ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸುವುದಿಲ್ಲ: ಸಿಎಂ
- by Suddi Team
- June 19, 2018
- 38 Views
ಬೆಂಗಳೂರು: ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಷಯದಲ್ಲಿ ಕೆಲವೊಂದು ಸ್ಕೀಂನಲ್ಲಿ ಬದಲಾವಣೆಗೆ ಮನವಿ ಮಾಡಿದ್ದೇವೆಯೇ ಹೊರತು ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸುವುದಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಪ್ರೆಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಕಾವೇರಿ ನಿರ್ವಹಣ ಮಂಡಳಿ ರಚನೆ ವಿಚಾರದ ಬಗ್ಗೆ ಪ್ರಧಾನಿ ಬಳಿ ಚರ್ಚೆ ಮಾಡಿದ್ದೇನೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಅವೈಜ್ಞಾನಿಕವಾಗಿದೆ ಮಂಡಳಿಗೆ ಇಬ್ಬರ ಹೆಸರು ಕೊಡಲು ಹೇಳಿದ್ದರು ಆದ್ರೆ ಇನ್ನು ನಾನು ಕೊಡಲಿಲ್ಲ ನ್ಯಾಯಾಂಗ ನಿಂದನೆ ಆದರೆ ನಾನು ನೋಡಿಕೊಳ್ಳುತ್ತೇನೆ ಎಂದಿದ್ದೇನೆ,ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ ಸಂಬಂಧ
ಸುಪ್ರೀಂಕೋರ್ಟ್ ಆದೇಶವನ್ನು ನಾವು ಉಲ್ಲಂಘನೆ ಮಾಡುವುದಿಲ್ಲ,ಆದರೆ ಕೆಲವೊಂದು ಸ್ಕೀಂ ಗಳಿಗೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ ಸ್ಕೀಂ ರಚನೆ ಮಾಡಬೇಕಾದ್ರೆ ಸಂಸತ್ ನಲ್ಲಿ ಚರ್ಚೆಯಾಗಬೇಕಿದೆ ಸ್ಕೀಂ ರಚನೆ ಕೆಲವೊಂದು ಮಾರ್ಪಾಡು ಮಾಡಲು ಮನವಿ ಮಾಡಿಕೊಂಡಿದ್ದೀನಿ ಎಂದರು.
ಕಬಿನಿ ಜಲಾಶಯದಲ್ಲಿ ನೀರು ತುಂಬಿದೆ. ಜೂನ್ ನಲ್ಲೇ ಜಲಾಶಯದಲ್ಲಿ ನೀರು ತುಂಬಿದ ಹಿನ್ನಲೆಯಲ್ಲಿ ತಮಿಳುನಾಡುಗೆ ನೀರು ಬಿಡಲು ಸೂಚನೆ ನೀಡಿದ್ದೇನೆ. ಹೆಚ್ಚುವರಿ ನೀರು ಬಂದ್ರೆ ನಾವು ಶೇಖರಣೆ ಮಾಡಲು ಸಾಧ್ಯ ಇಲ್ಲ ನೀರು ಬಿಟ್ಟಿದಕ್ಕೆ ಭತ್ತ ಬೆಳೆ ನಾಶವಾಗಿದೆ, ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದರು.
ಮಹದಾಯಿ ನದಿ ನೀರು ಹಂಚಿಕೆ ವಿಚಾರ ಸಂಬಂಧ
ಕೇಂದ್ರ ಸಚಿವ ನಿತಿನ್ ಗಡ್ಕರಿ ಒಂದು ಟೀಂ ಕರೆಸಿಕೊಂಡಿದ್ರು
ಜುಲೈನಲ್ಲಿ ಅಂತಿಮ ತೀರ್ಪು ಬರಲಿದೆ ಅಂತಿಮ ತೀರ್ಪು ಬಂದ ಬಳಿಕ ನಮ್ಮ ಮುಂದಿನ ನಡೆ ಪ್ರಕಟಿಸಲಿದ್ದೇವೆ ಎಂದರು.
ಮೈತ್ರಿ ಸರ್ಕಾರ 5ವರ್ಷ ಸುಭದ್ರವಾಗಿರುತ್ತೆ 5 ವರ್ಷ ಹೇಗೆ ನಡೆಸಬೇಕು ಎಂದು ನನಗೆ ಗೊತ್ತಿದೆ, 238 ಸ್ಥಳಗಳಲ್ಲಿ ಸಾರ್ವಜನಿಕ ಭಾಷಣ ಮಾಡಿದ್ದೆ, ನಾನೊಬ್ಬನೇ ಭಾಷಣ ಮಾಡಿದ್ದೆ ನಮ್ಮ ಪಕ್ಷದಲ್ಲಿ ಯಾರು ಸ್ಟಾರ್ ಪ್ರಚಾರಕರು ಇಲ್ಲ ಆದ್ರೆ ನಿರೀಕ್ಷೆಯಷ್ಟು ಸೀಟ್ ನಮಗೆ ಬಂದಿಲ್ಲ ಸಾಕಷ್ಟು ಯೋಜನೆಗಳನ್ನ ನಾನು ಹಾಕಿಕೊಂಡಿದ್ದೇನೆ ಎಲ್ಲವನ್ನೂ ಜಾರಿಗೆ ತರುವೆ ಎಂದರು.
