ಜಯನಗರ ಚುನಾವಣೆ: ಕಣದಿಂದ ಅಭ್ಯರ್ಥಿ ಹಿಂಪಡೆದ ಜೆಡಿಎಸ್!
- by Suddi Team
- June 5, 2018
- 116 Views
ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಚುನಾವಣೆಯಲ್ಲಿ ವಿಫಲವಾಗಿದ್ದ ಮೈತ್ರಿ ಸರ್ಕಾರ ಮೈತ್ರಿ ಜಯನಗರ ಕ್ಷೇತ್ರದಲ್ಲಿ ಯಶಸ್ವಿಯಾಗಿದೆ.ಜೆಡಿಎಸ್ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿದ್ದು ಒಮ್ಮತದ ಅಭ್ಯರ್ಥಿಯಾಗಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾರೆಡ್ಡಿ ಕಣದಲ್ಲಿ ಉಳಿದಿದ್ದು ಬಿಜೆಪಿ ಕ್ಷೇತ್ರವನ್ನು ಕೈ ತೆಕ್ಕೆಗೆ ಪಡೆಯಲು ಸಿದ್ದತೆ ನಡೆಸಿದ್ದಾರೆ.
ಜೂನ್ 11 ರಂದು ನಡೆಯಲಿರುವ ಜಯನಗರ ವಿಧಾನಸಭೆ ಚುನಾವಣಾ ಕಣದಿಂದ ಜೆಡಿಎಸ್ ಅಭ್ಯರ್ಥಿ ಕಾಳೇಗೌಡ ಜೆಡಿಎಸ್ ವರಿಷ್ಠ ದೇವೇಗೌಡರ ಸೂಚನೆ ಮೇರೆಗೆ ಹಿಂದೆ ಸರಿದಿದ್ದಾರೆ.ಮೈತ್ರಿ ಸರ್ಕಾರಕ್ಕೆ ಪೂರಕವಾಗಿ ಜೆಡಿಎಸ್ ಅಭ್ಯರ್ಥಿ ಹಿಂಪಡೆದಿದ್ದು,ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುವಂತೆ ಪಕ್ಷದ ಕಾರ್ಯಕರ್ಯರು, ಮುಖಂಡರಿಗೆ ದೇವೇಗೌಡ ಸೂಚನೆ ನೀಡಿದ್ದಾರೆ.
ಇದಕ್ಕೂ ಮುನ್ನ ದೇವೇಗೌಡರ ನಿವಾಸಕ್ಕೆ ರಾಮಲಿಂಗಾರೆಡ್ಡಿ ಭೇಟಿ ನೀಡಿದರು.ರಾಮಲಿಂಗಾರೆಡ್ಡಿಗೆ ಕುಪ್ಪೇಂದ್ರ ರೆಡ್ಡಿ, ಸಿ.ಎಸ್ ಪುಟ್ಟರಾಜು ಸಾತ್ ನೀಡಿದರು.ಮೈತ್ರಿ ಸರ್ಕಾರದ ಪರವಾಗಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿ ಜೆಡಿಎಡ್ ಅಭ್ಯರ್ಥಿ ಕಣದಿಂದ ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದರು. ನಮ್ಮ ಸ್ಪರ್ಧೆ ಬಿಜೆಪಿಗೆ ಅನುಕೂಲವಾಗಲಿದೆ ಹಾಗಾಗಿ ಮುಂದಿನ ರಾಜಕೀಯ ದೃಷ್ಠಿಯನ್ನಿಟ್ಟುಕೊಂಡು ಪರಸ್ಪರ ಸಹಕಾರ ಮಾಡಿಕೊಂಡು ಹೋಗೋಣ ಎಂದು ರಾಮನಗರದಲ್ಲಿ ಒಮ್ಮತದ ಅಭ್ಯರ್ಥಿಯಾಗಿ ಜೆಡಿಎಸ್ ಬೆಂಬಲಿಸುವ ಪರೋಕ್ಷ ಸುಳಿವು ನೀಡಿದರು. ಇದಕ್ಕೆ ಸ್ಪಂಧಿಸಿದ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಪಕ್ಷದ ಅಭ್ಯರ್ಥಿಯನ್ನು ಕಣದಿಂದ ಹಿಂದಕ್ಕೆ ಪಡೆಯುವಂತೆ ಸೂಚನೆ ನೀಡಿದರು.
ದೇವೇಗೌಡರ ಭೇಟಿ ಬಳಿಕ ಮಾತನಾಡಿದ ರಾಮಲಿಂಗಾರೆಡ್ಡಿ,
ಬಿಬಿಎಂಪಿ ಮೈತ್ರಿ ಹಿನ್ನಲೆ ಅನೇಕ ಬಾರಿ ದೇವೇಗೌಡರ ಭೇಟಿ ಮಾಡಿದ್ದೆ.ಆದರೆ ಚುನಾವಣೆಯಲ್ಲಿ ಗೆದ್ದ ನಂತರ ಬಂದಿರಲಿಲ್ಲ. ಈಗ ಬಂದಿದ್ದೇನೆ ಅಷ್ಟೆ. ಜಯನಗರ ಚುನಾವಣೆ ಸಂಬಂಧವೂ ಮಾತನಾಡಲು ಬಂದಿಲ್ಲ.ಯಾವುದೇ ಹೊಂದಾಣಿಕೆ ಬಗ್ಗೆ ಚರ್ಚೆ ಆಗಿಲ್ಲ ಎಂದರು.
ಜೆಡಿಎಸ್ ಅಭ್ಯರ್ಥಿ ನಾಮಪತ್ರ ಹಾಕಿದ್ದಾರೆ. ನಾವೂ ಹಾಕಿದ್ದೇವೆ. ಚುನಾವಣೆ ನಡೆಯುತ್ತದೆ ಅಷ್ಟೆ ಎನ್ನುವ ಮೂಲಕ ಪರೋಕ್ಷವಾಗಿ ಜೆಡಿಎಸ್ ಬೆಂಬಲ ನೀಡಿದೆ ಎನ್ನುವ ಸುಳಿವು ನೀಡಿದರು.
ಹಿರಿಯ ಸಚಿವರಿಗೆ ಸ್ಥಾನ ಇಲ್ಲ ಅನ್ನೋ ವಿಚಾರಕ್ಕೆ ದೇವೆಡಗೌಡರ ಭೇಟಿಯಾದ್ರ ಅನ್ನೋ ಪ್ರಶ್ನೆ ಪ್ರತಿಕ್ರಿಯೆ ನೀಡಿದ ಅವರು,ನಾನು ಸಚಿವ ಸ್ಥಾನ ಬೇಕು ಅಂತಾನೇ ಕೇಳಿಲ್ಲ. ಇನ್ನು ಯಾವ ಖಾತೆ ಬೇಕು ಅಂತ ಕೇಳ್ತೀನಾ ಎಂದರು.
Related Articles
Thank you for your comment. It is awaiting moderation.


Comments (0)