ತೋಟದ ಮನೆಯಲ್ಲೇ ಎಚ್ಡಿಕೆ ಜನತಾದರ್ಶನ

ಬೆಂಗಳೂರು: ಮುಖ್ಯಮಂತ್ರಿ ಆಗಿದ್ದಾಗ ಜನತಾದರ್ಶನದ ಮೂಲಕ ಮನೆ ಮಾತಾಗಿದ್ದ ಎಚ್‌ಡಿ ಕುಮಾರಸ್ವಾಮಿ ಮತ್ತೆ ಅದೇ ಹಾದಿಗೆ ಮರಳುತ್ತಿದ್ದಾರೆ.ಮಾಜಿ ಸಿಎಂ ಆಗಿಯೂ ಜನತಾದರ್ಶನ ಮಾಡಿ ಜನರ ಕಷ್ಟ ಕೇಳಲಿದ್ದಾರೆ.ಅದಕ್ಕಾಗಿ ತೋಟದ ಮನೆಯನ್ನೇ ಜನತಾ ದರ್ಶನ ಸ್ಥಳವನ್ನಾಗಿ ಪರಿವರ್ತನೆ ಮಾಡಿದ್ದು ಜನರಿಗೆ ಆಹ್ವಾನ ನೀಡಿದ್ದಾರೆ.

ರಾಮನಗರ ಜಿಲ್ಲೆ ಬಿಡದಿ ಸಮೀಪ ಇರುವ ಕೇತಗಾನಹಳ್ಳಿಯ ನನ್ನ ತೋಟದ ಮನೆಯಲ್ಲಿ ಕಳೆದ ಆರು ತಿಂಗಳಿಂದ ವಾಸ್ತವ್ಯ ಹೂಡಿದ್ದೇನೆ. ನನ್ನ ಹೊಲ ಮತ್ತು ತೋಟದ ಕೃಷಿಯನ್ನು ಇಸ್ರೇಲ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇನೆ. ನನ್ನ ಭೇಟಿಗೆ ರಾಜ್ಯದ ನಾನಾ ಭಾಗಗಳಿಂದ ನಮ್ಮ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳು ಆಗಮಿಸುತ್ತಿದ್ದಾರೆ. ಈ ಮೂಲಕ ‌ನನ್ನ ವಿನಮ್ರ ಮನವಿಯೆಂದರೆ, ಬೆಳಗ್ಗೆ 8.30 ರಿಂದ 10.30 ಗಂಟೆಯವರೆಗೆ ನನ್ನ ತೋಟದ ಮನೆಯಲ್ಲಿ ಭೇಟಿಯಾಗಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಭಾನುವಾರ ಹೊರತುಪಡಿಸಿ, ಉಳಿದ ದಿನಗಳಲ್ಲಿ ಈ ಸಮಯದಲ್ಲಿ ಬಂದು ನನ್ನನ್ನು ಭೇಟಿ ಮಾಡಬಹುದು ಎಂದು ತಿಳಿಸಿದ್ದಾರೆ.

ಸಾರ್ಜನಿಕರು ನನ್ನನ್ನು ಭೇಟಿ ಮಾಡುವ ಸದುದ್ದೇಶಕ್ಕಾಗಿಯೇ ನನ್ನ ತೋಟದ ಮನೆಯಲ್ಲಿ ಪುಟ್ಟ ಕಚೇರಿಯೊಂದನ್ನು ಆರಂಭಿಸಿದ್ದೇನೆ. ಈ ದಿನ (5.6.2021) ಕಚೇರಿಗೆ ಔಪಚಾರಿಕವಾಗಿ ಪೂಜೆ ನೆರವೇರಿಸಿದ್ದೇನೆ.
ಇದನ್ನು ತಮ್ಮ ಅವಗಾಹನೆಗೆ ತರುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Related Articles

Comments (0)

Leave a Comment