ದೀಪಾವಳಿಗಿಲ್ಲ‌ ಲೋಡ್ ಶೆಡ್ಡಿಂಗ್: ಬೆಳಕಿನ ಹಬ್ಬಕ್ಕಿಲ್ಲ ಕಗ್ಗತ್ತಲ ಭೀತಿ

ಬೆಂಗಳೂರು: ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದ್ದರೂ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಜಾರಿ ಮಾಡುವುದಿಲ್ಲ,ದೀಪಾವಳಿಗೆ ಲೋಡ್ ಶೆಡ್ಡಿಂಗ್ ಜಾರಿ ಎನ್ನುವುದು ಸತ್ಯಕ್ಕೆ ದೂರವಾದ ಮಾಹಿತಿಯಾಗಿದ್ದು ನಾನು ಸಹಿ ಮಾಡದೇ ಹೇಗೆ ಲೋಡ್ ಶೆಡ್ಡಿಂಗ್ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ರಾಜ್ಯದ ವಿದ್ಯುತ್ ಪರಿಸ್ಥಿತಿ ಕುರಿತು ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ. ಎಸ್.ಎನ್. ಪ್ರಸಾದ್, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಕೆಪಿಸಿಎಲ್, ಕೆಪಿಟಿಸಿಎಲ್, ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ‌ ಸಿಎಂ ಎಚ್ಡಿಕೆ, ದೀಪಾವಳಿಗೆ ಲೋಡ್ ಶೆಡ್ಡಿಂಗ್ ಅಂತ ಸುದ್ದಿ ಮಾಡಿದ್ದೀರಿ.
ಯಾರನ್ನೂ ಕತ್ತಲೆಗೆ ತಳ್ಳಲು ನಾವು ಸಮ್ಮಿಶ್ರ ಸರ್ಕಾರ ರಚನೆ ಮಾಡಿಲ್ಲ.ನಮ್ಮ ವಿದ್ಯುತ್ ಕಂಪನಿಗಳು ಲೋಡ್ ಶೆಡ್ಡಿಂಗ್ ಮಾಡಿಲ್ಲ.ಸರ್ಕಾರದಿಂದ ಯಾವುದೇ ತೀರ್ಮಾನ ಆಗಿಲ್ಲ.
ಆರ್ಥಿಕ ಇಲಾಖೆಯ ಅಧಿಕಾರಿಗಳು ಹಾಗೂ ಮುಖ್ಯ ಕಾರ್ಯದರ್ಶಿ ಮತ್ತು ಎಲ್ಲ ನಿಗಮಗಳ ಜೊತೆ ಸಭೆ ಮಾಡಿದ್ದೇನೆ. ಎಲ್ಲ ವಿದ್ಯುತ್ ಸರಬರಾಜು ಕಂಪನಿ ನಿರ್ದೇಶಕರ ಜೊತೆ ಸಭೆ. ನಡೆಸಿದ್ದೇನೆ.ಸೌರಶಕ್ತಿಯ ಮೂಲಕ ಜಲ ವಿದ್ಯುತ್ ಉತ್ಪಾದನೆ ಮೂಲಕ ಎಷ್ಟು ವಿದ್ಯುತ್ ಬರುತ್ತದೆ ಎನ್ನುವ ಚರ್ಚೆ ಮಾಡಿದ್ದೇನೆ.ಸಂಜೆ ೫ ರಿಂದ ರಾತ್ರಿ ೧೦ ರ ವರೆಗೆ ೩೦೦ ಮೆಗಾ ವ್ಯಾಟ್ ವಿದ್ಯುತ್ ಸಮಸ್ಯೆಯಾಗಿದೆ.ಜಲ ವಿದ್ಯುತ್ ಉತ್ಪಾದನೆಗೆ ಇನ್ನೂ ನೀರಿದೆ‌ ಎಂದ್ರು.

