ಕುಮಾರಣ್ಣನವರ ವರ್ಚಸ್ಸು ಕುಗ್ಗಿಸಲು ವಿರೋಧಿ ಬಣಗಳು ಸೃಷ್ಟಿಯಾದವು: ನಿಖಿಲ್
- by Suddi Team
- January 17, 2021
- 103 Views
ಮಂಡ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಜಿಲ್ಲೆಯ ಶಾಸಕರ ಒತ್ತಾಯ ಮತ್ತು ಪ್ರೀತಿಗೆ ಮಣಿದು. ನಾನು ದೆಹಲಿಗೆ ಹೋಗಿ ಮೆರೆಯಬೇಕಿರಲಿಲ್ಲ. ಆದರೆ, ನನ್ನು ನಂಬಿ ಕೆಲವು ನಿಷ್ಠಾವಂತ ಕಾರ್ಯಕರ್ತರು ಮನೆ-ಮಠ ಕಳೆದುಕೊಂಡಿದ್ದಕ್ಕೆ ತೀವ್ರ ನೋವಿದೆ ಎಂದು ನಿಖಿಲ್ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ರು.
ಮಳವಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಬೆಂಬಲಿತ ನೂತನ ಗ್ರಾಮಪಂಚಾಯಿತಿ ಅಭ್ಯರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಭಾವುಕರಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಈ ಮಾತನ್ನ ಹೇಳಿದರು.
ನಾನು ಮಂಡ್ಯ ಅಭ್ಯರ್ಥಿಯಾಗಿದ್ದು ಸ್ಥಳೀಯ ಶಾಸಕರು, ಮುಖಂಡರ ಪ್ರೀತಿ, ವಿಶ್ವಾಸಕ್ಕೆ ಮಣಿದು. ಚುನಾವಣೆಗೆ ಸ್ಪರ್ಧಿಸುವ ಮೊದಲು ಮಂಡ್ಯ ಕ್ಷೇತ್ರದ ಜೊತೆ ಅಷ್ಟು ಒಡನಾಟ ಇರಲಿಲ್ಲ. ಹಾಗೆ ನನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದವರಿಗೂ ಜಿಲ್ಲೆಯಲ್ಲಿ ಅಷ್ಟು ಜನ ಸಂಪರ್ಕ ಇರಲಿಲ್ಲ. ಆದರೆ, ಕುಮಾರಣ್ಣನವರ ವರ್ಚಸ್ಸು ಕುಗ್ಗಿಸಲು ವಿರೋಧಿ ಬಣ ಸೃಷ್ಟಿಯಾದವು. ಇದೆಲ್ಲದರ ಬಗ್ಗೆ ನನಗೆ ಬೇಸರವಿಲ್ಲ. ಆದರೆ, ನನ್ನನ್ನು ನಂಬಿ ಬೆಟ್ಟಿಂಗ್ ಕಟ್ಟಿ ಮನೆ ಮಠ ಕಳೆದುಕೊಂಡವರ ಬಗ್ಗೆ ತೀವ್ರ ನೋವಿದೆ ಎಂದು ಭಾವುಕರಾದರು.
Related Articles
Thank you for your comment. It is awaiting moderation.


Comments (0)