ಲಾಭಿ ನಡೆಸಿ ಮಂತ್ರಿಯಾಗಲು ನಾನೇನು ರಾಹುಲ್ ಗಾಂಧಿ ಸಂಬಂಧಿಯಲ್ಲ: ಜಮೀರ್

ಬೆಂಗಳೂರು: ಲಾಭಿ ಮಾಡಿ ಮಂತ್ರಿ ಸ್ಥಾನ ಪಡೆಯಲು ನಾನೇನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಂಬಂಧಿಕನಲ್ಲ,ಸಾಮರ್ಥ್ಯ ಇದ್ದರೆ ಮಾತ್ರ ನಾಯಕನಾಗಲು‌ ಸಾಧ್ಯ ಎಂದು ಮಾಜಿ ಸಚಿವ ತನ್ವೀರ್ ಸೇಟ್ ಗೆ ಆಹಾರ ಮತ್ತಹ ನಾಗರಿಕ ಸರಬರಾಜು ಸಚಿವ ಜಮೀರ್ ಅಹಮದ್ ತಿರುಗೇಟು ನೀಡಿದ್ದಾರೆ.

ನನಗೆ ಸುಮ್ಮಸುಮ್ಮನೆ ಸಚಿವ ಸ್ಥಾನ ಕೊಟ್ಟಿಲ್ಲ. ಕೇಪಬಲ್ ಇದ್ದರೆ ತಾನೇ ನಾಯಕನಾಗೋದು ನಾನು ಮೈಸೂರಿನ ಎನ್.ಆರ್.ಮೊಹಲ್ಲಾಗೆ ಬರ್ತೇನೆ ಅವರು ಅಲ್ಲಿಗೆ ಬರಲಿ
ಯಾರಿಗೆ ಜನ ಬೆಂಬಲವಿದೆ ಅನ್ನೋದು ಗೊತ್ತಾಗಲಿದೆ ಎನ್ನುವ ಮೂಲಕ ಜಮೀರ್ ಅಲ್ಪಸಂಖ್ಯಾತ ನಾಯಕರಲ್ಲ ಎಂದು ಹೇಳಿಕೆ ನೀಡಿದ್ದ ತನ್ವೀರ್ ಸೇಠ್ ಗೆ ಸವಾಲೆಸೆದರು.

ನಾನು ಹೊಂದಾಣಿಕೆ ಮಾಡಿಕೊಂಡು ಹೋಗುವ ರಾಜಕಾರಣಿಯಲ್ಲ ನಾನು ಸುಮ್ಮಸುಮ್ಮನೆ ಸಾವಾಲ್ ಹಾಕಲ್ಲ
ನನಗೆ ಸವಾಲ್ ಹಾಕಿದರೆ ಜವಾಬು ಕೊಡ್ಬೇಕಲ್ಲ ಮುಸ್ಲಿಂ ನಾಯಕ ಯಾರು ಅನ್ನೋದನ್ನ ಜನ ಗುರ್ತಿಸುತ್ತಾರೆ ನಾನೊಬ್ಬ ಸಮಾಜ ಸೇವಕ,ಸಮಾಜಸೇವೆಗೆ ಬಂದವನು ನಾನು ಇಂತದ್ದೇ ಆಗಬೇಕೆಂದು ಕೇಳುವವನಲ್ಲ ನನ್ನ ಹಣೆಯಲ್ಲಿ ದೇವರು ಬರೆದಿದ್ದ,ಅದಕ್ಕೆ ಮಂತ್ರಿಯಾದೆ ಇಲ್ಲವಾದರೆ ಸಿದ್ದರಾಮಯ್ಯಗೂ ಆಗಲ್ಲ ಪರಮೇಶ್ವರ್ ಗೂ ಆಗಲ್ಲ ದೇವರು ಬರೆದಿದ್ದರಿಂದ ಮಂತ್ರಿಯಾಗಿದ್ದೇನೆ ಎಂದರು.

ಗಿನ್ನೀಸ್ ರೆಕಾರ್ಡ್ ಮಾಡುವೆ:

ಸಚಿವನಾದರೆ ಗಿನ್ನೆಸ್ ರೆಕಾರ್ಡ್ ಮಾಡ್ತೇನೆ ಅಂತ ಹೇಳಿದ್ದು ನಿಜ.ನನ್ನ ಹೇಳಿಕೆಗೆ ಈಗಲೂ ಅದಕ್ಕೆ ನಾನು ಬದ್ಧನಾಗಿದ್ದೇನೆ. ನನಗೆ ಸ್ವಲ್ಪ ಸಮಯ ಕೊಡಿ ಮಾಡಿ ತೋರಿಸುತ್ತೇನೆ ಎಂದು ಗಿನ್ನೀಸ್ ರೆಕಾರ್ಡ್ ಮಾಡುವ ಆಶಯ ವ್ಯಕ್ತಪಡಿಸಿದರು.

ದೊಡ್ಡ ಗಾಡಿಲಿ ಓಡಾಡಿದ್ರೆ ತಾನೆ ಮಂತ್ರಿ ಅನ್ನೋದು:

ಮಾಜಿ ಸಿಎಂ ಬಳಸುತ್ತಿದ್ದ ಫಾರ್ಚೂನರ್ ಕಾರು ನೀಡುವಂತೆ ಕೇಳಿದ್ದೆ.ನಾನು ದೊಡ್ಡ ಗಾಡಿಯಲ್ಲೇ ಓಡಾಡೋದು ಹೀಗಾಗಿ ಅವರ ಹಳೆಯ ಗಾಡಿ ಕೇಳಿದ್ದೆ ಅಷ್ಟೇ ದೊಡ್ಡಗಾಡಿಯಲ್ಲಿ ಓಡಾಡಿದ್ರೆ ತಾನೇ ಮಂತ್ರಿ ಅನ್ನೋದು ಕುಮಾರಸ್ವಾಮಿಯವರು ಬಹಳ ಪಾಪ್ಯುಲರ್ ಅದಕ್ಕೆ ಅವರು ಇನ್ನೂ ಸರ್ಕಾರಿ ಕಾರು ಪಡೆದಿಲ್ಲ
ನನ್ನನ್ನ ಯಾರು ಗುರುತಿಸುತ್ತಾರೆ ಅದಕ್ಕೆ ದೊಡ್ಡ ಗಾಡಿಯಲ್ಲಿ ಓಡಾಡಿದ್ರೆ ತಾನೇ ಜನರಿಗೆ ಗೊತ್ತಾಗೋದು ಎಂದು ದೊಡ್ಡ ಗಾಡಿ ಕೇಳಿದ್ದೆ ಎಂದು ಜಮೀರ್ ಹಾಸ್ಯದ ಶೈಲಿಯಲ್ಲಿ ಸರ್ಕಾರಿ ಕಾರಿನ ಬೇಡಿಕೆಯನ್ನು ಸಮರ್ಥಿಸಿಕೊಂಡರು.

ಹಜ್ ಖಾತೆ ನೀಡಿದ್ದಕ್ಕೆ ರೋಷನ್ ಬೇಗ್ ಅಸಮಾಧಾನ ಕುರಿತು ಮಾತನಾಡಿದ ಜಮೀರ್ ಅಹಮದ್, ಎಲ್ಲರಿಗೂ ಅಸಮಾಧಾನ ಇರುತ್ತದೆ ರೋಷನ್ ಬೇಗ್ ಹಿರಿಯ ನಾಯಕರು ಅವರು ಹಜ್ ಖಾತೆ ಕೇಳೋದ್ರಲ್ಲಿ ತಪ್ಪೇನಿಲ್ಲ ಹೊಸಬರಿಗೆ ಕೊಡೋಣ ಅಂತ ನಮ್ಮ ಹೈಕಮಾಂಡ್ ನೀಡಿದೆ ಯಾರು ಕೇಪಬಲ್ ಇರ್ತಾರೋ ಅವರಿಗೆ ನೀಡಿದ್ದಾರೆ ನಾನು ಉಮ್ರಾಗೆ ಹೋಗುವ ಮೊದಲು ಅವರ ಭೇಟಿಗೆ ಪ್ರಯತ್ನಿಸಿದ್ದೆ ಅವರು ಭೇಟಿಗೆ ಸಿಕ್ಕಿಲ್ಲ ಎಂದರು.

ದುಬಾರಿ ಬೆಲೆಗೆ ರಾಗಿ ಖರೀದಿ ಪರಿಶೀಲನೆ:

3 ಕೋಟಿ ಬಿಪಿಎಲ್ ಕಾರ್ಡ್ ಬಗ್ಗೆ ಸಮಸ್ಯೆಯಾಗಿತ್ತು 45 ಲಕ್ಷ ಕಾರ್ಡ್ ಪೆಂಡಿಂಗ್ ಬಗ್ಗೆ ಚರ್ಚೆಯಾಗಿದೆ. ಕಾರ್ಡ್ ದಾರರಿಗೆ ರಾಗಿ ನೀಡುತ್ತಿದ್ದೇವೆ ,7 ಕೆ.ಜಿಯಲ್ಲಿ 5 ಅಕ್ಕಿ,2 ಕೆಜಿ ರಾಗಿಯನ್ನು ಹಳೆ ಮೈಸೂರು ಭಾಗದಲ್ಲಿ ನೀಡುತ್ತಿದ್ದೇವೆ.ರೈತರಿಂದಲೇ ನೇರವಾಗಿ 25.47ರೂ.ಗೆ ರಾಗಿ ಖರೀದಿ ಮಾಡುತ್ತಿದ್ದೇವೆ ಆದರೆ ಮಾರುಕಟ್ಟೆಯಲ್ಲಿ 19 ರೂ.ಗೆ ಸಿಗಲಿದೆ ಹೀಗಾಗಿ‌ ಹೆಚ್ಚುವರಿ ಹಣ ಯಾಕೆ ಫೋಲು ಮಾಡಬೇಕು ಇಲ್ಲಾ ಅಧಿಕಾರಿಗಳು ಇದರಲ್ಲಿ ಮೋಸ ಮಾಡುತ್ತಿದ್ದಾರಾ ಇದರ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದೇವೆ ಎಂದರು.

Related Articles

Comments (0)

Leave a Comment