ಕಲ್ಲಿದ್ದಲು ಸರಬರಾಜು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೆ ಪತ್ರ ಬರೆದಿದ್ದೇನೆ. ನಮಗೆ ರೈಲಿನ ಮೂಲಕ ಸರಬರಾಜು ಮಾಡಲು ರೇಕ್ ಗಳ ಕೊರತೆ ಇದೆ. ಅದನ್ನು ಒದಗಿಸಲು ಕೇಂದ್ರ ಸರ್ಕಾರ ಒಪ್ಪಿದೆ. ಮಹಾನಗರ ಮತ್ತು ಕೈಗಾರಿಕೆಗಳಿಗೆ ೨೪ ಗಂಟೆ ನಿರಂತರ ವಿದ್ಯುತ್ ನಿರಂತರ ಜ್ಯೋತಿಯಲ್ಲಿ ೨೨. ರಿಂದ ೨೪ ಗಂಟೆ ಗ್ರಾಮೀಣ ಪ್ರದೇಶದಲ್ಲಿ ೩ ಫೇಸ್ ೭ , ಒನ್ ಫೇಸ್ ೯ ಗಂಟೆ ವಿದ್ಯುತ್ ಸರಬರಾಜು.ಬೆಳಿಗ್ಗೆ ೧೧ ಗಂಟೆಯಿಂದ, ೧೨ಟೆಗೆ ೯೭೦೦ ಮೆಗಾವ್ಯಾಟ್.ಸಂಜೆ ೭೨೦೦ ಮೆಗಾವ್ಯಾಟ್ ಬೇಡಿಕೆ ಇದೆ. ಮಧ್ಯಾನ್ಹ ೨೦೦೦ ಮೆಗಾವ್ಯಾಟ್ ಕೊರತೆ ಇದೆ.ಬೆಳಗಿನ ೬ ರಿಂದ ೮೬೦೦ ಕೊತರೆಯಿಲ್ಲ.
ಬೆಳಿಗ್ಗೆ ೯ ರಿಂದ, ೫ ರ ವರೆಗೆ ೮೨೦೦-೧೦೨೦೦
ಸಂಜೆ ೫ ರಿಂದ ರಾತ್ರಿ ೧೦ ರ ವರೆಗೆ ೨೦೦-೪೦೦ ಮೆಗಾವ್ಯಾಟ್ ಕೊರತೆಯಿದೆ. ಅದನ್ನು ಸರಿಪಡಿಸಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಸಂಜೆ ೫-೧೦ ರವರೆಗೆ ೮೬೦೦-೯೧೦೦ ವರೆಗೆ ಬೇಡಿಕೆ ಇದೆ. ಲಭ್ಯತೆ ೮೦೦೦-೮೬೦೦ ಇದೆ.
ವರಾಹಿಯಿಂದ ತಾಂತ್ರಿಕ ತೊಂದರೆಯಿಂದ ಎರಡು ದಿನ ಸುಮಾರು ೨೦೦ ಮೆ.ವ್ಯಾ.ಕೊರತೆಯಾಗಿತ್ತು‌ ಅಷ್ಟೇ ಎಂದು ಸ್ಪಷ್ಟೀಕರಣ ನೀಡಿದ್ರು.

ನಾನೇ ಮುಖ್ಯಮಂತ್ರಿಯಾಗಿದ್ದೇನೆ. ನಾನು ಸಹಿ ಮಾಡದೇ ಲೋಡ್ ಶೆಡ್ಡಿಂಗ್ ಹೇಗೆ ಮಾಡುತ್ತಾರೆ.
ನೀವು ಮಾಡ್ತೀರೊ ಡ್ಯಾಮೇಜ್ ನಿಂದ ಎಷ್ಟು ಹಾನಿಯಾಗುತ್ತಿದೆ ಗೊತ್ತಿದೆಯಾ. ಅತಿ ಒಳ್ಳೆತನ ಒಳ್ಳೆಯದಲ್ಲ ಅಂತ ವಿವೇಕಾನಂದ ಅವರೇ ಹೇಳಿದ್ದಾರೆ ಎಂದು
ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ.ಜನರು ಸಮಸ್ಯೆ ಇದೆ ಅಂತ ಬಂದರೆ ನಾನು ನಿದ್ದೆ ಮಾಡಿಲ್ಲ.ನಿನ್ನೆ ನನ್ನ ಆರೋಗ್ಯದ ಸಮಸ್ಯೆ ಇದ್ದರೂ ಕಷ್ಟ ಪಟ್ಟು.ಕೆಲಸ ಮಾಡುತ್ತಿದ್ದೇನೆ‌ ಎಂದ್ರು.

