ಮಹದಾಯಿ ತೀರ್ಪು: ಕನ್ನಡಪರ ಸಂಘಟನೆಗಳಿಂದ ಸಂಭ್ರಮಾಚರಣೆ
- by Suddi Team
- August 14, 2018
- 577 Views

ಹುಬ್ಬಳ್ಳಿ: ಮಹದಾಯಿ ನದಿ ನೀರು ಹಂಚಿಕೆ ವಿವಾದ ಪ್ರಕರಣದಲ್ಲಿ ರಾಜ್ಯಕ್ಕೆ ನಿರೀಕ್ಷಿತ ಮಟ್ದ ನೀರು ಹಂಚಿಕೆ ಮಾಡದಿದ್ದರೂ ಕುಡಿಯುವ ನೀರಿಗೆ ಆದ್ಯತೆ ನೀಡಿದ ಟ್ರಿಬ್ಯುನಲ್ ತೀರ್ಪು ಸ್ವಾಗತಿಸಿ ಸಂಭ್ರಮಾಚರಣೆ ನಡೆಸಲಾಯಿತು.
ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಸೇರಿದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಜಯಘೋಷಗಳನ್ನು ಮೊಳಗಿಸಿ ಸಂಭ್ರಮಾಚರಣೆ ಮಾಡಿದರು.ಪಟಾಕಿಗಳನ್ನು ಸಿಡಿಸಿ ಹರ್ಷ ವ್ಯಕ್ತಪಡಿಸಿದ್ರು.
ರಾಜ್ಯದ ಒಟ್ಟಾರೆ ನಿರೀಕ್ಷೆ ಈಡೇರಿಲ್ಲ ಆದರೆ ಕನಿಷ್ಠ ಕುಡಿಯುವ ನೀರಿಗೆ ಅವಕಾಶ ಕಲ್ಪಿಸಿದೆ.ಕೇಳಿದ್ದಕ್ಕಿಂತ ಹೆಚ್ಚು ಸಿಕ್ಕಿದೆ.ಇದು ಮಹದಾಯಿ ಹೋರಾಟಕ್ಕೆ ಸಿಕ್ಕ ಜಯ ಎಂದು ಹೋರಾಟಗಾರರು ಸಂತಸ ವ್ಯಕ್ತಪಡಿಸಿದ್ರು.
Related Articles
Thank you for your comment. It is awaiting moderation.
Comments (0)