ಬಿಎಂಟಿಸಿ ಸಿಬ್ಬಂದಿಗೆ ಕರೋನ ಸೋಂಕು: ಆತಂಕದಲ್ಲಿ ಪ್ರಾಯಾಣಿಕರು

ಬೆಂಗಳೂರು: ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ಕೊರೋನಾ ಸೋಂಕು ಮತ್ತಷ್ಟು ಅಬ್ಬರಿಸತೊಡಗಿದೆ. ಜುಲೈ ತಿಂಗಳಲ್ಲಿ ಕೊರೋನಾ ಅವಾಂತರ ಸೃಷ್ಟಿಸಲಿದೆ ಎನ್ನುವ ಎಚ್ಚರಿಕೆಯ ನಡುವೆ ಜೂನ್ ನಲ್ಲಿಯೇ ಕೊರೋನಾ ಮಹಾ ಬಿರುಗಾಳಿ ಬೀಸುವ ಲಕ್ಷಣಗಳು ಗೋಚರಿಸುತ್ತಿದೆ.

ಲಾಕ್ ಡೌನ್ ಸಡಿಲಿಕೆಯಾದ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ ಗಳ ಓಡಾಟಕ್ಕೆ ಸರ್ಕಾರ ಅವಕಾಶ ಕಲ್ಪಿಸಿತ್ತು. ಆದ್ರೆ, ಇದೀಗ ಬಿಎಂಟಿಸಿ ಬಸ್ ಹತ್ತಿದ ಪ್ರಯಾಣಿಕರಿಗೆ ಆತಂಕ ಶುರುವಾಗಿದೆ. ಕೆ ಆರ್ ಪುರಂನ ಐಟಿಐ ಡಿಪೋ ಸಂಖ್ಯೆ 24ಕ್ಕೆ ಸೇರಿದ ಬಿಎಂಟಿಸಿ ನಿರ್ವಾಹಕನಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ.

ಲಾಕ್ ಡೌನ್ ಘೋಷಣೆ ಮಾಡಿದಾಗಿಂದಲೂ ತಮ್ಮ ತವರಿನ ಬಿಜಾಪುರದಲ್ಲಿ ನೆಲೆಸಿದ್ದ ವ್ಯಕ್ತಿ ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ವಾಪಸ್ ಆಗಿದ್ದರು. ಮೇ 30ರಂದು ಕರ್ತವ್ಯಕ್ಕೆ ಹಾಜರಾಗಿದ್ದ ಈ ವ್ಯಕ್ತಿ, ಕೆ.ಆರ್ ಮಾರುಕಟ್ಟೆ, ಸಿಲ್ಕ್ ಬೋರ್ಡ್, ಹೆಬ್ಬಾಳ ಸೇರಿದಂತೆ ಅನೇಕ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಕೊರೋನ ಸೋಂಕು ಟೆಸ್ಟ್ ಮಾಡಿದ ನಂತರ ಸಾಕಷ್ಟು ಕಡೆ ಸುತ್ತಾಡಿದ್ದಾರೆ. ನಿನ್ನೆ ಸಂಜೆ ಪಾಸಿಟಿವ್ ದೃಡಪಟ್ಟಿದೆ. ಹೀಗಾಗಿ ಆರೋಗ್ಯ ಅಧಿಕಾರಿಗಳು ಇವರ ಟ್ರಾವೆಲ್ ಹಿಸ್ಟರಿಯನ್ನು ಕಲೆ ಹಾಕುತ್ತಿದ್ದಾರೆ. ಸದ್ಯ ಕಂಡೆಕ್ಟರ್ ವಾಸಿಸುತ್ತಿದ್ದ ದೇವಸಂದ್ರ ವಾರ್ಡ್ ಗೀತಾ ಕ್ಲಿನಿಕ್ ರಸ್ತೆಯನ್ನ ಸಂಪೂರ್ಣ ಸ್ಯಾನಿಟೈಸ್ ಮಾಡುತ್ತಿದ್ದು, ಸೀಲ್ ಡೌನ್ ಮಾಡುವ ಲಕ್ಷಣಗಳು ಗೋಚರವಾಗುತ್ತಿದೆ.

Related Articles

Comments (0)

Leave a Comment