ಮೋದಿಗೆ ದೇಶಕ್ಕಿಂತ ಸ್ನೇಹಿತರೇ ಮುಖ್ಯ: ದಿನೇಶ್ ಗುಂಡೂರಾವ್ ಟೀಕೆ
- by Suddi Team
- July 26, 2018
- 57 Views
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ರಕ್ಷಣೆಗಿಂತ ಸ್ನೇಹಿತರ ರಕ್ಷಣೆ ಮುಖ್ಯ ಅಂತಾ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ರು. ಜೊತೆಗೆ ಮೈತ್ರಿ ಸರಕಾರದ ಪಾಲುದಾರ ಪಕ್ಷವಾಗಿ ಕೆಲ ವಿಚಾರದಲ್ಲಿ ಸಿಎಂ ವಿರುದ್ಧವೂ ಪರೋಕ್ಷ ಅಸಮಧಾನ ವ್ಯಕ್ಯಪಡಿಸಿದ್ರು.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಒಂದೊಂದು ಏರ್ ಕ್ರಾಫ್ಟ್ ಗೆ 1670ಕೋಟಿ ಕೊಟ್ಟಿದ್ದಾರೆ ಫ್ರಾನ್ಸ್ ಆನ್ಯುಯಲ್ ರಿಪೋರ್ಟ್ ನಲ್ಲಿ ದರ ರಿಪೋರ್ಟ್ ಇದೆ
ಮೋದಿ ದೇಶದ ಹಿತಾಸಕ್ತಿ ಗಮನಿಸಿಲ್ಲ ಮ್ಯಾನುಫ್ಯಾಕ್ಚರ್ ಮಾಡುವ ಜವಾಬ್ದಾರಿ ಅನಿಲ್ ಅಂಬಾನಿಯ ರಿಲಾಯನ್ಸ್ ಗೆ ಕೊಟ್ಟಿದ್ದಾರೆ ಅನಿಲ್ ಅಂಬಾನಿ ಸಂಸ್ಥೆಗೆ ಯಾವುದೇ ಅನುಭವವಿಲ್ಲ ಮೋದಿಗೆ ದೇಶದ ಹಿತರಕ್ಷಣೆ ಬಗ್ಗೆ ಕಮಿಟ್ ಮೆಂಟ್ ಇಲ್ಲ ರಿಲಾಯನ್ಸ್ ಕಂಪನಿಗೆ ಹಿನ್ನೆಲೆ ಏನಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ರು.
ಅವರ ಕಂಪನಿಗೆ ಇನ್ನೂ 36 ತಿಂಗಳಾಗಿದೆ ಅಷ್ಟೆ. ಇನ್ನೂ ಇದರ ಬಗ್ಗೆ ಮಾಹಿತಿ ಇಲ್ಲ ಒಂದು ಏರ್ ಕ್ರಾಫ್ಟ್ ಕೂಡ ಬಂದಿಲ್ಲ ಮೋದಿ ವಿರುದ್ಧ ಲೋಕಸಭೆಯಲ್ಲಿ ಹಕ್ಕುಚ್ಯುತಿ ಮಂಡನೆ ಮಾಡಿದ್ದೇವೆ. 126 ವಿಮಾನ ಬಿಟ್ಟು 36 ವಿಮಾನಗಳನ್ನು ಮೋದಿ ಏಕೆ ಖರೀದಿ ಮಾಡಿದ್ರು ಅನ್ನೋದಕ್ಕೆ ಮೋದಿ ಉತ್ತರ ಕೊಡಬೇಕು ಚರ್ಚೆ ನಡೆಸಿಲ್ಲ, ಡಿಫೆನ್ಸ್ ಮಿನಿಸ್ಟರ್ ಗೂ ಗೊತ್ತಿಲ್ಲದೆ ಮೋದಿ ಹೇಗೆ ಖರೀದಿಸಿದ್ರು ಮೋದಿ ಎಚ್ ಎ ಎಲ್ ಅನ್ನು ಕಡೆಗಣಿಸಿದ್ದು ಏಕೆ ಏರ್ ಕ್ರಾಫ್ಟ್ ಬೆಲೆ ಹೇಳಲು ಮೋದಿ ಹಿಂದೆ ಮುಂದೆ ನೋಡ್ತಿರೋದು ಏಕೆ
ಮೋದಿಗೆ ಭಯ-ಭೀತಿ ಬೇಕೆ, ಮೋದಿ ದೇಶವನ್ನು ಮಾರಾಟ ಮಾಡಲು ಇಟ್ಟಿದ್ದಾರೆ ದೇಶದ ಬಗ್ಗೆ ಗಂಭೀರ ಯೋಚನೆ ಮಾಡ್ತಿಲ್ಲ ಎಂದು ಟೀಕಿಸಿದ್ರು.
ಮೋದಿಯದ್ದು ಬೂಟಾಟಿಕೆ ಸರ್ಕಾರ ದೊಡ್ಡ ದೊಡ್ಡ ಉದ್ಯಮಿಗಳಿಗೆ, ತಮ್ಮ ಸ್ನೇಹಿತರಿಗೆ ಮೋದಿ ಅನುಕೂಲ ಮಾಡಿಕೊಡ್ತಿದ್ದಾರೆ ಜನಸಾಮಾನ್ಯರಿಗೆ ಯಾವುದೇ ಅನುಕೂಲ ಇಲ್ಲ ಮೋದಿ ದೇಶದ ಅತ್ಯಂತ ಭ್ರಷ್ಟ ಪ್ರಧಾನಿ. ಜನಪರ ಯೋಜನೆ ಕೊಡೋದಕ್ಕೂ ಮೋದಿಗೆ ಯೋಗ್ಯತೆ ಇಲ್ಲ. ಪ್ರಧಾನಿ ಮೋದಿ ಕಾರ್ಪೋರೇಟ್ ಜಗತ್ತಿನ ಪಾಲುದಾರರು. ಮೋದಿ ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರ ಕೊಡದಿದ್ರೆ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡುತ್ತೆ ಅಂತಾ ಎಚ್ಚರಿಕೆ ನೀಡಿದ್ರು.
