ಮೈತ್ರಿ ಸರಕಾರದಲ್ಲಿ ಸಿದ್ದರಾಮಯ್ಯ ಉತ್ತರ ಕುಮಾರ: ಈಶ್ವರಪ್ಪ
- by Suddi Team
- July 14, 2018
- 92 Views

ಶಿವಮೊಗ್ಗ:ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಉತ್ತರ ಕುಮಾತನಾಗಿದ್ದಾರೆ ಎಂದುಬಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಮೈದುಂಬಿ ಹರಿಯುತ್ತಿರುವ ತುಂಗಾ ನದಿಗೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಬಾಗೀನ ಅರ್ಪಿಸಿದರು.ಕೋರ್ಪಾಲಯ್ಯನ ಛತ್ರದ ಬಳಿ ಇರುವ ಮಂಟಪದ ಸಮೀಪ ಪತ್ನಿ ಜಯಶ್ರೀ ಹಾಗು ಮೊಮ್ಮಗನೊಂದಿಗೆ ಆಗಮಿಸಿದ ಈಶ್ವರಪ್ಪ ಬಾಗೀನ ಅರ್ಪಿಸಿದರು.
ನಂತರ ಪರ್ತಕರ್ತರ ಜೊತೆ ಮಾತನಾಡಿದ ಈಶ್ವರಪ್ಪ ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು.ಶಕ್ತಿ ಇದ್ದರೆ ನೇರವಾಗಿ ಸಾಲಮನ್ನಾ ಮಾಡಿಸಬೇಕು,ಕಡಿತಗೊಳಿಸಿರುವ ಅಕ್ಕಿ ಕೊಡಿಸಿ, ತೈಲ ಬೆಲೆ ಇಳಿಕೆ ಸೇರಿದಂತೆ ಮುಂತಾದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಅದು ಬಿಟ್ಟು ಪತ್ರ ಬರೆದರೆ ಹೇಗೆ ಎಂದು ಪ್ರಶ್ನಿಸಿದ್ರು.
ಸಂಪೂರ್ಣ ಸಾಲಮನ್ನಾ ಮಾಡದೆ ಈ ಸರಕಾರ ಪೇಚಿಗೆ ಸಿಲುಕಿದೆ.ಸಂಪೂರ್ಣ ಸಾಲಮನ್ನಾ ಆಗಲಿದೆ ಎನ್ನುವ ರೈತರ ನಿರೀಕ್ಷೆ ಹುಸಿಯಾಗಿದೆ.ಸಾಲಮನ್ನಾ ಮಾಡಲು ಸರಕಾರ ಪರದಾಡುತ್ತಿದೆ.ಕೇವಲ ರಾಜಕೀಯ ಚಟಕ್ಕಾಗಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ ಅಷ್ಟೇ ಎಂದು ಈಶ್ವರಪ್ಪ ಟೀಕಾಪ್ರಹಾರ ನಡೆಸಿದ್ರು.
Related Articles
Thank you for your comment. It is awaiting moderation.
Comments (0)