಚೆಯಾಗಿದೆ ಮಳೆಯ ಪ್ರಮಾಣ, ಒಳ ಹರಿವು, ನೀರಿನ ಶೇಖರಣೆ ಮತ್ತು ಬಿಡುಗಡೆಯ ಮಾಹಿತಿ ಸಂಗ್ರಹ ಕುರಿತು ಚರ್ಚಿಸಲಾಗಿದೆ ಈ ಬಗ್ಗೆ ಕಾವೇರಿ ಕೊಳ್ಳದ ರಾಜ್ಯಗಳಿಂದ ಮಾಹಿತಿ ಕೇಳಿದ್ದೇವೆ ಎಂದರು.

ಜುಲೈ 16 ನೇ ತಾರೀಖಿನೊಳಗೆ ಮಾಹಿತಿ ನೀಡುವಂತೆ ಕಾವೇರಿ ಕೊಳ್ಳದ ರಾಜ್ಯಗಳಿಗೆ ಕೇಳಿದ್ದೇವೆ.19ನೇ ತಾರೀಖು ಮತ್ತೆ ಸಭೆ ಸೇರಿ ಮುಂದಿನ ಕಾರ್ಯ ನಿರ್ಧರಿಸಲಿದ್ದೇವೆ ಎಂದರು.

Related Articles

Comments (0)

Leave a Comment