- ಬೆಂಗಳೂರು
- ಮುಖ್ಯ ಮಾಹಿತಿ
- ರಾಜ್ಯ
- ಸಾಮಾಜಿಕ
- Like this post: 0
ತಂತ್ರಜ್ಞಾನ ಬಳಕೆಯಿಂದ ಅಂಧರು ಹೆಚ್ಚು ಸಾಧನೆ ಮಾಡಬಹುದಾಗಿದೆ: ಬಸವರಾಜ್
- by Suddi Team
- August 26, 2018
- 23 Views

ಬೆಂಗಳೂರು: ತಂತ್ರಜ್ಞಾನದ ಕ್ರಾಂತಿ ಅಂಧರಿಗೆ ಸಾಕಷ್ಡು ದೊಡ್ಡ ಮಟ್ಟದ ಸಾಧನೆ ಮಾಡುವ ಅವಕಾಶ ಮಾಡಿಕೊಟ್ಟಿದೆ ಎಂದು ಶೇಷಾದ್ರಿಪುರಂಲ್ಲಿರುವ ಅಂಗವಿಕಲರ ಅಧಿನಿಯಮ ರಾಜ್ಯ ಆಯುಕ್ತ ವಿ.ಎಸ್. ಬಸವರಾಜು ತಿಳಿಸಿದರು.
ಬೆಂಗಳೂರಿನ ಕಬ್ಬನ್ ಉದ್ಯಾನದಲ್ಲಿರುವ ಸಚಿವಾಲಯ ಕ್ಲಬ್ ನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂದರಿಗೆ ಸೂಕ್ರ ಅಡಿಪಾಯ ಹಾಕಿಕೊಟ್ಟರೆ ಉತ್ತಮ ಸಾಧನೆ ಮಾಡುತ್ತಾರೆ. ಸರ್ಕಾರ ಈ ನಿಟ್ಟಿನಲ್ಲಿ ಹಮನ ಹರಿಸಬೇಕು. ನಾವು ಕೊಡುವ ಪ್ರೋತ್ಸಾಹ ಉಳಿದ ಕ್ಷೇತ್ರದಲ್ಲಿ ಕೂಡ ಅವರು ಅವಕಾಶ ಗಿಟ್ಟಿಸಲು ಸಹಾಯಕವಾಗುತ್ತದೆ. ಇವರ ಬುದ್ದಿಮತ್ತೆ ಬಳಸಿಕೊಂಡರೆ ದೇಶಕ್ಕೆ ಹೊಸ ಕೊಡುಗೆ ನೀಡಬಹುದಾಗಿದೆ ಎಂದರು.
ನಾನು ಅಂಧರ ಒಟ್ಟಿಗೆ ಬೆಳೆದವನು. ಅವರಿಂದ ಪಡೆದ ಕಲಿಕೆ ಇಂದು ನನ್ನನ್ನು ಈ ಹಂತಕ್ಕೆ ಬೆಳೆಸಿದೆ. ಇಂದು ಆಯುಕ್ತನಾಗಿರುವಲ್ಲಿ ಇವರ ಕೊಡುಗೆ ಅಪಾರವಾಗಿದೆ. ಇವರ ಖರ್ಚು ವೆಚ್ಚ ಹೆಚ್ಚಿರುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಇವರಿಗೆ ಅವಕಾಶ ಸಿಗುವಂತ ಚಿಂತನೆ ಮಾಡಬೇಕಿದೆ. ಸಾಮಾನ್ಯರಿಗಿಂತ ಇವರಿಗೆ ಮೂರರಷ್ಟು ಹೆಚ್ಚು ಖರ್ಚಿರುತ್ತದೆ. ಇದರಿಂದ ಇವರಿಗೆ ಉಚಿತ ಬಸ್ ಪಾಸ್ ನೀಡುವ ಕಾರ್ಯ ಆದಲ್ಲಿ ಕೊಂಚ ವೆಚ್ಚ ಕಡಿಮೆ ಆಗಲಿದೆ. ಸರ್ಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಗಮನಿಸಬೇಕು. ಅದನ್ನು ನಾವು ಕೂಡ ಮೂಡಿಸುತ್ತೇವೆ ಎಂದರು.
