37 ಪರ್ಸೆಂಟ್ ಬಜೆಟ್ ಮಂಡನೆ ನಂತರ ಮುಂದಿನ ಹೆಜ್ಜೆ: ಬಿಎಸ್ಬೈ

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡನೆ ನಂತರ ನಡೆಯಲಿರುವ ರಾಜಕೀಯ ವಿದ್ಯಮಾನಗಳ ಆಧಾರದಲ್ಲಿ ಮುಂದಿನ ಹೆಜ್ಜೆ ಇಡೋಣ ಎನ್ನುವ ಮೂಲಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಪ್ರಯತ್ನ ನಡೆಸಲಿದೆ ಎನ್ನುವ ಸುಳಿವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನೀಡಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪ, ಇದು 37 ಪರ್ಸೆಂಟ್ ಬಜೆಟ್,ಮಿತ್ರಪಕ್ಷದ ಬೆಂಬಲವಿಲ್ಲದೇ ಸಿಎಂ ಬಜೆಟ್ ಮಂಡಿಸಹೊರಟಿದ್ದಾರೆ ಎಂದು ಟೀಕಿಸಿದರು.

ಅಧಿಕಾರಕ್ಕೆ ಬರುವ ವಾತಾವರಣವಿದ್ದರೂ ನಾವು ಎಡವಿದ್ದೇವೆ ಎನ್ನುವ ಬೇಸರವಿದೆ,ದೇಶದ ಇತಿಹಾಸದಲ್ಲಿ‌ ರಾಜ್ಯಪಾಲರು ನೀಡಿದ ಸಮಯ ಬಿಟ್ಟು 24 ಗಂಟೆಯಲ್ಲಿ ಬಹುಮತ ಸಾಬೀತುಪಡಿಸಿ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದ ಮೊದಲು ಘಟನೆ ಎದುರಿಸಿದೆ.ಬಿಜೆಪಿಗೆ ಬರಲು ಬೇರೆ ಶಾಸಕರು ಸಿದ್ದವಿದ್ದರೂ ಸಮಯದ ಅಭಾವದಿಂದ ಸಾಧ್ಯವಾಗದೆ ಅಧಿಕಾರ ಬಿಡಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಚುನಾವಣೆ ಸಮಯದಲ್ಲಿ ಸುಳ್ಳು ಭರವಸೆಯನ್ನು ಕೊಟ್ಟು ಜನರಿಗೆ ವಂಚನೆ,ನಂಬಿಕೆ ದ್ರೋಹ ಮಾಡಿದ್ದಾರೆ, ಅಧಿಕಾರಕ್ಕೆ ಬಂದರೂ‌ ಕೊಟ್ಟ ಭರವಸೆ ಈಡೇರಿಸುವ ಕಳಕಳಿ ಇಲ್ಲ.ಬೇಷರತ್ ಬೆಂಬಲ ಪಡೆದು ಷರಥತಿನ ಸಂಕೋಲೆಯಲ್ಲಿ ಸಿಲುಕಿ ಕೊಟ್ಟ ಮಾತು ತಪ್ಪಿದ್ದಾರೆ.ಈಗ ಅವರಲ್ಲೇ ಅಸಮಧಾನದ ಬುಗಿಲೆದ್ದಿದ್ದು ಸರ್ಕಾರ ಹೆಚ್ಚುದಿನವಿರಲ್ಲ,ನಾವು ಎಲ್ಲದಕ್ಕೂ ಸಿದ್ದರಾಗಿರಬೇಕು ಎಂದು ಕರೆ ನೀಡಿದರು.

ಮೋದಿ ಈಗಾಗಲೇ ಚುನಾವಣಾ ಕಹಳೆ ಮೊಳಗಿಸಿದ್ದು ಮತ್ತೊಮ್ಮೆ ಮೋದಿ‌ ಸರ್ಕಾರವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕು.ಲೋಕಸಭೆಯಲ್ಲಿ ಕನಿಷ್ಠ 25 ಸ್ಥಾನ ಗೆಲ್ಲುವ ಪಣ ತೊಟ್ಟು ಕೆಲಸ ಮಾಡಬೇಕು, ನಾಲ್ಕು ವರ್ಷದಲ್ಲಿ‌ ಮೋದಿ‌ ಸರ್ಕಾರದ ಸಾಧನೆ, ಯೋಜನೆ ಮನೆಮನೆಗೆ ತಲುಪಿಸುವ ಕೆಲಸ ಮಾಡಬೇಕು ಸಲಹೆ ನೀಡಿದರು.

Related Articles

Comments (0)

Leave a Comment