ಕರ್ನಾಟಕದ ಕಣ್ತಪ್ಪಿದ ನಿಗೂಢಗಳು ಕೃತಿ ಬಿಡುಗಡೆ!

ಬೆಂಗಳೂರು: ಬೆಂಗಳೂರಿನ ಮೂಲ‌ ಹೆಸರು ಎಂದರೆ ತಕ್ಷಣೆ ನೆನಪಾಗುವುದು ಬೆಂದಕಾಳೂರು. ಬೆಂದಕಾಳೂರೇ ಮುಂದೆ ಬೆಂಗಳೂರು ಆಯಿತು ಎನ್ನುವುದು ಈಗಿರುವ ಇತಿಹಾಸ. ಆದರೆ 8 ನೇ ಶತಮಾನದಲ್ಲೇ ಬೆಂಗಳೂರು ಎನ್ನುವ ಹೆಸರು ಇತ್ತು ಎನ್ನುವ ಮಾಹಿತಿ ಇದೀಗ ಬಹಿರಂಗಗೊಂಡಿದೆ.

ಹೆಮ್ಮರ ಪ್ರಕಾಶನ ಹೊರತಂದಿರುವ ನಿಗೂಢ ಕರ್ನಾಟಕ ಕೃತಿಯನ್ನು ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆಗೊಳಿಸಲಾಯಿತು. ಪತ್ರಕರ್ತ ಎಸ್.ಶ್ಯಾಮ್ ಪ್ರಸಾದ್ ಬರೆದಿರುವ ಆಂಗ್ಲ ಕೃತಿ ಹಾಗು ಡಾ.ಎಸ್.ಚಂದ್ರಮೋಹನ್ ಅನುವಾದಿಸಿರುವ ಕನ್ನಡ ಅವತರಣಿಕೆಯನ್ನು ಸಾಹಿತಿ ಸಿದ್ದಲಿಂಗಯ್ಯ ಬಿಡಿಗಡೆಗೊಳಿಸಿದರು.

ನಂತರ ಸಮಾರಂಭದಲ್ಲಿ ಮಾತನಾಡಿದ ಸಾಹಿತಿ ಸಿದ್ದಲಿಂಗಯ್ಯ ಮಾತನಾಡಿ, ಸಂಶೋಧಕ,ಲೇಖಕನಾಗಿ ಸಮಾಜದ ಚರಿತ್ರಯ ಬಗ್ಗೆ ಅದಮ್ಯ‌ ಕುತೂಹಲ ಉಳಿಸಿಕೊಂಡು ಪ್ರಜ್ಞೆಯಿಂದ ಕೃತಿ ಬರೆದಿದ್ದಾರೆ.
ಅನೇಕ‌ ಸಿದ್ದ ನಂಬಿಕೆಗಳನ್ನು ಬುಡಮೇಲು ಮಾಡಿದ್ದಾರೆ. ಅದಕ್ಕೆ ಆಧಾರಗಳನ್ನೂ ನೀಡಿದ್ದಾರೆ. ಪ್ರಚಾರಕ್ಕೆ ಇಲ್ಲವೇ ಜನರಲ್ಲಿ‌ ಆಶ್ಚರ್ಯ ಹುಟ್ಟಿಸಲು ಈ ಕೃತಿ ಬರೆದಿಲ್ಲ. ಕೋಪದ ಕಾರಣದಿಂದ ಶುರುವಾದ ಬರವಣಿಗೆ ಕರ್ನಾಟಕಕ್ಕ‌ ಮೌಲ್ಯವಾದ ಮಾಹಿತಿ ನೀಡಿದೆ. ಇದರಲ್ಲಿನ ಅಂಶಗಳು ಕೆಲವರಿಗೆ ಆತಂಕ ತರಬಹುದು, ಆಶ್ಚರ್ಯ ಆಗಬಹುದು, ಅಭಿಪ್ರಾಯ ಬೇಧವೂ ಆಗಬಹುದು, ಆದರೆ ಎಲ್ಲರಿಗೂ ಹೊಸ ವಿಷಯ ತಿಳಿಸಿದಂತಾಗಲಿದೆ. ವಿಶೇಷ ಮಾಹಿತಿ ಉಳ್ಳ ಕೃತಿ ಇದಾಗಿದೆ ಎಂದರು.

ಕನ್ನಡ ಅನುವಾದವನ್ನು ಚಂದ್ರ ಮೋಹನ್ ಮಾಡಿದ್ದಾರೆ. ಚೆನ್ನಾಗಿ ಅನುವಾದ ಮಾಡಿದ್ದಾರೆ, ಕನ್ನಡದ್ದೇ ಕೃತಿ ಎನ್ನುವ ರೀತಿ ಉತ್ತಮ ಶಬ್ದ ಪ್ರಯೋಗ ಮಾಡಿ ಅನುವಾದಿಸಿದ್ದಾರೆ. ಅವರು ಅನುವಾದಕರಾಗಿ ಮುಂದುವರೆಯಬೇಕು ಎಂದು ಅಭಿಪ್ರಾಯಪಟ್ಟರು.