ನಿಮ್ಮ ಸಮಸ್ಯೆ, ಸಾಧನೆಗಳನ್ನು ವೆಬ್ಸೈಟ್ ಗೆ ಅಳವಡಿಸಿ. ಇದರಿಂದ ನಿಮ್ಮ ಬಗ್ಗೆ ಬಹುಬೇಗ ನಿರಗಧಾರ ಕೈಗೊಳ್ಳಲು ಸಹಕಾರಿಯಾಗಲಿದೆ. ನಿಮ್ಮ ವೆಬ್ಸೈಟ್ ಸರ್ಕಾರಕ್ಕೆ ಆಧಾರ, ದಾಖಲೆಯಾಗಿ ಲಭಿಸಬೇಕು. ನಿಮಗೆ ಕಾನೂನಿನ ಗೌರವಕೂಡ ಇದೆ. ಇವನ್ನು ನೀವುಬಳಸಿಕೊಳ್ಳಬೇಕು. ಸರ್ಕಾರ ಹೊಸ ಕಾನೂನು ಜಾರಿಗೆ ತರಲಿದ್ದು, ಖಾಸಗಿ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಲಭಿಸಲಿದೆ. ನೀವು, ನಿಮ್ಮ ಸಂಘಟನೆಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂಬ ಸಲಹೆ ಇತ್ತರು.
ಸಂಘದ ಪ್ರಧಾನ ಕಾರ್ಯದರ್ಶಿ ಕೇಶವಮೂರ್ತಿ ಮಾತನಾಡಿ, ಸಂಘ ಸ್ಥಾಪನೆಯಾದ ಒಂದು ವರ್ಷದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ. ನಮಗೆ ಉಳಿದವರಿಗಿಂತ ಭಿನ್ನವಾದ ಸಮಸ್ಯೆ ಇರುತ್ತದೆ. ಇದನ್ನು ಸರ್ಕಾರಕ್ಕೆ ಮನದಟ್ಟು ಮಾಡಲು ಸಂಘ ಅವಶ್ಯಕವಾಗಿತ್ತು. 20 ಇಲಾಖೆಯನ್ನು ಈಗಾಹಲೇ ಸಂಪರ್ಕಿಸಿದ್ದೇವೆ. ಉಚಿತ ಬಸ್ ಪಾಸ್ ಇತ್ಯಾದಿ ಬೇಡಿಕೆ ಸರ್ಕಾರದ ಮುಂದಿದೆ. ಅದು ಆದಷ್ಟು ಬೇಗ ಬಗೆಹರಿಯಬೇಕಿದೆ. 6 ವರ್ಷದ ಈಚೆ ಯಾವುದೇ ಅಂಧರಿಗೆ ಉದ್ಯೋಗ ಸಿಕ್ಕಿಲ್ಲ. ಕೆಲಸಕ್ಕೆ ಸೇರುತ್ತಿದ್ದಂತೆ ಬುನಾದಿ ತರಬೇತಿ ನೀಡಲಾಗುತ್ತದೆ. ನಮಗೆ ಆರು ವರ್ಷ ಕಳೆದರೂ ತರಬೇತಿ ಸಿಕ್ಕಿಲ್ಲ. ನಮ್ಮ ಸೇವೆಯ ಸದ್ಬಳಕೆ ಆಗಬೇಕು. ಎಲ್ಲ ಕೆಲಸ ಗಣಕಯಂತ್ರ ಮೂಲಕವೇ ಆಗಬೇಕಿರುವುದರಿಂದ ಇ ಆಡಳಿತದ ಸೇವೆಯ ಅಗತ್ಯವಿದೆ ಎಂದು ಮನವಿ ಮಾಡಿದರು.
ಅಧ್ಯಕ್ಷತೆಯನ್ನು ಗದಗ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಹಾಗೂ ಸಂಘದ ಅಧ್ಯಕ್ಷ ರಮೇಶ್ ಸಂಕರೆಡ್ಡಿ, ಸರ್ಕಾರದ ಅಧಿನ ಕಾರ್ಯದರ್ಶಿ ಜಯಲಕ್ಷ್ಮಿ, ಮೈಸೂರಿನ ರಾಜ್ಯ ರಾಜ್ಯ ಆಡಳಿತ ತರಬೇತಿ ಕೇಂದ್ರದ ಜಂಟಿ ನಿರ್ದೇಶಕಿ ವಿ ಭಾಗ್ಯಲಕ್ಷ್ಮಿ, ಇ-ಆಡಳಿತ ಕೇಂದ್ರ ಯೋಜನಾ ನಿರ್ದೇಶಕ ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು. ಸಂಘದ ವೆಬ್ಸೈಟ್ ಅನಾವರಣಗೊಳಿಸಲಾಯಿತು. ಸಂಘದ ವತಿಯಿಂದ ವಿವಿಧ ಮನವಿಪತ್ರವನ್ನು ಸಲ್ಲಿಸಲಾಯಿತು. ವಿಶೇಷ ಸಾಧನೆ ಮಾಡಿದವರನ್ನು ಗೌರವಿಸಲಾಯಿತು.
Related Articles
Thank you for your comment. It is awaiting moderation.
Comments (0)