ಬಸ್ ಪ್ರಯಾಣದರ ಏರಿಕೆ ಇಲ್ಲ: ಸಿಎಂ
- by Suddi Team
- October 12, 2018
- 186 Views

ಬೆಂಗಳೂರು: ರಾಜ್ಯದಲ್ಲಿ ಸಧ್ಯಕ್ಕೆ ಬಸ್ ಪ್ರಯಾಣದರದಲ್ಲಿ ಯಾವುದೇ ಹೆಚ್ಚಳ ಮಾಡುವುದಿಲ್ಲ,ಸಾರಿಗೆ ಸಂಸ್ಥೆಗಳ ನಷ್ಟ ಸರಿದೂಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸಾರಿಗೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಸಿಎಂ,ಸಾರಿಗೆ ಇಲಾಖೆ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೇವೆ.ಸಂಸ್ಥೆಗಳು ನಷ್ಟದಲ್ಲಿ ಇವೆ.3000 ಕೋಟಿ ನಷ್ಟ ಆಗಿದೆ.ನಷ್ಟ ಸರಿದೂಗಿಸಲು ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದೇನೆ.ಸಿಎಸ್ ಅಧ್ಯಕ್ಷತೆಯಲ್ಲಿ ಸಾರಿಗೆ ಇಲಾಖೆ, ಆರ್ಥಿಕ ಇಲಾಖೆಗೆ ಅಧಿಕಾರಗಳ ಜೊತೆ ಸಭೆ ಮಾಡಲು ಸೂಚನೆ ನೀಡಿದ್ದೇನೆ.ಅಧಿಕಾರಿಗಳ ಸಭೆ ಬಳಿಕ ನಾನು ಇನ್ನೊಂದು ಸಭೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ,ಸಧ್ಯದ ಮಟ್ಟಿಗೆ ಬಸ್ ಪ್ರಯಾಣದರ ಹೆಚ್ಚಳ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ರು.
ಕೆಪಿಎಸ್ ಸಿ ಅಧ್ಯಕ್ಷ ಶ್ಯಾಮ್ ಭಟ್ ಅಕ್ರಮ ಆರೋಪದ ಬಗ್ಗೆ ಮಾಹಿತಿ ಇಲ್ಲ ಇದು ನನ್ನ ಅವಧಿಯಲ್ಲಿ ಆಗಿಲ್ಲ.ಇದು ಸೂಕ್ಷ್ಮ ವಿಚಾರ.ನನ್ನ ಅವಧಿಯಲ್ಲಿ ಯಾರೇ ಅಕ್ರಮ ಮಾಡಿದ್ರು ಕ್ರಮ ತೆಗೆದುಕೊಳ್ಳುತ್ತೇನೆ.ಯಾವುದನ್ನು ಸುಮ್ಮನೆ ಬಿಡೋದಿಲ್ಲ ನನ್ನ ಇತಿಮಿತಿಯಲ್ಲಿ ಕ್ರಮ ತೆಗೆದುಕೊಳ್ತೀನಿ ಎಂದ್ರು.
ಮಾಧ್ಯಮದ ಕೊಠಡಿ ಬದಲಾವಣೆ ವಿಚಾರ ಗೊಂದಲವಾಗಿತ್ತು.ಮೊದಲ ಕೊಠಡಿಯೇ ನೀಡಲು ಅಧಿಕಾರಿಗೆ ಸೂಚನೆ ನೀಡಿದ್ದೇನೆ. ಈಕುರಿತು ಮಾಧ್ಯಮಗಳಿಗೆ ಅಸಮಾಧಾನವಿದೆ.ಅರಸು ಕಾಲದಲ್ಲಿ ನೀಡಿದ ಕೊಠಡಿ ಇದು.ನಿಮಗೆ ಅದು ಅಡ್ಜೆಸ್ಟ್ ಆಗಿದೆ.ಹೀಗಾಗಿ ಅಧಿಕಾರಿಗಳಿಗೆ ಅದೇ ಕೊಠಡಿ ನೀಡಲು ಸೂಚನೆ ನೀಡಿದ್ದೇನೆ ಎಂದ್ರು.
Related Articles
Thank you for your comment. It is awaiting moderation.
Comments (0)