ಮೈತ್ರಿ ಸರ್ಕಾರ ಅನಾಥ ಶಿಶುವಲ್ಲ ಮೈತ್ರಿ ಸರ್ಕಾರಕ್ಕೂ ತಂದೆ, ತಾಯಿಗಳಿದ್ದಾರೆ: ಸಿಎಂ ಕುಮಾರಸ್ವಾಮಿ
- by Suddi Team
- July 9, 2018
- 83 Views
ಬೆಂಗಳೂರು: ಮೈತ್ರಿ ಸರ್ಕಾರ ಸಾಂದರ್ಭಿಕ ಶಿಶು ಇರಬಹುದು. ಆದರೆ, ಈ ಶಿಶು ಅನಾಥ ಶಿಶುವಲ್ಲ. ಈ ಶಿಶುವಿಗೂ ತಂದೆ-ತಾಯಿಗಳಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನ ಶಾಸಕರೇ ನನ್ನ ತಂದೆ-ತಾಯಿ. ಈ ತಂದೆ-ತಾಯಿ ಯಿಂದಲೇ ನಾನು ಸಾಂದರ್ಭಿಕ ಶಿಶುವಾದೆ ಎಂದು ವಿಧಾನಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಬಿಜೆಪಿಯವರ ವ್ಯಂಗ್ಯಕ್ಕೆ ಉತ್ತರ ನೀಡಿದರು.
ರಾಜ್ಯಪಾಲರ ಭಾಷಣದ ಕುರಿತು ಸಿಎಂ ಕುಮಾರಸ್ವಾಮಿ ವಿಧಾನಸಭೆಯಲ್ಲಿ ಉತ್ತರ ನೀಡಿದರು. ಮಹಾಭಾರತದ ಕರ್ಣನ ಜೊತೆ ತಮ್ಮನ್ನು ಹೋಲಿಸಿಕೊಂಡ ಸಿಎಂ ಕುಮಾರಸ್ವಾಮಿ, ನಾನೊಬ್ಬ ಸಾಂದರ್ಭಿಕ ಶಿಶು. ಆದರೆ, ಬಿಜೆಪಿಯವರು ಹೇಳಿದಂತೆ ನಾನು ಅನಾಥ ಶಿಶುವಲ್ಲ. ಮಹಾಭಾರತದ ಕರ್ಣನೂ ಸಹ ಒಬ್ಬ ಸಾಂದರ್ಭಿಕ ಶಿಶುವೇ. ಕರ್ಣನಿಗೂ ತಾಯಿ ಇದ್ದಳು. ನನಗೂ ಅಪ್ಪ ಅಮ್ಮ ಇದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನ ಶಾಸಕರೇ ನನ್ನ ತಂದೆ-ತಾಯಿ. ಈ ತಂದೆ-ತಾಯಿಯಿಂದಲೇ ನಾನು ಸಾಂದರ್ಭಿಕ ಶಿಶುವಾದೆ ಎಂದು ಮಹಭಾರತದ ಪ್ರಸಂಗವನ್ನು ಸಿಎಂ ತಮ್ಮ ಮೈತ್ರಿ ಸರ್ಕಾರದ ರಚನೆ ಜೊತೆ ಹೋಲಿಸಿ ವಿಧಾನಸಭೆಯಲ್ಲಿ ಮಾತನಾಡಿದರು.
ಸಾಂದರ್ಭಿಕ ಶಿಶುಗೂ ಅಪ್ಪ ಅಮ್ಮಾ ಇದ್ದಾರೆ. ಅವರ ಬೆಂಬಲದಿಂದಲೇ ಈ ಶಿಶು ಜನಿಸಿರೋದು. ಟೀಕೆಗೆಳ ಬಗ್ಗೆ ನಾನು ಹೆಚ್ಚು ತಲೆ ಕಡೆಸಿಕೊಳ್ಳಲ್ಲ. 2008ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರವಿತ್ತು. ಆಗ ರೆಸಾರ್ಟ್ ನಲ್ಲಿ ಏನೇನಾಗಿತ್ತು. 40 ಶಾಸಕರ ಬಂಡಾಯ ಏನೇಯ್ತು ಎಂದು ನೆನಪಿಸಿಕೊಳ್ಳಿ ಎಂದರು.
ರೈತರ ಸಾಲ ಮನ್ನಾಗೂ ಜಾತಿ ಲೇಪನ ಮಾಡಿದ್ದಾರೆ. ರೈತರು ಬೆಳೆದ ಅನ್ನಕ್ಕೆ ಒಕ್ಕಲಿಗ ಬೆಳೆದ ಅನ್ನ ಲಿಂಗಾಯಿತ ಬೆಳೆದ ಅನ್ನ ಎಂದು ಬರೆದಿರುತ್ತಾರಾ. ಬಜೆಟ್ ಮೇಲಿನ ಉತ್ತರದ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡುತ್ತೇನೆ. ರಾಜಕೀಯ ಮಾಡಿ, ಟೀಕೆ ಮಾಡಿ .ಪ್ರತಿಪಕ್ಷ ಇರೋದೆ ಟೀಕೆ ಮಾಡೋದಕ್ಕೆ ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಿದ್ದೇನೆ ಎಂದು ಹೇಳಿದರು.
ರಾಜ್ಯಪಾಲರ ಭಾಷಣದಲ್ಲಿ ಏನು ಇಲ್ಲ ಎಂದು ಟೀಕೆ ಮಾಡಿದ್ದಾರೆ. ಅದರೂ, 20ಕ್ಕೂ ