ಮಾನವೀಯತೆ ಮೆರೆದ ಸುಧಾಕರ್

ಬೆಂಗಳೂರು : ಊರಿಗೆ ಹಿಂತಿರುಗಲು ಆಗಮಿಸಿದ್ದ ಒಡಿಶಾ ಮೂಲದ ಕಾರ್ಮಿಕನೊಬ್ಬ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೂರ್ಛೆ ರೋಗದಿಂದ ಒದ್ದಾಡುತ್ತಿದ್ದಾಗ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕಳುಹಿಸಿಕೊಟ್ಟು ಮಾನವೀಯತೆ ಮೆರೆದ ಘಟನೆ ಶನಿವಾರ ಅರಮನೆ ಮೈದಾನದಲ್ಲಿ ನಡೆಯಿತು.’

ಸಚಿವ ಸುಧಾಕರ್ ಅವರು ತಾವು ಉಸ್ತುವಾರಿ ವಹಿಸಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಾನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಶನಿವಾರ ಬೆಳಗ್ಗೆ ಆ ಮಾರ್ಗದಲ್ಲಿ ತೆರಳುತ್ತಿದ್ದರು. ಅರಮನೆ ಮೈದಾನದ ರಸ್ತೆ ಬದಿ ಭಾರಿ ಸಂಖ್ಯೆಯಲ್ಲಿ ಈಶಾನ್ಯ ರಾಜ್ಯದವರು ಜಮಾಯಿಸಿದ್ದನ್ನು ಕಂಡು ಅಲ್ಲಿಗೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದರು.

ಈ ಸಂದರ್ಭದಲ್ಲಿ ಒಡಿಶಾ ಮೂಲದ ಎರ್ಷಾದ್ ಎಂಬಾತ ದಿಢೀರ್ ಎಂದು ಕುಸಿದು ಬಿದ್ದು ಒದ್ದಾಡತೊಡಗಿದ. ನೂರಾರು ಮಂದಿ ಅವರ ರಾಜ್ಯದವರೇ ಇದ್ದರೂ ಯಾರೊಬ್ಬರು ನೆರವಿಗೆ ಧಾವಿಸಲಿಲ್ಲ. ಅಲ್ಲಿಯೇ ಇದ್ದ ಸಚಿವ ಸುಧಾಕರ್ ಅವರು ತಕ್ಷಣ ಆತನಲ್ಲಿಗೆ ತೆರಳಿ ಆತನನ್ನು ಪರೀಕ್ಷಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿದರು. ತಕ್ಷಣ ಪೊಲೀಸ್ ಇಲಾಖೆ ವಾಹನದಲ್ಲಿ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

Related Articles

Comments (0)

Leave a Comment