ದೈವ ಪ್ರೇಕರಣೆಯಿಂದ ಪದವಿ ಸಿಕ್ಕಿದೆ, ಐದು ವರ್ಷ ನಾನೇ ಸಿಎಂ: ಎಚ್ಡಿಕೆ

ಬೆಂಗಳೂರು: ಇದು ನನಗೆ ದೇವರ ಕೊಟ್ಟ ಅಧಿಕಾರ. ದೇವರ ಪ್ರೇರಣೆಯಿಂದ ನಾನು ಮುಖ್ಯಮಂತ್ರಿ ಆಗಿದ್ದೇನೆ 5 ವರ್ಷ ನಾನು ಸಿಎಂ ಆಗಿರುತ್ತೇನೆ ಎಂದು ಸಿಎಂ ಎಚ್.ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈತ್ರಿ ಸರ್ಕಾರದ ಸಾಧನೆಗಳು ಹಾಗು ಸವಾಲುಗಳ ಕುರಿತು ಪ್ರೆಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಎಚ್ಡಿಕೆ ಕಾಂಗ್ರೆಸ್ ಸಹಕಾರದೊಂದಿಗೆ ನಾನು ಈ ರಾಜ್ಯದ ಸಿಎಂ ಆಗಿದ್ದೇನೆ ಮೈತ್ರಿ ಸರ್ಕಾರದ ನಾಯಕತ್ವ ನಾನು ವಹಿಸಿಕೊಂಡಿದ್ದೇನೆ ಬಜೆಟ್ ನಲ್ಲಿ ಘೋಷಣೆಯಾದ ಬಹುತೇಕ ಯೋಜನೆಗಳು ಆದೇಶವಾಗಿದೆ ಕೆಲವೊಂದು ಯೋಜನಗೆಳು ಕಾರ್ಯಗತವಾಗುತ್ತಿದೆ ರೈತರ ಸಾಲಮನ್ನಾ ಬಗ್ಗೆ ಸೂಕ್ತ ತೀರ್ಮಾನವಾಗಿದೆ ಆರ್ಥಿಕ ಶಿಸ್ತು ಗಮನದಲ್ಲಿಟ್ಟುಕೊಂಡು ಸಾಲಮನ್ನಾ ಮಾಡಲಾಗಿದೆ ಸರ್ಕಾರಿ ಶಾಲೆ ಸುಧಾರಿಸಲು ಸೂಕ ಕ್ರಮ ತೆಗದುಕೊಳ್ಳಲಾಗಿದೆ ಇದಕ್ಕಾಗಿ ೧೨೦೦ ಕೋಟಿ ಹಣ ಬಿಡುಗಡೆಯಾಗಿದೆ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ
ಹೆಚ್ಚುವರಿಯಾಗಿ ಲೋಕೋಪಯೋಗಿ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಕೆಲವೊಂದು ಇಲಾಖೆ ಹಣ ಕೇಳುತ್ತಿದೆ ಎಂದ್ರು.

