ಮುಂಗಡ ಟಿಕೆಟ್ ಕಾಯ್ದಿರಿಸಿ ಪ್ರಯಾಣಿಸಿ: ಕೆಎಸ್ಆರ್‌ಟಿಸಿ ಮನವಿ

ಬೆಂಗಳೂರು: ಮುಂಗಡ ಟಿಕೇಟು ಕಾಯ್ದಿರಿಸುವ ( online ticketing ) ಮೂಲಕ ಪ್ರಯಾಣಿಸಿ ಇದರಿಂದ ವೃಥಾ ಬಸ್ ನಿಲ್ದಾಣದಲ್ಲಿ ಜನ ಸಂದಣಿ‌ ಮತ್ತು ಸರತಿ ಸಾಲುಗಳಲ್ಲಿ ಕಾಯುವುದನ್ನು ತಪ್ಪಿಸಬಹುದಾಗಿರುತ್ತದೆ ಎಂದಿ ಕೆ ಎಸ್ ಆರ್ ಟಿ‌ ಪ್ರಯಾಣಿಕರಲ್ಲಿ ಮನವಿ‌ ಮಾಡಿದೆ.

ಬಸ್ಸುಗಳು 50% ಆಸನಗಳ ಪ್ರಮಾಣದಲ್ಲಿ‌ ಕಾರ್ಯಚರಣೆಯಾಗುತ್ತಿರುವುದರಿಂದ ,ಅತ್ಯಧಿಕ ಬಸ್ಸುಗಳು‌ ಕಾರ್ಯಚರಣೆಗೆ ಅವಶ್ಯಕವಿದ್ದು, ಈ ಸಂಬಂಧ ಪ್ರಯಾಣಿಕರು ಮುಂಗಡ ಟಿಕೇಟು ಕಾಯ್ದಿರಿಸಿದ್ದಲ್ಲಿ ಅವರ ಪ್ರಯಾಣವು ಸುಗಮವಾಗಿರಲಿದೆ ಎಂದಿದೆ.

ದಯವಿಟ್ಟು ಮುಂಗಡ ಟಿಕೇಟು‌ ಬುಕ್ ಮಾಡಲು
www.ksrtc.in ಹಾಗು ಹೆಚ್ಚಿನ ಮಾಹಿತಿಗಾಗಿ‌‌ ನಿಗಮದ ಕಾಲ್‌ಸೆಂಟರ್ 9449596666 ಅನ್ನು ಸಂಪರ್ಕಿಸಲು ಸಂಸ್ಥೆ ಕೋರಿದೆ.

Related Articles

Comments (0)

Leave a Comment