ಮೇಕೆದಾಟು ನಮ್ಮ ಹಕ್ಕು,ತಮಿಳುನಾಡಿನ ಅಡಚಣೆ ಸರಿಯಲ್ಲ: ಡಿಕೆಶಿ
- by Suddi Team
- December 6, 2018
- 593 Views

ಬೆಂಗಳೂರು:ಮೇಕೆದಾಟು ಯೋಜನೆ ನಮ್ಮ ರಾಜ್ಯದ ಹಕ್ಕು.ನಮಗೆ ಬೇರೆ ರಾಜ್ಯದ ಮೇಲೆ ಯಾವುದೇ ದ್ವೇಷ ಇಲ್ಲ.ಮ್ಯಾನೇಜ್ಮೆಂಟ್ ಬೋರ್ಡ್ ಮೂಲಕ ನೀರನ್ನು ಬಳಕೆ ಮಾಡಿಕೊಳ್ಳಲು ಅವಕಾಶ ಇದೆ.ಹೀಗಾಗಿ ಬೇರೆ ರಾಜ್ಯಗಳಿಗೆ ಯಾವುದೇ ಆತಂಕ ಬೇಡ ಎಂದು ಜಲಸಂಪನ್ಮೂಲಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು,ಇಂದು ಮಾಜಿ ಸಿಎಂ ಹಾಗೂ ಮಾಜಿ ನೀರಾವರಿ ಸಚಿವರ ಜೊತೆ ಸಭೆ ನಡೆಸಿದ್ದೇವೆ.ದೇವೇಗೌಡರು, ಸದಾನಂದಗೌಡರು, ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಎಲ್ಲ ಮಾಜಿ ಸಿಎಂ ಗಳಿಗೆ ಆಹ್ವಾನ ನೀಡಲಾಗಿತ್ತು.ಅನ್ಯ ಕಾರ್ಯಕ್ರಮ ನಿಮಿತ್ತ ಕೆಲವರು ಸಭೆಗೆ ಬಂದಿಲ್ಲ. ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್ ಸಭೆಯಲ್ಲಿ ಭಾಗಿಯಾಗಿ ಮಹತ್ವದ ಸಲಹೆ ಸೂಚನೆ ನೀಡಿದ್ದಾರೆ. ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಕ್ಯಾತೆ ತೆಗೆದಿದೆ.
ಕರ್ನಾಟಕದ ಸರ್ಕಾರದ ಪರವಾಗಿ ವಿನಂತಿ ಮಾಡುತ್ತೇನೆ.
ಎರಡು ರಾಜ್ಯದ ಹಿತಕ್ಕಾಗಿ ನಾವು ಶ್ರಮಿಸಬೇಕಾಗಿದೆ.
ನಾಳೆ ಮೇಕೆದಾಟು ಯೋಜನೆ ಪ್ರದೇಶಕ್ಕೆ ಅಧಿಕಾರಿಗಳ ಜೊತೆ ಭೇಟಿ ನೀಡುತ್ತಿದ್ದೇವೆ.ಯೋಜನೆ ಪ್ರದೇಶದಲ್ಲಿ ಒಂದು ಎಕರೆ ಕೃಷಿಗೂ ಅವಕಾಶ ಇಲ್ಲ.ಹೀಗಿರುವಾಗ ಯೋಜನೆ ಅನುಷ್ಠಾನಕ್ಕೆ ತಮಿಳುನಾಡು ಅಡಚಣೆ ಮಾಡೋದು ನ್ಯಾಯಸಮ್ಮತವಲ್ಲ ಎಂದರು.
ಮೇಕೆದಾಟು ಯೋಜನೆ ಬಗ್ಗೆ ತಮಿಳುನಾಡು ಮೊದಲು ಅರ್ಥೈಸಿಕೊಳ್ಳಬೇಕು.ತಮಿಳುನಾಡಿನ ಜಾಗದಲ್ಲಿ ನಾವು ಮೇಕೆದಾಟು ಯೋಜನೆ ಮಾಡ್ತಿಲ್ಲ.ನಮ್ಮ ಜಾಗದಲ್ಲಿ ನಾವು ಅಣೆಕಟ್ಟೆ ಮಾಡುತ್ತಿದ್ದೇವೆ.ಮೇಕೆದಾಟು ಅಣೆಕಟ್ಟೆ ಮೂಲಕ ನೀರನ್ನು ಕೃಷಿಗೆ ಉಪಯೋಗಿಸಲು ಬರಲ್ಲ.ಮೇಕೆದಾಟು ನೀರನ್ನು ತಗೆದುಕೊಂಡು ನೀರಾವರಿ ಮಾಡಲು ಸಾಧ್ಯವಿಲ್ಲ.
