ಮಕ್ಕಳ ಪುಸ್ತಕ ಗುಚ್ಛ ಅನಾವರಣ

 

ಬೆಂಗಳೂರು: ಬರೆದಂತೆ ಓದಲು, ಓದಿದಂತೆ ಬರೆಯಲು ಬರುವ ಏಕೈಕ ಭಾಷೆ ಕನ್ನಡ ಎಂದು ಲೇಖಕ, ನಾಟಕಕಾರ ವಿವೇಕ ಶಾನಭಾಗ ಅಭಿಪ್ರಾಯ ಪಟ್ಟರು.‌

ಪ್ರಥಮ್ ಬುಕ್ಸ್’ ಸಂಸ್ಥೆಯ ಮಕ್ಕಳ ಜನಪ್ರಿಯ ಸಾಹಿತ್ಯ – ಚಿತ್ರಪುಸ್ತಕ ಗುಚ್ಛ ಅನಾವರಣಗೊಳಿಸಿ ಮಾತನಾಡಿದ ಅವರು,
ಮಕ್ಕಳ ಜನಪ್ರಿಯ ಸಾಹಿತ್ಯ ಚಿತ್ರಪುಸ್ತಕ ಗುಚ್ಛದ ಭಾಗವಾಗಿರುವ ಪಂಜೆ ಮಂಗೇಶರಾಯರ ‘ತೆಂಕಣ ಗಾಳಿಯಾಟ’ ಕವನದ ಬಗ್ಗೆ ಉಲ್ಲೇಖಿಸಿ, ಈ ಪದ್ಯದ ಶಬ್ದಗಳ ಲಾಲಿತ್ಯ ಮಕ್ಕಳ ಅನುಭವ ಪ್ರಪಂಚವನ್ನು ವಿಸ್ತರಿಸುತ್ತದೆ.
ಮಕ್ಕಳಿಗೆ ಸರಳವಾಗಿ ಹೇಳಬೇಕಿಲ್ಲ.ಕಷ್ಟಕರ ವಿಷಯವನ್ನೂ ಅವರು ಅರ್ಥ ಮಾಡಿಕೊಳ್ಳುತ್ತಾರೆ.ಉತ್ತರ ಕರ್ನಾಟಕದ‌ ಮಕ್ಕಳಿಗೆ ಸಮುದ್ರದ ವಿವರಣೆ ತುಂಬಾ ಕುತೂಹಲ ಉಂಟುಮಾಡುತ್ತದೆ. ಬಾಲ್ಯದಲ್ಲಿ ಸಹಜ ಕುತೂಹಲವನ್ನು ತಣಿಸುತ್ತದೆ ಎಂದರು.

ಕಡಲಿನ ಉಬ್ಬರ, ಶಬ್ದಗಳು, ತೆರೆಯ ನರ್ತನ ಮಕ್ಕಳ ಕಲ್ಪನಾ ಲೋಕವನ್ನು ದೊಡ್ಡದಾಗಿಸುತ್ತದೆ.ಜನಪ್ರಿಯ ಸಾಹಿತ್ಯ ಗುಚ್ಛದ ಎಲ್ಲ ಕವಿತೆಗಳು ಐಡಿಯಾ ಅಥವಾ ಥಾಟ್ ಅಲ್ಲ ಅದೊಂದು ಅನುಭವ.ಇಡಿಯಾದ ಅನುಭವವನ್ನು ಮಕ್ಕಳಿಗೆ ತಿಳಿಸುವ ಪ್ರಯತ್ನ ಕನ್ನಡದ ಕೆಲ‌ಮುಖ್ಯ ಲೇಖಕರ ಪರಿಚಯ ವಾಗಲಿ ಎಂಬ ಉದ್ದೇಶ ಐದೇ ಆರಿಸಿಕೊಳ್ಳಲು ಸಾಧ್ಯವಾಯಿತು.
ಇದೇ ಬಗೆಯ ಪುಸ್ತಕಗಳು ಮತ್ತಷ್ಟು ಬರಲಿ. ನಾವು ಚಿಕ್ಕವರಿದ್ದಾಗ ಓದಿದ ಕವಿತೆಗಳಲ್ಲಿರುವ ಚಿತ್ರಗಳು‌ ಇನ್ನೂ ನೆನಪಿವೆ ಸುಂದರವಾದ ಪುಸ್ತಕಗಳು ಇವು ಕನ್ನಡದ ಅಕ್ಷರ ‌ಬಲ್ಲ ಎಲ್ಲರಿಗೂ ಮತ್ತು ಕನ್ನಡೇತರರನ್ನೂ ಆಕರ್ಷಿಸತ್ತವೆ ಎಂದರು.

Related Articles

Comments (0)

Leave a Comment