ಹಾಸನ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ಗೆ ಬೇಕು: ಚುನಾವಣಾ ಪೂರ್ವ ಮೈತ್ರಿಗೆ ಎ.ಮಂಜು ಅಪಸ್ವರ

ಬೆಂಗಳೂರು: ಮಗು ಹುಟ್ಟೊಕ್ಕಿಂತ ಮುಂಚೆ ಡಿಎನ್ ಎ ಪರೀಕ್ಷೆಗೆ ನಿಷೇಧವಿದೆ ಎನ್ನುವ ಮೂಲಕ ಲೋಕಸಭಾ ಚುನಾವಣಾ ಪೂರ್ವ ಮೈತ್ರಿ ಕುರಿತು ಮಾಜಿ ಸಚಿವ ಎ.ಮಂಜು ಅಪಸ್ವರ ಎತ್ತಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಹಾಸನ ಕಾಂಗ್ರೆಸ್ ಮುಖಂಡರ ಸಭೆ ನಡೆಯಿತು. ಲೋಕಸಭಾ ಚುನಾವಣೆಯಲ್ಲಿ ಹಾಸನದಲ್ಲಿ ಕಾಂಗ್ರೇಸ್ ಅಭ್ಯರ್ಥಿಗೇ ಹೆಚ್ಚಿನ ಮನ್ನಣೆ ಕೊಡಬೇಕು ಎಂದು ಹಾಸನ ಕಾಂಗ್ರೇಸ್ ಮುಖಂಡರು, ಮಾಜಿ ಸಚಿವರು, ಪದಾಧಿಕಾರಿಗಳು ಪಟ್ಟು ಹಿಡಿದಿದ್ದಾರೆ. ಮೈತ್ರಿ ಸರ್ಕಾರದ ವಿಚಾರದಲ್ಲಿ ನಮಗೆ ಸಾಕಷ್ಟು ನೋವಿದೆ ಅದೆಲ್ಲವನ್ನೂ ಪರಿಹರಿಸಿ ನಮ್ಮ ಅಭಿಪ್ರಾಯ ಪರಿಗಣಿಸಿ. ಹಾಸನದಲ್ಲಿ ಲೋಕಸಭೆಗೆ ಕಾಂಗ್ರೇಸ್ ಅಭ್ಯರ್ಥಿಯನ್ನೇ ಹಾಕಬೇಕು. ಇದು ಹಾಸನ ಕಾಂಗ್ರೇಸ್‌ನ ಹಕ್ಕು. ಇದೆಲ್ಲವನ್ನೂ ಪರಿಗಣಿಸಿದರೆ ಮಾತ್ರ ನಮ್ಮ ಕಾಂಗ್ರೇಸ್ ಪಕ್ಷಕ್ಕೆ ಉಳಿಗಾಲ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದ, ಆದರೆ ನಮ್ಮ ನೋವುಗಳನ್ನೂ ನಿವಾರಿಸಿ ಎಂದು ಹಾಸನ ಕಾಂಗ್ರೇಸ್ ಮುಖಂಡರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರನ್ನು ತೀವ್ರ ಒತ್ತಾಯಿಸಿದ್ದಾರೆ.

ಸಭೆ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಎ ಮಂಜು, ಮಗು ಹುಟ್ಟೊಕ್ಕಿಂತ ಮುಂಚೆ ಡಿಎನ್ ಎ ಪರೀಕ್ಷೆಗೆ ನಿಷೇಧವಿದೆ. ಹಾಗೆಯೇ ಲೋಕಸಭೆ ಚುನಾವಣಾ ಮೈತ್ರಿ ಬಗ್ಗೆ‌ ಹೈಕಮಾಂಡ್ ನಿರ್ಧಾರ ಫೈನಲ್. ಕ್ಷೇತ್ರದಲ್ಲಿ, ಜಿಲ್ಲೆಯಲ್ಲಿ ಪಕ್ಷವನ್ನ ಬಲಪಡಿಸುವುದಷ್ಟೇ ನಮ್ಮ ಜವಾಬ್ದಾರಿ. ಚುನಾವಣೆ ಇನ್ನೂ ದೂರವಿದೆ ಈಗಲೇ ಏನೂ ಹೇಳಲಿಕ್ಕಾಗದು ಎಂದರು.

Related Articles

Comments (0)

Leave a Comment