ಕೃಷ್ಣಾ ಜಲಾಶಯದ ಒಳ ಹರಿವು ಹೆಚ್ಚಳ: ನಾರಾಯಣಪುರ ಜಲಾಶಯಕ್ಕೆ ನೀರು ಬಿಡುಗಡೆ

ವಿಜಯಪುರ: ಮಹಾರಾಷ್ಟ್ರದ ಕೃಷ್ಣಾ ಕೊಳ್ಳದಲ್ಲಿ ಕಳೆದ ವಾರದಿಂದ ಭಾರಿ ಮಳೆಯಾಗುತ್ತಿರುವುದರಿಂದ ಆಲಮಟ್ಟಿ ಕೃಷ್ಣಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಇಂದು ಕೃಷ್ಣ ಜಲಾಶಯಕ್ಕೆ 1 ಲಕ್ಷ 12 ಸಾವಿರ ಕ್ಯೂಸೆಕ್ಸ್ ನೀರಿನ ಒಳಹರಿವಿದೆ. 123.081 ಟಿಎಂಸಿ ಗರಿಷ್ಠ ಜಲ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಇಂದು 100 ಟಿಎಂಸಿ ನೀರು ಸಂಗ್ರಹವಾಗಿದೆ. 519.60 ಮೀಟರ್, ಗರಿಷ್ಠ ಎತ್ತರವಿರುವ ಡ್ಯಾಮ್ ನಲ್ಲಿ ಇಂದು 518 .10
ಮೀಟರ್ ಜಲ ಸಂಗ್ರಹವಾಗಿದೆ.

ಮಹಾರಾಷ್ಟ್ರದ , ಧಾಮ್, ಕನೇರ್, ಅಗ್ನಿ ನದಿ, ಕೊಯ್ನಾ, ಪಂಚ ಗಂಗಾ, ವೇದ ಗಂಗಾ, ದೂಧ ಗಂಗಾ,
ಹಿರಣ್ಯ ಕೇಶಿ, ತುಳಸಿ, ರಾಧಾನಗರಿ, ಪಾಟ್ ಗಾಂವ್, ಅಲ್ಲದೆ ಕರ್ನಾಟಕದ ರಾಜಾಪುರ ಬ್ಯಾರೇಜ್,
ಘಟ ಪ್ರಭಾ, ಹಿಪ್ಪರಗಿ ಬ್ಯಾರೇಜ್ ಗಳಿಂದ ಹಾಗೂ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಭಾರಿ ಮಳೆಯಿಂದ ಆಲಮಟ್ಟಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಅಧಿಕಗೊಂಡಿದೆ.

ಜಲಾಶಯದ 26 ಕ್ರಸ್ಟ್ ಗೇಟ್ ಗಳನ್ನೂ ಬಂದ್ ಮಾಡಲಾಗಿದ್ದು, Kpcl ಮೂಲಕ ಸುರಪುರ ತಾಲೂಕಿನ ನಾರಾಯಣಪುರ ಜಲಾಶಯಕ್ಕೆ 25 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡಲಾಗುತ್ತಿದೆ.

Related Articles

Comments (0)

Leave a Comment