ಅನೇಕರಿಗೆ ತೇಜಸ್ವಿ ಸ್ಪೂರ್ತಿ, ನಾನೂ ಅವರೊಟ್ಟಿಗೆ ಮೀನು ಹಿಡಿಯಲು ಹೋಗುತ್ತಿದ್ದೆ: ಸಿದ್ದರಾಮಯ್ಯ
- by Suddi Team
- September 8, 2021
- 16 Views

ಬೆಂಗಳೂರು: ಪೂರ್ಣಚಂದ್ರ ತೇಜಸ್ವಿ ಎಂ.ಎ ಕನ್ನಡ ಮಾಡಿದ್ದರು ಆದರೆ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರಬಹುದಿತ್ತು ಆದರೆ ಅವರು ಪರಿಸರ ಪ್ರೇಮಿಯಾದರು ಕುವೆಂಪು ಮಗ ಎಂದು ತೇಜಸ್ವಿ ಅನುಕೂಲ ಪಡೆಯಲಿಲ್ಲ ಲೇಖಕನಾಗಿ ವಿಶಿಷ್ಠವಾದ ರೀತಿಯ ಸಾಹಿತ್ಯ ಸೃಷ್ಠಿ ಪ್ರಕೃತಿ ಬಗ್ಗೆ ಸಾಕಷ್ಟು ಲೇಖನ ಬರೆದರು ಈಗಲೂ ಅನೇಕರಿಗೆ ತೇಜಸ್ವಿ ಸ್ಪೂರ್ತಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ರು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದ ಅಂಗವಾಗಿ ಚಿತ್ರಕಲಾ ಪರಿಷತ್ತಿನಲ್ಲಿ ಇಂದು ಆಯೋಜಿಸಿದ್ದ ತೇಜಸ್ವಿ ಜೀವಲೋಕ ಹಾಗೂ ಕುರಿಂಜಿ ಲೋಕ ಸಾಕ್ಷ್ಯಚಿತ್ರ, ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆಯನ್ನು ಸಿದ್ದರಾಮಯ್ಯ ಅವರು ನೆರವೇರಿಸಿದರು. ನಂತರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪೂರ್ಣಚಂದ್ರ ತೇಜಸ್ವಿಗೆ ಮೈಸೂರಿನಲ್ಲಿ ಗೆಳೆಯರಿದ್ದರು, ಕೆ.ರಾಮದಾಸ್ ಮನೆಗೆ ಅವರು ಬರುತ್ತಿದ್ದರು, ಅವರ ಮೂಡಿಗೆರೆಯ ತೋಟದ ಮನೆಗೆ ಒಮ್ಮೆ ಹೋಗಿದ್ದೆ ಅನೇಕ ಸಲ ನನ್ನನ್ನು ಆಹ್ವಾನಿಸಿದ್ದರು. ಬೆಳಗ್ಗೆಯಿಂದ ರಾತ್ರಿಯವರೆಗೂ ನಾನು ತಂಗಿದ್ದೆ ಸಾಹಿತಿ ಮಾತ್ರವಲ್ಲ ಮಹಾನ್ ಪರಿಸರ ಪ್ರೇಮಿ
ಉತ್ತಮ ಛಾಯಾಗ್ರಾಹಕ, ಮೀನು ಹಿಡಿಯುವ ಹವ್ಯಾಸ ಅವರದ್ದು, ಮೀನು ಸಿಗಲಿ, ಸಿಗದಿರಲಿ ಗಂಟೆಗಟ್ಟಲೇ ಕೂತಿರುತ್ತಿದ್ದರು. ನನ್ನನ್ನು ಕೂಡ ಮೀನು ಹಿಡಿಯಲು ಕರೆದುಕೊಂಡು ಹೋಗುತ್ತಿದ್ದರು. ಒಂದು ಮೀನು ಸಿಕ್ಕರೂ ಸಾಕಷ್ಟು ಖುಷಿಪಡುತ್ತಿದ್ದರು ಎಂದ್ರು.
ನಾನು ಕೂಡ ಬಾಟನಿ ಸ್ಟುಡೆಂಟ್.ಬಾಟನಿ, ಜೂವಲಾಜಿ ಸಬ್ಜೆಕ್ಟ್ ನಂದು ನಂತರ ಕಾನೂನು ಅಭ್ಯಾಸ ಮಾಡಿದೆ ಈಗಲೂ SSLCವರೆಗೆ ಮಾತ್ರ ನೆನಪಿದೆ. ಬಿಎಸ್ಸಿ ಬಗ್ಗೆ ಅಷ್ಟೊಂದು ನೆನಪಿಲ್ಲ ನಾನು ಬಾಟನಿ MSc ಓದಬೇಕೆಂದಿದ್ದೆ ಬಾಟನಿ MSc ಸೀಟು ಸಿಗಲಿಲ್ಲ ನಂತರ ರಾಜಕೀಯಕ್ಕೆ ಬಂದುಬಿಟ್ಟೆ ಪ್ರೊ.ನಂಜುಂಡಸ್ವಾಮಿ ಪರಿಚಯ ಆಗಿರದಿದ್ದರೆ ನಾನು ರಾಜಕೀಯಕ್ಕೆ ಬರುತ್ತಿರಲಿಲ್ಲ ಲಾಯರ್ ಆಗಿರುತ್ತಿದ್ದೆ, ಅದೇ ಕೆಲಸ ಮಾಡುತ್ತಿದ್ದೆ ಎಂದ್ರು.
ರಾಜಕಾರಣದ ಬಗ್ಗೆ ಅವರು ಮಾತನಾಡುತ್ತಿರಲಿಲ್ಲ ರಾಜಕಾರಣಿಗಳ ಬಗ್ಗೆ ಅವರಿಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ ಆದರೆ ನನ್ನ ಬಗ್ಗೆ ವೈಯಕ್ತಿಕವಾಗಿ ನನ್ನ ಬಗ್ಗೆ ಪ್ರೀತಿ ಅಭಿಮಾನ ಇತ್ತು, ದೇವನೂರು ಮಹಾದೇವ, ನಾನು ನಂಜುಂಡಸ್ವಾಮಿ ಜೊತೆ ಇದ್ದೆವು ಮಹಾದೇವ ನಾನು ಸಮಕಾಲೀನರು ಯು.ಆರ್.ಅನಂತಮೂರ್ತಿ, ತೇಜಸ್ವಿ, ನಂಜುಂಡಸ್ವಾಮಿ, ಮಲ್ಲೇಶ್, ಶ್ರೀರಾಮ್, ಕೆ.ರಾಮದಾಸ್ ಅವರ ಪ್ರಭಾವ ನನ್ನ ಮೇಲೆ ಬೀರಿತು ಪ್ರತಿ ಸೋಮವಾರ ನಾವೆಲ್ಲ ಎಲ್ಲ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು ಅದು ನನ್ನ ಬದುಕಿಗೆ ಸಾಕಷ್ಟು ಅನುಭವ ನೀಡಿದೆ ಬೆಂಕಿಜ್ವಾಲೆಗಿಂತ ಮನುಷ್ಯನೇ ಪರಿಸರಕ್ಕೆ ಅಪಾಯ ಮನುಷ್ಯನಿಂದ ಪರಿಸರಕ್ಕೆ ರಕ್ಷಣೆ ಸಿಗಬೇಕಿದೆ ಎಂದ್ರು.
Related Articles
Thank you for your comment. It is awaiting moderation.
Comments (0)