ಪೋಷಕ ಕಲಾವಿದರಿಗೆ ಆರ್ಥಿಕ ನೆರವು
- by Suddi Team
- August 13, 2020
- 170 Views
ಬೆಂಗಳೂರು: ಕೋವಿಡ್-19 ಕಾರಣದಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ಕನ್ನಡ ಚಿತ್ರರಂಗದ 40 ಪೋಷಕ ಕಲಾವಿದರಿಗೆ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಅಲಿಯನ್ಸ್ ವಿಶ್ವವಿದ್ಯಾಲಯ ವತಿಯಿಂದ ಆರ್ಥಿಕ ನೆರವು ಕೊಡಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸಿನಿಮಾ ಹಾಗೂ ಕಿರುತೆರೆಯ ಸುಮಾರು 40 ಕಲಾವಿದರಿಗೆ ಅಲಿಯನ್ಸ್ ವಿಶ್ವವಿದ್ಯಾಲಯ ನೀಡಿದ ಹಣಕಾಸು ನೆರವಿನ ಜತೆಗೆ ಪ್ರಶಂಸನಾ ಯತ್ರವನ್ನು ನೀಡಿದರಲ್ಲದೆ, ತಮ್ಮ ನಟನೆಯ ಮೂಲಕ ಚಿತ್ರರಂಗದ ಹಿರಿಮೆಗೆ ಕಾರಣರಾದ ಕಲಾವಿದರಿಗೆ ನೆರವಾಗುತ್ತಿರುವ ವಿವಿಯನ್ನು ಅಭಿನಂದಿಸಿದರು.
60 ವರ್ಷ ಮೇಲ್ಪಟ್ಟ ಹಿರಿಯ ಕಲಾವಿದರು ಕೂಡ ಚಿತ್ರೀಕರಣ ದಲ್ಲಿ ಭಾಗವಹಿಸಿ ಜೀವನ ಸಾಗಿಸಲು ಅನುವು ಮಾಡಿಕೊಡುವಂತೆ ಇದೇ ವೇಳೆ ಕಲಾವಿದರು ಡಿಸಿಎಂ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.
ಹಿರಿಯ ನಟಿಯರಾದ ಲಕ್ಷ್ಮಿದೇವಮ್ಮ, ಸುಲೋಚನಾ ರೈ, ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಹಾಗೂ ಸದಸ್ಯರಾದ ಬ್ಯಾಂಕ್ ಜನಾರ್ಧನ್, ವೆಂಕಟಾಚಲ, ಬಿರಾದಾರ್, ಆಡುಗೋಡಿ ಶ್ರೀನಿವಾಸ್, ಶೈಲಜಾ ಸೋಮಶೇಖರ್, ಭಾಗ್ಯಶ್ರೀ, ಸುರೇಶ್ ದಾವಣಗೆರೆ, ಭವ್ಯಶ್ರೀ, ಭಾಸ್ಕರ್, ಪುಷ್ಪಾ ಸ್ವಾಮಿ, ರಾಧಾ ರಾಮಚಂದ್ರ ಸೇರಿದಂತೆ ಸುಮಾರು 40 ಕಲಾವಿದರು ಹಾಜರಿದ್ದರು. ಗಣೇಶ ರಾವ್ ಹಾಜರಿದ್ದರು. ಇವೆಲ್ಲರೂ ಅಲಯನ್ಸ್ ವಿವಿ ಜತೆ ಮಾತನಾಡಿ ಆರ್ಥಿಕ ನೆರವು ಕೊಡಿಸಿದ ಉಪ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದರು
Related Articles
Thank you for your comment. It is awaiting moderation.


Comments (0)