ಬಿಜೆಪಿ ರಾಜಕೀಯಕ್ಕಾಗಿ ರಾಜ್ಯ ಒಡೆಯುವ ಮಾತನ್ನಾಡುತ್ತಿದೆ: ಪರಂ

ಬೆಂಗಳೂರು: ನಮ್ಮ ಸರಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿದ್ದು, ಬಿಜೆಪಿ ರಾಜಕೀಯ ಮಾಡಲೆಂದೇ ರಾಜ್ಯ ಒಡೆಯುವ ಮಾತನ್ನಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಕಾರ್ಯಕ್ರಮದ ಬಳಿಕ‌ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮದು ಅಖಂಡ ಕರ್ನಾಟಕ. ರಾಜ್ಯವನ್ನು ಒಡೆಯುವ ಮಾತನ್ನು ಯಾರೂ ಆಡಬಾರದು. ಬಿಜೆಪಿಯವರು ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಬಂದ ಎಲ್ಲ‌ ಸರಕಾರಗಳು ಉತ್ತರ ಕರ್ನಾಟಕಕ್ಕೆ ಅವರದ್ದೇ ಆದ ಕೊಡುಗೆ ನೀಡಿವೆ. ನಮ್ಮ ಸರಕಾರ ಆ ಭಾಗದವರಿಗೆ ವ್ಯತಿರಿಕ್ತವಾಗಿ ಯಾವ ಕೆಲಸ ಮಾಡುವುದಿಲ್ಲ. ಎಸ್‌.ಎಂ. ಕೃಷ್ಞ ಅವರ ಕಾಲದಲ್ಲಿ ಹಿಂದುಳಿದ ತಾಲೂಕುಗಳಿಗೆ ಬಿಡುಗಡೆ ಮಾಡಿದ ಅನುದಾನದಿಂದ ಸಾಕಷ್ಟು ಕೆಲಸವಾಗಿದೆ. ಈ ಕಾರ್ಯಕ್ರಮಗಳನ್ನು ನಮ್ಮ ಸರಕಾರವೂ ಮುಂದುವರೆಸಿಕೊಂಡು ಹೋಗುತ್ತಿವೆ. ನಮ್ಮೆಲ್ಲರದ್ದೂ ಒಂದೇ ಭಾಷೆ, ನೆಲ. ಎಲ್ಲರೂ ಕನ್ನಡಿಗರೇ ಎಂದು ಹೇಳಿದರು.

ಅಕ್ರಮ ವಲಸಿಗರ ಬಗ್ಗೆ ಈಗಾಗಲೇ ಮಾಹಿತಿ ಬಂದಿದ್ದು, ಪೊಲೀಸರು ಇಂಥವರನ್ನು ಹುಡುಕುವ ಕೆಲಸದಲ್ಲಿದ್ದಾರೆ. ಆಫ್ರಿಕಾ ದೇಶದ ೧೦೭ ವಿದ್ಯಾರ್ಥಿಗಳ ವೀಸಾ ಅವಧಿ ಮುಗಿದಿದ್ದರೂ ಇಲ್ಲೇ ಇರುವುದು ಗಮನಕ್ಕೆ ಬಂದಿದ್ದು,ವಾಪಾಸ್ ಕಳುಹಿಸುವ ಕೆಲಸ ಮಾಡಲಾಗಿದೆ‌.. ಈ ರೀತಿ ಅಧಿಕೃತ ಕಾಗದಪತ್ರ ಇಲ್ಲದಿರುವವರನ್ನು ವಾಪಸ್ ಕಳುಹಿಸಲಾಗುವುದು ಎಂದರು.

Related Articles

Comments (0)

Leave a Comment