ರವಿ ಕಾಣದನ್ನ ಕಲಾವಿದ ಕಂಡ!
- by Suddi Team
- August 3, 2019
- 23 Views

ಬೆಂಗಳೂರು: ಡೇರಾ ಆರ್ಟ್ ಸ್ಟುಡಿಯೋ ಪ್ರಸ್ತುತ ಪಡೆಸುತ್ತಿರುವ ಸಿಟಿ ಲೈಟ್ಸ್ ಎಂಬ ಶಿರ್ಷಿಕೆಯಡಿಯಲ್ಲಿ ಚಿತ್ರಕಲೆಗಳ ಪ್ರದರ್ಶನ ನಡೆಯಲಿದೆ. ಇವು ಖ್ಯಾತ ಚಿತ್ರಗಾರ ಎಸ್.ಎ. ವಿಮಲನಾಥನ್ ಅವರ ಕುಂಚದಲ್ಲಿ ಅರಳಿದ ಕಲೆಗಳಾಗಿವೆ. 2019 ಆಗಸ್ಟ್ 2 ರಿಂದ 7ರವರೆಗೂ ನಗರದ ಚಿತ್ರಕಲಾ ಪರಿಷತ್ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ಈ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮ 12.30 ಕ್ಕೆ ಜರಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನ ಚಿತ್ರಕಲಾ ಪರಿಷತ್ ಬೆಂಗಳೂರು ಅಧ್ಯಕ್ಷರಾದ ಡಾ. ಬಿ.ಎಲ್ ಶಂಕರ್ ನೇರವೆರಿಸಿದರು. ಮುಖ್ಯ ಅತಿಥಿಗಳಾಗಿ ಕಮಾಲ್ ಕಪೂರ್ ವ್ಯವಸ್ಥಾಪಕ ನಿರ್ದೇಶಕರು ರೆಕ್ಸ್ ಥೇಟರ್ ಬೆಂಗಳೂರು ಹಾಗೂ ಸುನೀಲ್ ಫರ್ನಾಂಡೀಸ್ ಪ್ರಾಂಶುಪಾಲರು ಶೆಂಟ್ ಜೋಷಪ್ ಬಾಯ್ಸ್ ಹೈಸ್ಕೂಲ್, ಸುಭಾಷಿಶ್ ಮಂಡಲ್ ಡಿಜೈನ್ ನಿರ್ದೇಶಕರು ಜನ್ಸಲರ್ ಭಾಗವಹಿಸಿದ್ದರು.
ಪ್ರದರ್ಶನದಲ್ಲಿ ಸಂದೇಶ ಸಾರುವ ಚಿತ್ರಗಳು ಕಾಣಬಹುದಾಗಿದೆ. 50ಕ್ಕೂ ಹೆಚ್ಚು ವರ್ಣಚಿತ್ರಗಳು ಪ್ರದರ್ಶನದಲ್ಲಿ ಇಡಲಾಗಿದೆ. ಒಂದೊಂದು ಚಿತ್ರ ಒಂದೂಂದು ಸಂದೇಶ ಸಾರುತ್ತದೆ. ಅದರಲ್ಲೂ ಪ್ರಮುಖವಾಗಿ ಅಧುನಿಕರಣವನ್ನ ದೂರದೆ ನಗರಗಳ ಬೆಳವಣೆಗೆ ಯಾವ ಹಂತಕ್ಕೆ ತಲುಪಿದೆ ಎಂಬುದು ಕಲಾವಿದರು ಅಚ್ಚುಕಟ್ಟಾಗಿ ಚಿತ್ರಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಒಂದೆಡೆ ಬೆಳೆಯುತ್ತಿರುವ ನಗರಗಳು, ಆಕಾಶಕ್ಕೆ ಮುತ್ತಿಡುವ ಬಿಲ್ಡಿಂಗ್ಗಳು, ಮತ್ತೊಂದೆಡೆ ದೊಡ್ಡ ದೊಡ್ಡ ರೆಸ್ಟೋರೆಂಟ್ಗಳು ಇವುಗಳ ನಡುವೆ ಆರೋಗ್ಯ ನೀಡುವ ಹಸಿರು ಮಾತ್ರ ಕಾಣೆಯಾಗುತ್ತಿದೆ. ಹಸಿರು ನಿಧಾನಕ್ಕೆ ಹಿಂದೆ ವಾಲುತ್ತಿದ್ದರೆ, ಸಿಲಿಕಾನ್ ಸಿಟಿಗಳು ಕಲರ್ ಫುಲ್ ಆಗಿದೆ ಎಂದು ಕಲಾವಿದರು ವ್ಯಂಗ್ಯವಾಗಿ ತಿಳಿಸಿದ್ದಾರೆ.
Related Articles
Thank you for your comment. It is awaiting moderation.
Comments (0)