ರಸ್ತೆಯಲ್ಲಿ ಹೋಗಬೇಕಾದ್ರೆ ಕಸ ನೋಡಿ ನಾನೇ ತಲೆ ತಗ್ಗಿಸಿದ್ದೇನೆ.ಕಸದ ಮಾಫಿಯಾ ಏನು ಅನ್ನೋದನ್ನ ನಾನು ತಿಳಿದುಕೊಂಡಿದ್ದೇನೆ ಕಸದ ಮಾಫಿಯಾವನ್ನ ಮಟ್ಟಹಾಕಬೇಕಿದೆ ಆ ನಿಟ್ಟಿನಲ್ಲಿ ನಾವು ಹೆಜ್ಜೆ ಇಡುತ್ತೇವೆ, ಭೀಮಾತೀರದ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ
ನಿರ್ದಾಕ್ಷಿಣ್ಯ ಕ್ರಮ ತೆಗದುಕೊಳ್ಳಿ ಎಂದು ಅಧಿಕಾರಿಗಳಿಗೆ ಹೇಳಿದ್ದೀನಿ ಎಂದರು.
ನಾನು ಒಂದು ವರ್ಷ ಅಧಿಕಾರದಲ್ಲಿ ಇರುತ್ತೇನೆ ಎಂದು ಹೇಳಿಲ್ಲ
ನಾನು ಅಸಹಾಯಕತೆ ತೋರಿಸಿಲ್ಲ ಮೈತ್ರಿ ಸರ್ಕಾರದ ಬಗ್ಗೆ ಇಲ್ಲಸಲ್ಲದ ಸುದ್ದಿ ಹರಿದಾಡಿಸುತ್ತಿದ್ದಾರೆ ಈ ಅರ್ಥದಲ್ಲಿ ಲೋಕಸಭಾ ಚುನಾವಣೆವರೆಗೂ ನನ್ನನ್ನ ಟಚ್ ಮಾಡಲು ಸಾಧ್ಯ ಇಲ್ಲ ಅಂದಿದ್ದೆ ಅಷ್ಟೇ ಎಂದು ತಮ್ಮ ಹೇಳಿಕೆಯನ್ನು ಸಿಎಂ ಸಮರ್ಥಿಸಿಕೊಂಡರು.
ನೀರಾವರಿ ಯೋಜನೆಯಲ್ಲಿ ಹಣದ ಕೊರತೆ ಇಲ್ಲ ನಮ್ಮ ರಾಜ್ಯದಲ್ಲಿ ಹಣದ ಸಂಪನ್ಮೂಲ ಇದೆ ಕಾಲಮಿತಿಯೊಳಗೆ ನೀರಾವರಿ ಯೋಜನೆ ಮುಗಿಸುತ್ತೇವೆ, ಸಿಎಂ ಸಾಂದರ್ಭಿಕ ಶಿಶು ಅನ್ನೋ ಪದದ ಅರ್ಥ ಎಷ್ಟೊ ಜನರಿಗೆ ಅರ್ಥ ಆಗಿಲ್ಲ ಏನೇನೋ ವ್ಯಾಖ್ಯಾನ ಕೊಡ್ತಾ ಇದ್ದಾರೆ ಎಂದರು.
ಯಶಸ್ವಿನಿ ಯೋಜನೆಯನ್ನ ಮುಂದುವರೆಸಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ ಆದ್ರೆ ಕೇಂದ್ರ ಸರ್ಕಾರದ ಯೋಜನೆಯಡಿ ಸೇರಿಸಬೇಕೆಂಬ ಪ್ರಸ್ತಾಪ ಇದೆ ಹಾಗಾಗಿ ಎರಡು ತಿಂಗಳು ಪ್ರಾಥಮಿಕವಾಗಿ ಜಾರಿ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಒಟ್ಟಿನಲ್ಲಿ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಉನ್ನತ ಶಿಕ್ಷಣ ಇಲಾಖೆಗೆ ಸಲಹೆಗಾರರನ್ನಾಗಿ ಪ್ರೊ.ರಂಗಪ್ಪ ನೇಮಕ ಮಾಡುವ ವಿಚಾರ ಸಂಬಂಧ ಯಾವುದೇ ಪ್ರಸ್ತಾಪ ಆಗಿಲ್ಲ ನನ್ನ ಬಳಿ ಆ ರೀತಿ ಯಾವ ಹೆಸರು ಇಲ್ಲ ಮಾಧ್ಯಮಗಳಲ್ಲಿ ಈ ಬಗ್ಗೆ ನೋಡಿದ್ದೀನಿ ಅಷ್ಟೇ ಎಂದರು.
ಸಂಡೂರಿನಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದ ವಿಚಾರ ಬೆಳಕಿಗೆ ಬಂದಿದೆ.ಆದರೆ ನನ್ನ ಅವಧಿಯಲ್ಲಿ ಇದು ಆಗಿಲ್ಲ ಅಧಿಕಾರಿಗಳ ಮಟ್ಟದಲ್ಲಿ ಆಗಿದೆ ಎಂದು ತಿಳಿದಿದೆ ಈ ಬಗ್ಗೆ ಮಾಹಿತಿ ಕೇಳಿದ್ದೇನೆ,ಅಧಿಕಾರಿಗಳು ನನ್ನನ್ನ ಭೇಟಿ ಮಾಡಲಿದ್ದಾರೆ ಬಳಿಕ ಈ ಬಗ್ಗೆ ಸೂಕ್ತ ಕ್ರಮ ತೆಗದುಕೊಳ್ಳುತ್ತೇನೆ ಎಂದರು.
ಎಲ್ಲ ಸಮುದಾಯದ ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡುವ ಚಿಂತನೆ ಇದೆ ಆದರೆ 630 ಕೋಟಿ ಸರ್ಕಾರಕ್ಕೆ ಹೊರೆಯಾಗುತ್ತೆ
ಎಲ್ಲರಿಗೂ ಅನುಕೂಲವಾಗುವಂತ ನಿರ್ಧಾರ ತೆಗದುಕೊಳ್ಳುತ್ತೇವೆ ಎಂದರು.
Related Articles
Thank you for your comment. It is awaiting moderation.
Comments (0)