ಭಾನುವಾರದ ಕರ್ಫ್ಯೂನಿಂದ ಮದುವೆಗಳಿಗೆ ವಿನಾಯಿತಿ
- by Suddi Team
- May 21, 2020
- 144 Views
ಬೆಂಗಳೂರು: ಕೊರೋನಾ ಲಾಕ್ ಡೌನ್ ಸಡಿಲ ಬಳಿಕ ರಾಜ್ಯ ಸರ್ಕಾರ ಭಾನುವಾರ ಕರ್ಫ್ಯೂ ಘೋಷಿಸಿದೆ. ಆದ್ರೆ ಕರ್ಪ್ಯೂನಿಂದ ಮದುವೆ ಸಮಾರಂಭಗಳಿಗೆ ದೊಡ್ಡ ತೊಡಕಾಗಿತ್ತು. ಇದನ್ನರಿತ ಸರ್ಕಾರ ಇದೀಗ ಭಾನುವಾರದ ಪೂರ್ಣ ಲಾಕ್ ಡೌನ್ ನಲ್ಲಿ ಮದುವೆಗಳಿಗೆ ವಿನಾಯಿತಿ ನೀಡಿದೆ.
ಮದುವೆ ಸಮಾರಂಭಗಳನ್ನ ವಿಶೇಷ ಪ್ರಕರಣವೆಂದು ಪರಿಗಣಿಸಿ ವಿನಾಯಿತಿ ಘೋಷಿಸಿದ ಸರ್ಕಾರ. ಮದುವೆಗಳು ಪೂರ್ವ ನಿರ್ಧರಿತ ಕಾರ್ಯಕ್ರಮಗಳು. ಈ ಹಿಂದೆಯೇ ಮದುವೆ ಕಾರ್ಯಕ್ರಮಗಳಿಗೆ ದಿನಾಂಕ ನಿಗದಿಯಾಗಿರುತ್ತೆ. ಅದ್ರಿಂದ ಭಾನುವಾರ ಮದುವೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದೆ.
ಮದುವೆಯಲ್ಲಿ ಗರಿಷ್ಠ 50 ಜನ ಮಾತ್ರ ಭಾಗವಹಿಸುವ ನಿಯಮ ಕಡ್ಡಾಯ ಪಾಲನೆಗೆ ಸೂಚನೆ ನೀಡಲಾಗಿದೆ. ಸಾಮಾಜಿಕ ಅಂತರ ಪಾಲನೆಯೊಂದಿಗೆ ಸರಳ ವಿವಾಹಕ್ಕೆ ಸರ್ಕಾರದ ಆದೇಶಿಸಿದೆ. ಈ ಹಿಂದಿನ ಆದೇಶ ಮಾರ್ಪಡಿಸಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಟಿ ಕೆ ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
Related Articles
Thank you for your comment. It is awaiting moderation.



Comments (0)