ಬಿಜೆಪಿಯವ್ರು ಶ್ವೇತಪತ್ರ ಹೊರಡಿಸಿ‌ ಎನ್ನುತ್ತಾರೆ ಸರಕಾರ ಟೆಕಾಫ್ ಆಗಿಲ್ಲ, ಕೋಮಾದಲ್ಲಿದೆ ಎನ್ನುತ್ತಾರೆ ಟೀಕೆ ಮಾಡುವುದು ಅವರ ಕರ್ತವ್ಯ ನಿರಿಕ್ಷೆಗೂ ಹೆಚ್ಚು ಹಣವನ್ನ ನಾವು ನೀಡುತ್ತಿದ್ದೇವೆ ೧ ಕೋಟಿ ೪ ಲಕ್ಷ ಅನ್ನಭಾಗ್ಯ ಯೋಜನೆ ಫಲಾನುಭವಿ ಇದ್ರು ಈಗ ೧ ಕೋಟಿ ೨೯ ಲಕ್ಷ ಆಗಿದ್ದಾರೆ ೭ಕೆಜಿ ಅಕ್ಕಿ ನೀಡಲು ಹೆಚ್ಚುವರಿ ೧೯೦೦ ಕೋಟಿ ರೂ ನೀಡಬೇಕಾಗಿದೆ ಹಿಂದಿನ ಸರ್ಕಾರದ ಘೋಷಣೆಯಿಂದ ಅಭಿವೃದ್ಧಿಗೆ ಹಣ ನೀಡಲ್ಲ ಎನ್ನಲು ಸಾಧ್ಯವಿಲ್ಲ ಎಲ್ಲ ಕ್ಷೇತ್ರದಲ್ಲಯೂ ಮತ್ತೆ ಹಣ ನೀಡುತ್ತಿದ್ದೇವೆ ಎಂದ್ರು.

ಬೆಂಗಳೂರಿನ ಫೆರಿಫಿರಲ್ ರಸ್ತೆ ನಿರ್ಮಾಣಕ್ಕೆ ಸರ್ಕಾರ ಬದ್ಧ
ಫೆರಿಪಿರಲ್ ರಸ್ತೆ ನಿರ್ಮಾಣಕ್ಕೆ ಸರಕಾರ ಜೀವ ಕೊಡಲಿದೆ ೧೨ ವರ್ಷಗಳಿಂದ ಇದು ನೆನಗುದಿಗೆ ಬಿದ್ದಿದೆ ಮುಂದಿನ ಕ್ಯಾಬಿನೆಟ್ ನಲ್ಲಿ ಈ ಬಗ್ಗೆ ತೀರ್ಮಾನ ಮಾಡಿ ಇನ್ನೊಂದು ತಿಂಗಳಲ್ಲಿ ಟೆಂಡರ್ ಕರೆಯಲಾಗುತ್ತದೆ ಈ ಯೋಜನೆಗೆ ೬೦೦೦ ಕೋಟಿ ನೀಡುತ್ತೇವೆ ಎಲಿವೇಟಡ್ ರಸ್ತೆ ನಿರ್ಮಾಣಕ್ಕೂ ಸರ್ಕಾರ ಬದ್ದವಾಗಿದೆ ಎಂದ್ರು.

ನನ್ನ ಕಚೇರಿಯಲ್ಲಿ ಪೇಮೆಂಟ್ ಸೀಟ್ ಇಲ್ಲ ಓನ್ಲಿ ಮೇರಿಟ್ ಸೀಟ್ ಮೇರಿಟ್ ಇದ್ದವರನ್ನ ಮಾತ್ರ ವರ್ಗಾವಣೆ ಮಾಡಲಾಗುತ್ತಿದೆ.ಅಕ್ರಮ ಬಾರ್ , ಮಟ್ಕಾ ,ಕ್ಲಬ್ ದಂಧೆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಇಂಥವರನ್ನ ಬಲಿಯಾಕಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಅಧಿಕಾರಿಗಳಿಗೆ ಮುಕ್ತ ಅವಕಾಶ ಕೊಡಲಾಗಿದೆ ಎಲ್ಲ ರಸ್ತೆಗಳಲ್ಲಿ ಸಿಸಿ ಟಿವಿ ಅಳವಡಿಕೆಗೆ ಕ್ರಮ ಕೈಗೊಂಡಿದ್ದು ಕೆಲವೊಂದು ರಸ್ತೆಗಳಲ್ಲಿ ಕಸ ನೋಡಿದ್ರೆ ನಾಚಿಕೆಯಾಗುತ್ತೆ ಇದು ನನ್ನ ಗಮನಕ್ಕೆ ಬಂದಿದೆ ಈ ಬಗ್ಗೆ ಸೂಕ್ತ ತೀರ್ಮಾನ ಮಾಡುತ್ತೇನೆ ಎಂದ್ರು.

