ಮನೆಯ ಮೇಲ್ಚಾವಣಿ ಕುಸಿದು ವೃದ್ದ ಸಾವು
- by Suddi Team
- July 17, 2020
- 119 Views
ಚಿಕ್ಕಬಳ್ಳಾಪುರ: ತಡರಾತ್ರಿ ಬಿದ್ದ ಮಳೆಗೆ ಮನೆ ಮೇಲ್ಚಾವಣಿ ಕುಸಿದು ವೃದ್ದ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಜಾತವಾರ ಗ್ರಾಮದಲ್ಲಿ ನಡೆದಿದೆ. ಕೃಷ್ಣಪ್ಪ (65) ಮೃತ ದುರ್ದೈವಿ.
ಮೃತ ಕೃಷ್ಣಪ್ಪ ತನ್ನ ಪತ್ನಿ ಕೇಶವಮ್ಮ ಜೊತೆ ಈ ಮನೆಯಲ್ಲಿ ರೇಷ್ಮೆ ಹುಳು ಮೇಯಿಸುತ್ತಿದ್ದರು. ನಿನ್ನೆ ರಾತ್ರಿ ಮಲಗಿದ್ದಾಗ ಕಳೆದ ಮೂರು ದಿನಗಳಿಂದ ಸಂಜೆಯ ವೇಳೆ ಸುರಿಯುತ್ತಿದ್ದ ಮಳೆಗೆ ನೆನೆದಿದ್ದ ಹಳೆಯದಾದ ಮೇಲ್ಚಾವಣಿ ತಡರಾತ್ರಿ ಕುಸಿದು ಬಿದ್ದು ಕೃಷ್ಣಪ್ಪ ಸ್ಥಳದಲ್ಲೇ ಮೃತರಾಗಿ ಪತ್ನಿ ಕೇಶವಮ್ಮಳ ಮೇಲೆ ಮಣ್ಣು ಕುಸಿದಿದೆ.
ಬೆಳಗ್ಗೆ ಕೃಷ್ಣಪ್ಪನ ಪುತ್ರ ತಂದೆ-ತಾಯಿಗೆ ಟೀ ತೆಗೆದು ಕೊಂಡು ಹೋಗಿ ಮನೆಯ ಬಾಗಿಲು ತೆರದಾಗ ಘಟನೆ ಬೆಳಕಿಗೆ ಬಂದಿದ್ದು, ತಂದೆ ಮೃತರಾಗಿದ್ದರೆ ತಾಯಿ ಯಾವುದೇ ಗಾಯಗಳಿಲ್ಲದೇ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಕೋವಿಡ್ ಇರೋದ್ರಿಂದ ಆ ವೃದ್ದನ ಮೃತ ದೇಹವನ್ನು ಕೋವಿಡ್ ಟೆಸ್ಟ್ ಮಾಡಲು ಸ್ಥಳಕ್ಕೆ ತಾಲ್ಲೂಕು ಆಡಳಿತ ಆಗಮಿಸಿದ್ದು, ಕೊರೋನಾ ಪರೀಕ್ಷೆ ವರದಿ ಬಂದ ನಂತರ ಶವದ ಮರಣೋತ್ತರ ಪರೀಕ್ಷೆ ಮಾಡಿ ಮೃತನ ಸಂಬಂದಿಗಳಿಗೆ ಹಸ್ತಾಂತರ ಮಾಡಲಾಗುವುದು.
Related Articles
Thank you for your comment. It is awaiting moderation.


Comments (0)