ಕಲ್ಲಿದ್ದಲು ಕೊರತೆ ನೀಗಿಸಲು ಪಿಯುಷ್ ಗೋಯಲ್ ಜೊತೆ ಸಂಪರ್ಕದಲ್ಲಿದ್ದೆನೆ. ೫ ಲಕ್ಷ ಮೆಟ್ರಿಕ್ ಟನ್ ಆಮದು ಮಾಡಿಕೊಳ್ಳಲು ಬೋರ್ಡ್ ಮೀಟಿಂಗ್ ನಲ್ಲಿ ತೀರ್ಮಾನ ಮಾಡಲಾಗಿದೆ.ಜನವರಿಯಲ್ಲಿ ವಿದೇಶದಿಂದ ಕೊಲ್ ಬರುತ್ತದೆ.
ನಮಗೆ ೧೮% ಮಾತ್ರ ಕಲ್ಲಿದ್ದಲು ಸರಬರಾಜ್ ಆಗಿದೆ.
ರಾಯಚೂರಿನಲ್ಲಿ ಒಂದು ದಿನ ಇಟ್ಟುಕೊಳ್ಳಲು ಆಗುತ್ತಿಲ್ಲ.
ಎಲ್ಲ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ.
ನಾನು ಕೇವಲ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದಿಲ್ಲ. ತಿತ್ಲಿ ಚಂಡ ಮಾರುತ ಬಂದಿರುವುದರಿಂದ ಮಹಾನದಿಯಿಂದ ಕಲ್ಲಿದ್ದಿಲು ಸರಬರಾಜು ಆಗುತ್ತಿಲ್ಲ.
ವಿದ್ಯುತ್ ಖರೀದಿ ಮಾಡಲು ಕೃತಕ ಅಭಾವ ಸೃಷ್ಠಿಸುತ್ತಿಲ್ಲ.
ವಿದ್ಯುತ್ ಖರೀದಿಸಿ ದುಡ್ಡು ಮಾಡುವ ಅಗತ್ಯ ನನಗಿಲ್ಲ‌ ಎಂದ್ರು.

ಕೆಎಂ ಎಫ್ ನಿಂದ ೨ ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ರೈತರಿಂದ ನೇರವಾಗಿ ಖರೀದಿಗೆ ಸೂಚನೆ.
ಮೆಕೆಕಜೋಳಗ ೫೪.೩೮ ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಗುರಿ ಇದೆ. ರಾಜ್ಯ ಸರ್ಕಾರ ೫೦ ಕೋಟೆ.ರುಪಾಯಿ ನೀಡಿದೆ.
ಖಾಸಗಿಯವರು ೮೦೦-೯೦೦ ಖರಿದಿಸುತ್ತಿದ್ದಾರೆ.
ಹೀಗಾಗಿ ಕೆಎಂ ಎಫ್ ನೇರವಾಗಿ ರೈತರಿಂದ ಖರೀದಿಸಲು ಸೂಚನೆ ನೀಡಿದ್ದೇನೆ. ಛತ್ತಿಸ್ ಗಡದಿಂದ ಅನ್ನಭಾಗ್ಯದ ಅಕ್ಕಿ ತರಿಸುವ ಬದಲು ರಾಜ್ಯದ ರೈತರು ಬೆಳೆದ ಬತ್ತ ಖರೀದಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದ್ರು.

Related Articles

Comments (0)

Leave a Comment