ಬೆಂಗಳೂರು ತಲುಪಿದ ವಾಜಪೇಯಿ ಅಸ್ಥಿ ಕಲಶ
- by Suddi Team
- August 22, 2018
- 101 Views
ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿ ಕಲಶವನ್ನು ಇಂದು ಬೆಂಗಳೂರಿಗೆ ತರಲಾಗಿದ್ದು, ಬಿಜೆಪಿ ಕಚೇರಿಯಲ್ಲಿ ಅಸ್ಥಿ ಕಲಶಕ್ಕೆ ಪುಷ್ಪಾರ್ಚನೆ ನಡೆಸಲಾಗುತ್ತಿದೆ.
ದೆಹಲಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಾಗೂ ಅಟಲ್ ಜೀ ಕುಟುಂಬದ ಸದಸ್ಯರಿಂದ ಮಾಜೀ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿಕಲಶವನ್ನು ಸ್ವೀಕರಿಸಿದರು.
ನಂತರ ಬೆಂಗಳೂರು ಕಡೆ ಹೊರಟ ಯಡಿಯೂರಪ್ಪ ಸಂಜೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದರು.ಪಕ್ಷದ ಮುಖಂಡರು ಅಸ್ಥಿ ಕಲಶವನ್ನು ಸ್ವಾಗತಿಸಿದ್ದು, ರಾಜ್ಯ ಬಿಜೆಪಿ ಕಾರ್ಯಾಲಯದ ವರೆಗೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಅಸ್ಥಿಕಲಶವನ್ನು ಮೆರವಣಿಗೆಯಲ್ಲಿ ಬಿಜೆಪಿ ಕಚೇರಿಗೆ ತರಲಾಯಿತು. ಇಂದು ರಾತ್ರಿಯ ವರೆಗೆ ಪಕ್ಷದ ಕಾರ್ಯಾಲಯದಲ್ಲಿ ಪುಷ್ಪಾರ್ಚನೆ ಮಾಡಲಿದ್ದು ನಾಳೆಯಿಂದ ರಾಜ್ಯದ ಪವಿತ್ರ ನದಿಗಳಲ್ಲಿ ಅಸ್ಥಿ ಕಲಶ ಬಿಡಲಾಗುತ್ತದೆ.
Related Articles
Thank you for your comment. It is awaiting moderation.


Comments (0)