ಶ್ರೀರಂಗಪಟ್ಟಣ ಶಾಸಕರ ಬೆಂಬಲಿಗರಿಂದ ಹಲ್ಲೆ: ಮನನೊಂದ ಯುವಕ ನೇಣಿಗೆ ಶರಣು!
- by Suddi Team
- August 6, 2018
- 74 Views

ಮಂಡ್ಯ: ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರ ಹಲ್ಲೆಯಿಂದ ಮನನೊಂದು ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಶರಣಾಗಿದ್ದಾನೆ.
ಶಾಸಕರ ವಿರುದ್ದ ಮಾತನಾಡಿದ ಮಾಜಿ ಶಾಸಕನ ಬೆಂಬಲಿಗ ಗೊಬ್ಬರಗಾಲ ಗ್ರಾಮದ ನಾಗೇಂದ್ರ(೨೮) ಹಲ್ಲೆಯಿಂದ ಮನನೊಂದು ಆತ್ಮಹತ್ಯೆ ಶರಣಾಗಿದ್ದು, ಯುವಕನ ಸಾವಿನಿಂದ ಗೊಬ್ಬರಗಾಲ ಗ್ರಾಮದಲ್ಲಿ ಉಧ್ವಿಗ್ನ ವಾತವರಣ ನಿರ್ಮಾಣವಾಗಿದೆ.
ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರಾದ ದಿಲೀಪ, ರವಿ, ಮಧು, ಸೇರಿದಂತೆ 7 ಜನರ ವಿರುದ್ಧ ಅರೆಕೆರೆ ಪೊಲೀಸರು ತಡರಾತ್ರಿ ಪ್ರಕರಣ ದಾಖಲಿಸಿದ್ದು, ಆತ್ಮಹತ್ಯೆಗೆ ಪ್ರಚೋದನೆಯಡಿ ipc ಸೆಕ್ಷನ್ 306 ಅಡಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಹಿನ್ನಲೆಯಲ್ಲಿ ಗ್ರಾಮಕ್ಕೆ ಒಂದು ಡಿ.ಆರ್. ಪೊಲೀಸ್ ತುಕುಡಿ ನಿಯೋಜನೆ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆ ರವಾನಿಸಲಾಗಿದೆ.
Related Articles
Thank you for your comment. It is awaiting moderation.
Comments (0)