ತಮಿಳುನಾಡಿನ ತಡೆಯಾಜ್ಞೆ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ನಮ್ಮ ಕಾನೂನು ತಂಡಕ್ಕೆ ಸಲಹೆ ನೀಡಿದ್ದೇವೆ. ನಮ್ಮ ರಾಜ್ಯದ ಹಣ ಮತ್ತು ಜಾಗ.ನಾವು ಮೇಕೆದಾಟುವಿನಿಂದ ವಿದ್ಯತ್ ಚ್ಛಕ್ತಿ ಉತ್ಪಾದಿಸಿ ಬಳಕೆ ಮಾಡಿಕೊಳ್ಳಬಹುದು.ಇದನ್ನು ಬಿಟ್ರೆ ಯಾವುದೇ ಬಳಕೆ ಮಾಡಿಕೊಳ್ಳಲು ಅವಕಾಶ ನಮಗೆ ಇಲ್ಲ.ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಉಪಯೋಗವಾಗಲಿದೆ ಎಂದ್ರು.
ಮೇಕೆದಾಟು ಯೋಜನೆ ವಿಚಾರದಲ್ಲಿ ನಾವು ರಾಜಕಾರಣ ಮಾಡಲ್ಲ.ತಮಿಳುನಾಡಿಗೆ ಯೋಜನೆ ಬಗ್ಗೆ ಮಾಹಿತಿ ನೀಡಲು ನಾವು ಸಿದ್ದ.ಬೇಕಾದ್ರೆ ಅವ್ರೇ ನಮ್ಮ ಬಳಿ ಬರಲಿ.ಯೋಜನೆ ಬಗ್ಗೆ ಮಾಹಿತಿ ನೀಡುತ್ತೇವೆ.ಇಲ್ಲವೇ ನಮಗೆ ಅನುಮತಿ ನೀಡಿದ್ರೆ ಅವರಲ್ಲಿಯೇ ಹೋಗಿ ಮಾಹಿತಿ ನೀಡಲಾಗುವುದು ಮೇಕೆದಾಟು ಯೋಜನೆ ನಮ್ಮ ರಾಜ್ಯದ ಹಕ್ಕು.ಈ ಯೊಜನೆ ಯಾವ ಕಾರಣಕ್ಕೂ ದುರ್ಬಳಕೆಯಾಗುವುದಿಲ್ಲ ಎಂದ್ರು.
ಮೇಕೆದಾಟು ಯೋಜನೆಯಿಂದ ೪೯೧೯ ಎಕರೆ ಮುಳುಗಡೆ ಆಗುತ್ತದೆ.ಈ ಪೈಕಿ ಸುಮಾರು ೨೯೦ ಹೆಕ್ಟೇರ್ ರೈತರ ಜಮೀನು ಇದೆ.ಮೇಕೆದಾಟು ವಿಚಾರದಲ್ಲಿ ಕರ್ನಾಟಕ ಜೊತೆ ಮಾತುಕತೆಗೆ ರೆಡಿ ಇಲ್ಲ ಎಂಬ ತಮಿಳುನಾಡು ಸಚಿವ ಷಣ್ಮುಗಮ್ಮ ಹೇಳಿಕೆ ವಿಚಾರ.ನಾವೆಲ್ಲಾ ಸಹೋದರರು.ನಮ್ಮ ಜೊತೆ ಅವ್ರು ಅವ್ರ ಜೊತೆ ನಾವು ಮಾತ್ನಾಡಲಿಲ್ಲ ಅಂದ್ರೆ ಹೇಗೆ?ನಾವೇನು ಅವ್ರ ಜೊತೆ ಫೈಟ್ ಮಾಡಲ್ಲ.ನೀರು ನಮ್ಮಿಂದಲೇ ಹೋಗಬೇಕು ಎಂದು ತಮಿಳುನಾಡು ಸಚಿವ ಷಣ್ಮುಗಮ್ಮ ಹೇಳಿಕೆಗೆ ಸಚಿವ ಡಿಕೆಶಿ ತಿರುಗೇಟು ನೀಡಿದ್ರು.
ಮಹದಾಯಿ ಯೋಜನೆಯಲ್ಲಿ ನಾವು ಎಷ್ಟು ನೀರು ಬಳಕೆ ಮಾಡಿಕೊಳ್ಳಬೇಕು ಅಂತ ನ್ಯಾಯಾಧೀಕರಣ ಸ್ಪಷ್ಟನೆ ನೀಡಿದೆ.
ನ್ಯಾಯಾಧೀಕರಣ ಆದೇಶದಲ್ಲಿ ನಮಗೆ ಅನ್ಯಾಯವಾಗಿದೆ. ಆದ್ರೆ ಹಂಚಿಕೆಯಾದ ನೀರನ್ನು ಬಳಕೆ ಮಾಡಿಕೊಳ್ಳುವಲ್ಲಿ ಕ್ರಮ ಕೈಗೊಳ್ಳಲಿದ್ದೇವೆ.ಕೃಷ್ಣ ನ್ಯಾಧಿಕರಣ ವಿಚಾರದಲ್ಲಿ ತಡೆಯಾಜ್ಞೆ ಇದೆ.ಅದನ್ನ ತೆರವು ಮಾಡುವುದಕ್ಕೂ ಕಾನುನು ತಜ್ಞರಿಗೆ ಸೂಚನೆ ನೀಡಿದ್ದೇವೆ ಎಂದ್ರು.
Related Articles
Thank you for your comment. It is awaiting moderation.
Comments (0)