ಮೈತ್ರಿ ಸರ್ಕಾರದ ಜವಾಬ್ದಾರಿ ಸಿದ್ದು ಹೆಗಲ ಮೇಲಿದೆ: ಎಚ್‌ಡಿಡಿ

ಹಾಸನ: ಮೈತ್ರಿ ಸರ್ಕಾರ ಯಾವುದೇ ಕಾರಣಕ್ಕೂ ಅಸ್ಥಿರಗೊಳ್ಳುವುದಿಲ್ಲ, ಸರ್ಕಾರದ ಜವಾಬ್ದಾರಿ ಸಿದ್ದರಾಮಯ್ಯ ಅವರ ಹೆಗಲ ಮೇಲಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಅವರು ಸಿಎಂಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭವಿಷ್ಯ ನುಡಿದರು.

ಹಾಸನ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ
ಮಾತನಾಡಿದ ಮಾಜಿ ಪ್ರಧಾನಿ ಎಚ್ಡಿ.ದೇವೇಗೌಡ, ಈ ಸರ್ಕಾರ ಯಾವುದೇ ಕಾರಣಕ್ಕೂ ಅಸ್ಥಿರ ಆಗಲ್ಲ ನಾನು ಭವಿಷ್ಯ ನುಡಿಯುತ್ತಿದ್ದೇನೆ ಸಿದ್ಧರಾಮಯ್ಯ ನಾನು ಒಂದು ಕಾಲದಲ್ಲಿ ಉತ್ತಮ ಸ್ನೇಹಿತರು, ಕೆಲಕಾರಣದಿಂದ ದೂರಾಗಬೇಕಾಯಿತು. ಆದರೆ, ಇಂದು ಸಿದ್ದರಾಮಯ್ಯನವರು ನಮ್ಮ ಜೊತೆ ಕೈಜೋಡಿಸಿದ್ದಾರೆ. ಈ ಸರ್ಕಾರದ ಜವಾಬ್ದಾರಿ ಅವರ ಹೆಗಲ ಮೇಲಿದೆ. ಅದಕ್ಕೆ ಸಿದ್ದರಾಮಯ್ಯ ಅವರು ಇಂದು ಸಿಎಂ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಶಾಸಕಾಂಗ ನಾಯಕರಾಗಿ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದರು.

ಮಾಧ್ಯಮದವರು ದಯವಿಟ್ಟು ಇನ್ನು ಮುಂದೆ ಅಸ್ಥಿರ ಸರ್ಕಾರವೆಂದು ಜನರಿಗೆ ಹೇಳಬೇಡಿ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಸಾಮಾನ್ಯವಾಗಿ ಸಣ್ಣ ಪುಟ್ಟ ಲೋಪದೋಷಗಳು ಇರೋದು ನಿಜ ಅದನ್ನು ಸರಿಪಡಿದಿಕೊಳ್ಳುತ್ತೇವೆ ಮತ್ತು ಅದನ್ನ ಸ್ವಾಭಾವಿಕವಾಗಿ ಸರಿಪಡಿಸೋ ಶಕ್ತಿ 135 ವರ್ಷ ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷಕ್ಕೂ ಇದೆ ಎಂದರು.

104 ಸ್ಥಾನ ಪಡೆದ ಬಿಎಸ್ ವೈ ಅವರಿಗೆ ಕೋಪ ಇರುವುದು ಸಹಜ. ಆದರೆ, ಅವರು ವಿಶ್ವಾಸ ಮತ ಯಾಚನೆಯಲ್ಲಿ ವಿಫಲವಾದ ಮೇಲೆ ಕುಮಾರಸ್ವಾಮಿ ಬಹುಮತ ಸಾಭೀತುಪಡಿಸಿ ಮುಖ್ಯಮಂತ್ರಿ ಆಗಿದ್ದಾರೆ ದಯವಿಟ್ಟು ಇದನ್ನ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಮನವಿ ಮಾಡಿದರು.

ನಾನು ಪ್ರಧಾನಿ ಆಗಿದ್ದಾಗ ವಿರೋಧ ಪಕ್ಷದಲ್ಲಿದ್ದ
ವಾಜಪೇಯಿ ಅವರಾಗಲಿ ಅಥವಾ ಬಿಜೆಪಿ ಪಕ್ಷವಾಗಲಿ ಒಂದು ದಿನವೂ ಸದನದ ಘನತೆಗೆ ಅಡ್ಡಿ ಪಡ್ಡಿಸಿಲ್ಲ ಅಂತಹ ನಾಯಕರ ಪಕ್ಷದಲ್ಲಿ ಬೆಳೆದ ರಾಜ್ಯದ ಹಿರಿಯ ನಾಯಕರಾದ ಯಡಿಯೂರಪ್ಪ ನವರು ಯೋಚಿಸಿ ನಡೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ರಾಜ್ಯದ ಇತಿಹಾಸದಲ್ಲಿ ರೈತರ ದೊಡ್ಡ ಮಟ್ಟದ ಸಾಲ ಮನ್ನವಾಗಿದೆ. ಬಡವರಿಗೆ ತೊಂದರೆ ಆಗಬಾರದು ಎಂದು ಖಾಸಗಿ ಸಾಲವನ್ನು ಸಹ ಮನ್ನಾ ಮಾಡಲಾಗಿದೆ. ಪೆಟ್ರೋಲ್,ಡೀಸೆಲ್ ಬೆಲೆಯನ್ನು ಸಹ ಕಡಿಮೆ ಮಾಡಿದ್ದಾರೆ. ಈ ದಿನ ಹೇಳುತ್ತಿದ್ದೀನಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಜಿಲ್ಲೆಯಲ್ಲಿ ನಾನು ಅಭಿಪ್ರಾಯ ಪಟ್ಟ ಎಲ್ಲಾ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ಆ ಕೆಲಸಗಳನ್ನ ಈ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಾಡೋ ಭಾಗ್ಯ ದೊರಕಿದೆ ಎಂದರು.

Related Articles

Comments (0)

Leave a Comment