ನಿರ್ದೇಶಕ ಬಿ.ಸುರೇಶ್ ಮಾತನಾಡಿ, ಚರಿತ್ರೆಯಲ್ಲಿ ನಾವು ಕೇಳಿರುವ ಬಹುತೇಕ ಭಾಗಗಳು ಪ್ರಕ್ಷಿಪ್ರವಾಗಿರಲಿವೆ. ಈ ಕೃತಿಯಲ್ಲಿರುವ ಏಳು ಲೇಖನವನ್ನು ಪ್ರಬಂಧದ ರೂಪದಲ್ಲಿ ಬರೆಯಲು‌ ಮುನ್ನುಡಿಯಂತಿದೆ ಎಂದರು. ಅನುವಾದಗಳಿಂದ‌ ಕನ್ನಡದ ಸಾಹಿತ್ಯ ಮತ್ತೊಂದು ಮಜಲಿಗೆ ಹೋಗಲಿದೆ. ಅನುವಾದಗಳ ಮೂಲಕ ಮತ್ತೊಂದು‌ ಜಗತ್ತು ತೆರೆದಿಡಲಿದೆ. ಆದರೆ ಅನುವಾದದ ಪ್ರಕ್ರಿಯೆ ಬಹಳ ಎಚ್ಚರಿಕೆಯಿಂದ ಆಗಬೇಕು ಎಂದರು.

ಕರ್ನಾಟಕದ‌ ಕೆಲವ ನಿಗೂಢತೆಗಳ ಪ್ರಸ್ತಾಪ ಕೃತಿಯಲ್ಲಿವೆ. ಹೊಯ್ಸಳ ಲಾಂಛನದಲ್ಲಿ ಸಿಂಹ ಇದೆ.ಆದರೆ ಸಿಂಹ ಭಾರತದ್ದಲ್ಲ ಇನ್ನು ಸಿಂಹ ಲಾಂಛನವಾಗಿದ್ದು‌ ಹೇಗೆ, ಇದು ಬಂದಿದ್ದು‌ ಹೇಗೆ ಎನ್ನುವ ಮಾಹಿತಿ ವಿವರಿಸಲಾಗಿದೆ.

ಬೆಂಗಳೂರು ಹೆಸರು ಬೆಂದಕಾಳೂರಿನಿಂದ ಬಂದಿಲ್ಲ‌ ಎಂಟನೇ ಶತಮಾನದಲ್ಲೇ ಇತ್ತು‌ ಎಂದು‌ ಬೇಗೂರಿನಲ್ಲಿ ಸಿಕ್ಕ‌ ಶಾಸನದಲ್ಲಿ ಮಾಹಿತಿ ಇದೆ ಇಂತಹ ಹಲವು ಅಪರೂಪದ ಮಾಹಿತಿಗಳು ಇವೆ ಎಂದರು.

ಲೇಖಕ‌ ಹಾಗು ಪತ್ರಕರ್ತ ಶ್ಯಾಂಪ್ರಸಾದ್ ಮಾತನಾಡಿ, ಮಹಾರಾಷ್ಟ್ರದಲ್ಲಿ ಬಹಳ ಅಪರೂಪದ ಕಟ್ಟಡವೊಂದು ಪತ್ತೆಯಾಗಿದೆ ಅದರಲ್ಲಿ ಕನ್ನಡದ ಕೆತ್ತನೆಯೂ‌ ಇದೆ,ಇದು ಮನವ ನಿರ್ಮಾಣ ಕಟ್ಟಡ ಅಲ್ಲ. ಏಲಿಯನ್ಸ್ ಮಾಡಿವೆ ಎನ್ನುವ ಮೆಸೇಜ್ ಹರಿದಾಡಿದವು. ಕನ್ನಡಿಗರೇ ಕಟ್ಟಿದ ಕೈಲಾಸನಾಥ ದೇವಸ್ಥಾನವನ್ನು ಏಲಿಯನ್ಸ್ ಕಟ್ಟಿದ್ದು ಅಂತಾ ಕನ್ನಡಿಗರೇ ಹೇಳಿದ್ದು ಕೋಪ ತರಿಸಿತು. ಪದೇ ಪದೇ ಸ್ನೇಹಿತರ ವಾಟ್ಸ್ ಆಪ್ ನಿಂದ ಬಂದ ಈ ಮೆಸೇಜ್ ನಿಂದ ಎನಿಗ್ಮಾಸ್ ಬರೆಯಲು ಹೊರಟೆ. ಇಲ್ಲಿರುವ ಲೇಖನಗಳು ಯಾವುದೇ ಪಠ್ಯದಲ್ಲಿ ಸಿಗದ‌ ಮಾಹಿತಿಯಾಗಿವೆ. ಹೊಯ್ಸಳರ ರಾಜ ಸಳ ಕೊಂದಿದ್ದು ಹುಲಿ, ಆದರೆ ಲಾಂಛನದಲ್ಲಿ ಸಿಂಹ ಇದೆ,
ಗೊಮ್ಮಟೇಶ್ವರನ ಒಂದು ಬೆರಳು ಚಿಕ್ಕದಾಗಿದೆ, 24 ವರ್ಷದ ಹಿಂದೆಯೇ ಈ ಪ್ರಶ್ನೆ ಕಾಡಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಇಂತಹ ಹಲವು ಮಾಹಿತಿ ಕೃತಿಯಲ್ಲಿವೆ ಎಂದರು.

Related Articles

Comments (0)

Leave a Comment