ಕೃಷಿ ವಿ ವಿ ಖಾಸಗಿಕರಣ ತಪ್ಪಿಸಲು ವಿ ವಿ ಕಾಯ್ದೆಗೆ ಸೂಕ್ತ ತಿದ್ದುಪಡಿ: ಸಿಎಂ ಭರವಸೆ

ಬೆಂಗಳೂರು: ಕೃಷಿ ವಿಶ್ವವಿದ್ಯಾಲಯ ಖಾಸಗಿಕರಣ ತಪ್ಪಿಸಲು ವಿ ವಿ ಕಾಯ್ದೆಗೆ ಸೂಕ್ತ ತಿದ್ದುಪಡಿ ತರವುದಾಗಿ ಮುಖ್ಯ ಮಂತ್ರಿ ಹೆಚ್. ಡಿ. ಕುಮಾರಸ್ವಾಮಿರವರು ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯದ ಖಾಸಗೀಕರಣ ವಿರೋಧಿಸಿ ಕೃಷಿ ವಿಶ್ವವಿದ್ಯಾಲಯದ ವಿಧ್ಯಾರ್ಥಿಗಳು ಇಂದು ಬೆಳಗ್ಗೆ ಟೌನ್ ಹಾಲ್ ಎದುರು ಪ್ರತಿಭಟನೆ ನಡೆಸುತ್ತಿದ್ದರು. ಬೆಳಿಗ್ಗೆ ಮನೆಯಿಂದ ಹೊರಟ ಮುಖ್ಯ ಮಂತ್ರಿಗಳು ಟೌನ್ ಹಾಲ್ ಬಳಿ ಇಳಿದು ಸಂಜೆ ಕೃಷಿ ಸಚಿವರು, ಕೃಷಿ ಇಲಾಖೆ ಕಾರ್ಯದರ್ಶಿ ಮತ್ತು ವಿಧ್ಯಾರ್ಥಿಗಳನ್ನು ಕರೆಸಿ ಮಾತುಕತೆ ನಡೆಸುವ ಭರವಸೆ ನೀಡಿದರು. ಸಂಜೆ 5 ಘಂಟೆಗೆ ಕೃಷಿ ಸಚಿವ ಶಿವಶಂಕರ್ ರೆಡ್ಡಿ, ಅಧಿಕಾರಿಗಳು ಹಾಗೂ ವಿಧ್ಯಾರ್ಥಿಗಳೊಂದಿಗೆ ಚರ್ಚಿಸಿದರು. ಕೃಷಿ ವಿವಿ ಕಾಯ್ದೆ ತಿದ್ದುಪಡಿಗೆ ಕೂಲಂಕಷ ಪರಿಶೀಲನೆ ನಡೆಸುವಂತೆ ಮುಖ್ಯ ಮಂತ್ರಿ ಸೂಚಿಸಿದರು.

ಮುಖ್ಯಮಂತ್ರಿಗಳ ಭೇಟಿ ಬಳಿಕ ಮಾತನಾಡಿದ ನಟ ಚೇತನ್, ನಮ್ಮ ಮನವಿಯನ್ನ ಸಿಎಂ ಹಾಗೂ ಕೃಷಿ ಸಚಿವರು ಆಲಿಸಿದ್ರು. ಕೃಷಿ ವಿವಿಯನ್ನ ಖಾಸಗಿಯಾಗಿಸೋದು ಬೇಡ ಅನ್ನೋದೇ ನಮ್ಮ ಮೂಲ ಬೇಡಿಕೆ. ಸಿಎಂ ನಮ್ಮ ಬೇಡಿಕೆಗೆ ಸಹಮತ ವ್ಯಕ್ತಪಡಿಸಿ ಪರಿಶೀಲಿಸಿ ಮುಂದುವರಿಯೋ ಭರವಸೆ ನೀಡಿದ್ದಾರೆ ಎಂದು ಹೇಳಿದರು.

Related Articles

Comments (0)

Leave a Comment