ಬಿಬಿಎಂಪಿ ಐದು ಭಾಗ,ಮೇಯರ್ ಆಯ್ಕೆ ಜನರ ಕೈಗೆ: ತಜ್ಞರ ಸಮಿತಿ ಶಿಫಾರಸ್ಸು
- by Suddi Team
- June 28, 2018
- 32 Views
ಫೋಟೋ ಕೃಪೆ :ಟ್ವಿಟ್ಟರ್
ಬೆಂಗಳೂರು:ಬಿಬಿಎಂಪಿಯನ್ನು ಐದು ಕಾರ್ಪೋರೇಷನ್ ಗಳಾಗಿ ವಿಭಜಿಸಬೇಕು ಹಾಗೂ ಬೆಂಗಳೂರಿನ ಸಮಗ್ರತೆ ಕಾಪಾಡಲು ಗ್ರೇಟರ್ ಬೆಂಗಳೂರು ಕಾರ್ಪೋರೇಷನ್ ಅಡಿಯಲ್ಲಿ ತರಬೇಕು ಎಂದು ಬಿಬಿಎಂಪಿ ಪುನರ್ ವಿಂಗಡಣಾ ತಜ್ಞರ ಸಮಿತಿ ಇಂದು ಸರ್ಕಾರಕ್ಕೆ ವರದಿ ಸಲ್ಲಿಸಿತು.
ನಿವೃತ್ತ ಐಎಎಸ್ ಅಧಿಕಾರಿಗಳಾದ ಬಿ.ಎಸ್.ಪಾಟೀಲ್,ಸಿದ್ದಯ್ಯ,ರವೀಶ್ಚಂದ್ರ ನೇತೃತ್ವದ ತಜ್ಞರ ಸಮಿತಿ ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆ ಸಂಬಂಧ ಅಂತಿಮ ವರದಿ ಸಲ್ಲಿಕೆ ಮಾಡಿದೆ.
ಗ್ರೇಟರ್ ಕಾರ್ಪೋರೇಷನ್-ನಗರಪಾಲಿಕೆ-ಕಾರ್ಪೋರೇಟರ್ ನೇತೃತ್ವದ ವಾರ್ಡ್ ಸಮಿತಿಯನ್ನು ಒಳಗೊಂಡ ತ್ರಿ ಟೈರ್ ವ್ಯವಸ್ಥೆಯನ್ನು ಜಾರಿಗೊಳಿಸಲು ತಜ್ಞರ ಸಮಿತಿ ಶಿಫಾರಸ್ಸು ಮಾಡಿದ್ದು,ಬೆಂಗಳೂರು ಆಡಳಿತಕ್ಕೆ ಪ್ರತ್ಯೇಕವಾದ ಕಾಯ್ದೆ ರೂಪಿಸಬೇಕು ಜತೆಗೆ ಕಂದಾಯ ಸಂಗ್ರಹ ವಿಷಯದಲ್ಲೂ ಬದಲಾವಣೆ ಅಗತ್ಯ.5-6 ಸಾವಿರ ಕೋಟಿ ಕಂದಾಯ ಸಂಗ್ರಹದ ಸಾಮರ್ಥ್ಯ ಹೊಂದಿರುವ ಬಿಬಿಎಂಪಿಯಲ್ಲಿಯಲ್ಲಿ ಶೇ.40ರಷ್ಟೂ ಕಂದಾಯ ಸಂಗ್ರಹವಾಗುತ್ತಿಲ್ಲ.ಹಳೆ ನಗರ ಪ್ರದೇಶದಲ್ಲಿ 30000 ಜನಸಂಖ್ಯೆಗೆ ಅನುಗುಣವಾಗಿ
ವಾರ್ಡ್ ಪುನರ್ ವಿಂಗಡಣೆ ಮಾಡಿ 400 ವಾರ್ಡ್ ರಚನೆಗೂ ಸಮಿತಿ ಶಿಫಾರಸ್ಸು ಮಾಡಿದೆ.
ಬಿಬಿಎಂಪಿ ಅಧಿಕಾರಿಗಳ ನೇಮಕಾತಿ ವಿಷಯದಲ್ಲೂ ಸುಧಾರಣಾ ಕ್ರಮಗಳನ್ನು ಶಿಫಾರಸ್ಸು ಮಾಡಿದೆ.
- ಪೌರ ಕಾರ್ಮಿಕ ಹುದ್ದೆ ಬಿಟ್ಟು ಉಳಿದೆಲ್ಲಾ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ ಕಡ್ಡಾಯ.
- ಇಲಾಖಾ ನೇರ ನೇಮಕಾತಿ ಬದಲು ಹೊರಗುತ್ತಿಗೆ ಸಂಸ್ಥೆ ಗಳ ಮೂಲಕ ನೇಮಕಾತಿ ಮಾಡಿಕೊಳ್ಳಬೇಕು.
- ಹೊಸದಾಗಿ ನೇಮಕಗೊಂಡವರಿಗೆ ಆರು ತಿಂಗಳ ಒಳಗಾಗಿ ಆಡಳಿತ ತರಬೇತಿ ನೀಡಬೇಕು.
- ಪ್ರತಿಯಿಂದು ಸ್ಥರಕ್ಕೂ ನಿಗದಿತ ವಿದ್ಯಾರ್ಹತೆ ಕಡ್ಡಾಯ.
ಗ್ರೇಟರ್ ಬೆಂಗಳೂರು ಅಥಾರಿಟಿಗೆ ನೇರವಾಗಿ ಜನರಿಂದಲೇ ಮೇಯರ್ ಆಯ್ಕೆ ಮಾಡುವ ಅಧಿಕಾರ ಹಾಗೂ ಮೇಯರ್ ಅಧಿಕಾರಾವಧಿಯನ್ನು ಐದು ವರ್ಷಗಳಿಗೆ ನಿಗದಿ ಮಾಡುವಂತೆಯೂ ತಜ್ಞರ ಸಮಿತಿ ಸಲಹೆ ನೀಡಿದೆ.
ವರದಿ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಎಚ್ಡಿಕೆ, ಬಿಬಿಎಂಪಿ ಪುನರ್ ವಿಂಗಡಣಾ ಸಮಿತಿ ಇಂದು ಅಂತಿಮ ವರದಿ ಸಲ್ಲಿಸಿದೆ.ವರದಿಯನ್ನು ಪೂರ್ಣ ಅಧ್ಯಯನ ಮಾಡಿದ ಬಳಿಕ ಬಿಬಿಎಂಪಿ ವಿಭಜನೆ ಬೇಕೋ ಬೇಡವೋ ಎಂಬುದನ್ನು ತೀರ್ಮಾನಿಸುತ್ತೇವೆ ಎಂದರು.
Related Articles
Thank you for your comment. It is awaiting moderation.
Comments (0)