ಕೆರೆ ಕಾಮೇಗೌಡರ ಪರ ವಿರೋಧ ಚರ್ಚೆ: ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲು ಮುಂದಾದ ನಾರಾಯಣಗೌಡ

ಮಂಡ್ಯ – 18: ಜಿಲ್ಲೆಯಲ್ಲಿ ಮೊನ್ನೆಯವರೆಗು ಕೊರೋನಾದಿಂದ ಯಾವುದೇ ಸಾವು ಸಂಭವಿಸಿರಲಿಲ್ಲ. ಆದ್ರೆ ಈಗ 6 ಜನ ಮೃತಪಟ್ಟಿದ್ದು ನೋವಿನ ಸಂಗತಿಯಾಗಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ| ನಾರಾಯಣಗೌಡ ಹೇಳಿದ್ದಾರೆ.

ಮಂಡ್ಯದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಕೊವಿಡ್ – 19 ನಿಯಂತ್ರಿಸುವ ಸಂಬಂಧ ತೆಗೆದುಕೊಂಡಿರುವ ಕ್ರಮಗಳಬಗ್ಗೆ ಚರ್ಚಿಸಿದ ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡಿದ್ರು. ಜಿಲ್ಲೆಯಲ್ಲಿ ಕೊವಿಡ್ 19 ನಿಂದ ಮೃತಪಟ್ಟವರಿಗೆ ಹೈಪೊಥೈರಾಯಿಡ್ , ಬಿಪಿ, ಶುಗರ್ , ಶ್ವಾಸಕೋಸದ ಸಮಸ್ಯೆ ಕೂಡ ಇತ್ತು. ಇನ್ನಿಬ್ಬರು ವೆಂಟಿಲೇಟರ್ ನಲ್ಲಿ ಇದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದ್ರು.

ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ 35 ಕಡೆಗಳಲ್ಲಿ ಸ್ಥಳ ಗುರುತಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಇಲ್ಲ. ಹಣದ ಕೊರತೆಯೂ ಇಲ್ಲ. ಯಾವುದೇ ರೋಗಿಗು ಚಿಕಿತ್ಸೆ ನೀಡುವಲ್ಲಿ ಸಮಸ್ಯೆ ಇಲ್ಲ. ಎಲ್ಲ ಶಾಸಕರು ಸಹಕಾರ ನೀಡಬೇಕು. ಶಾಸಕರುಗಳಿಗೆ ಅಧಿಕಾರಿಗಳು ಎಲ್ಲ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ರು.

ಮೈಶುಗರ್ ಕಾರ್ಖಾನೆ ಅತಿ ಶೀಘ್ರದಲ್ಲಿ ಆರಂಭವಾಗಬೇಕು. ಅದಕ್ಕೆ ಬೇಕಾದ ಸಿದ್ಧತೆ ನಡೆದಿದೆ. ಮಂಗಳವಾರ, ಬುಧವಾರ ಈ ಸಂಬಂಧ ಸಭೆ ಇದೆ. ಬಳಿಕ ಸಿಎಂ ಜೊತೆ ಚರ್ಚಿಸಿ ಕಾರ್ಖಾನೆ ಆರಂಭಿಸುತ್ತೇವೆ. ಕಾರ್ಖಾನೆ ಆರಂಭಿಸಲು ಕಾರ್ಮಿಕರೂ ಸಹಕರಿಸಬೇಕು. ವಿನಾಕಾರಣ ಅಡ್ಡಿಪಡಿಸಿದರೆ ರೈತರಿಗೆ ಸಮಸ್ಯೆ ಆಗುತ್ತೆ. ಕೆರೆ ಕಾಮೇಗೌಡ ಅವರ ಬಗ್ಗೆಯೂ ಪರ ವಿರೋಧ ಕೇಳಿದ್ದೇನೆ. ಸಧ್ಯದಲ್ಲೇ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುವುದಾಗಿ ಸಚಿವ ನಾರಾಯಣಗೌಡ ಮಂಡ್ಯ ಪರಿವೀಕ್ಷಣಾ ಮಂದಿರದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಹೇಳಿದ್ದಾರೆ.

Related Articles

Comments (0)

Leave a Comment