ಕೊಡಗು ಸಂತಸ್ಥರಿಗೆ ಸರ್ಕಾರ ಸ್ಪಂದಿಸಿದೆ ಕೊಡಗು ಜನರ ಪುನರುಜ್ಜೀವನಕ್ಕೆ ಕ್ರಮ ತೆಗದುಕೊಳ್ಳಲಾಗಿದೆ ಒಂದು ಮನೆಗೆ ೧೦ ಲಕ್ಷ ವೆಚ್ಚದಲ್ಲಿ ನಿರ್ಮಾಣ ಎರಡು ಬೆಡ್ ರೂಂ ಇರುವ ಮನೆಗಳ ನಿರ್ಮಾಣ ೧೦೦೦ ಮನೆಗಳು ನಿರ್ಮಾಣಕ್ಕೆ ಸೂಚನೆ ನೀಡಿದ್ದೇನೆ ಎಂದ್ರು.

ನಾನು ಟೆಂಪಲ್ ರನ್ ಮಾತ್ರ ಮಾಡುತ್ತಿಲ್ಲ ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಕೊಟ್ಟಿದ್ದೇನೆ ನಾನು ಸಿಎಂ ಆದ ಮೇಲೆ ಟೆಂಪಲ್ ರನ್ ಮಾಡುತ್ತಿಲ್ಲ ಮೊದಲಿನಿಂದಲೂ ನಾನು ಟೆಂಪಲ್ ರನ್ ಮಾಡುತ್ತಿದ್ದೇನೆ ಟೆಂಪಲ್ ರನ್ ಜೊತೆ ಪ್ರಧಾನಿ, ಕೇಂದ್ರ ಮಂತ್ರಿಗಳನ್ನ ಭೇಟಿಯಾಗುತ್ತಿದ್ದೇನೆ ರಾಜ್ಯದ ಅಭಿವೃದ್ಧಿ ಬಗ್ಗೆ ಕೇಂದ್ರ ಮಂತ್ರಿಗಳನ್ನ ಭೇಟಿಯಾಗೋದು ತಪ್ಪಾ? ಅವ್ರ ಬಳಿ ಡೀಲ್ ಮಾಡೋದಕ್ಕೆ ಪದೇ ಪದೇ ಹೋಗ್ತಿದ್ದಾರೆ ಎಂದು ಹೇಳುತ್ತಾರೆ ಟೀಕೆ ಮಾಡಬೇಕೆಂದು ಟೀಕೆ ಮಾಡೋದು ಬೇಡ
೫ ತಿಂಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ ಎಂದ್ರು.

ಐದು ಕ್ಷೇತ್ರ ಉಪಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಗೆಲ್ಲಲ್ಲಿದೆ ಕಾಂಗ್ರೆಸ್- ಜೆಡಿಎಸ್ ವಿಶ್ವಾಸದಿಂದ ಕೆಲಸ ಮಾಡುತ್ತಿದೆ ಸಣ್ಣಪುಟ್ಟ ಸಮಸ್ಯೆ ಇರೋದು ಸಹಜ‌ ಇದರಿಂದ ಮೈತ್ರಿ ಸರ್ಕಾರಕ್ಕೆ ಧಕ್ಕೆ ಆಗಲ್ಲ ಹೊಸ ರಾಜಕೀಯ ಪರಿವರ್ತನೆ ಕರ್ನಾಟಕದಿಂದ ಪ್ರಾರಂಭವಾಗಲಿದೆ ಕರ್ನಾಟಕದ ರಾಜಕಾರಣ ಮುಂದಿನ ಲೋಕಸಭೆ ಚುನಾವಣೆ ಮೇಲೆ ನೇರ ಪರಿಣಾಮ ಬೀರಲಿದೆ ಎಂದ್ರು.

Related Articles

Comments (0)

Leave a Comment