ಅಭಿವೃದ್ಧಿಗೂ ವೋಟ್ ಹಾಕೋದಕ್ಕೂ ಸಂಬಂಧ ಇಲ್ಲ ವೋಟ್ ಹಾಕಿಲ್ಲ ಅಂತೇಳಿ ಆ ಭಾಗದ ಜನರನ್ನ ತಿರಸ್ಕಾರ ಮಾಡೋದು ಸರಿಯಿಲ್ಲ ಕರಾವಳಿಯಲ್ಲಿ ಜನ ವೋಟ್ ಹಾಕಿಲ್ಲ ಅಂತೇಳಿ ಆ ಭಾಗವನ್ನು ನಿರ್ಲಕ್ಷ್ಯ ಮಾಡೋದಕ್ಕೆ ಆಗುತ್ತಾ? ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರ ಬದ್ಧ ಎಂದು ಮತ ಹಾಕುವಾಗ ಜೆಡಿಎಸ್ ನೆನಪಾಗಲಿಲ್ಲವೇ ಎಂಬ ಸಿಎಂ ಎಚ್.ಡಿ.ಕೆ ಹೇಳಿಕೆ ದಿನೇಶ್ ಗುಂಡೂರಾವ್ ಟಾಂಗ್ ನೀಡಿದ್ರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ಸರಿಯಲ್ಲ. ಬಜೆಟ್ ನಲ್ಲಿ ಅನ್ಯಾಯ ಆಗಿಲ್ಲ ಕೆಲವರು ಬಜೆಟ್ ಅನ್ನು ತಪ್ಪಾಗಿ ಅರ್ಥೈಸಿ ಸುಳ್ಳು ಹರಡಿಸುತ್ತಿದ್ದಾರೆ ಎಲ್ಲ ಭಾಗಗಳನ್ನೂ ಅಭಿವೃದ್ಧಿ ಮಾಡುವುದು ಕಾಂಗ್ರೆಸ್ ನ ಉದ್ದೇಶ ಜೆಡಿಎಸ್ ಶಾಸಕರು ಇಲ್ಲಿಂದ ಗೆದ್ದು ಬಂದಿದ್ದಾರೆ ಕಾಂಗ್ರೆಸ್ ಎಲ್ಲ ಭಾಗಗಳಿಂದಲೂ ಗೆದ್ದು ಬಂದಿದ್ದಾರೆ ಉತ್ತರ ಕರ್ನಾಟಕಕ್ಕೆ ನಾವು ಸಚಿವ ಸಂಪುಟದಲ್ಲೂ ಹೆಚ್ಚಿನ ಆದ್ಯತೆ ನೀಡೇ ನೀಡುತ್ತೇವೆ ರಾಜ್ಯದ ಸಿಎಂ ಆಗಿ ಎಚ್ಡಿಕೆ ಎಲ್ಲ ಜನರನ್ನೂ ಪ್ರತಿನಿಧಿಸುತ್ತಾರೆ ಎಂದ್ರು.
ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ವಿಚಾರ ಈಗಾಗಲೇ ಅಂತಿಮವಾಗಿದೆ. ಕಾಂಗ್ರೇಸ್ ನ ನಡವಳಿಕೆ ಮೈತ್ರಿ ಯನ್ನು ನಿರ್ಧರಿಸುತ್ತದೆ ಎಂದು ಈಗ ಸಿಎಂ ಹೇಳಿಕೆ ನೀಡಿದ್ದಾರೆ.ಆದ್ರೆ ಇದು ಮೈತ್ರಿ ಸರ್ಕಾರವಾದ್ದರಿಂದ ಇಬ್ಬರ ನಡವಳಿಕೆಯೂ ಮುಖ್ಯ.ಇಬ್ಬರ ನಡವಳಿಕೆಯೂ ಸರಿಯಾಗಿರಬೇಕು ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳೋದು ಅಂತ ಸರಕಾರ ರಚನೆ ವೇಳೆ ಕುಮಾರಸ್ವಾಮಿಯವರ ಸಮ್ಮುಖದಲ್ಲೇ ತೀರ್ಮಾನವಾಗಿದೆ ಎಂದ್ರು.
ನಾನು ಯಾವುದೇ ಕ್ಯಾಂಪ್ ನಲ್ಲಿ ಇಲ್ಲ.ನಾನು ಕಾಂಗ್ರೆಸ್ಕ್ಯಾಂಪ್ ನಲ್ಲಿದ್ದೇನೆ.ನನ್ನ, ಪರಮೇಶ್ವರ್, ಡಿ.ಕೆ ಶಿವಕುಮಾರ್, ಈಶ್ವರ್ ಖಂಡ್ರೆ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಸಿದ್ದರಾಮಯ್ಯ ಕ್ಯಾಂಪ್, ಪರಮೇಶ್ವರ್ ಕ್ಯಾಂಪ್ ಅಂತಾ ಮಾಧ್ಯಮಗಳಲ್ಲಿ ಬರ್ತಿದೆ ಅಷ್ಟೇ.ನಾನು ಕಾಂಗ್ರೆಸ್ ಕ್ಯಾಂಪ್ ನಲ್ಲಿದ್ದೇನೆ ಎಂದ್ರು.
Related Articles
Thank you for your comment. It is awaiting moderation.
Comments (0)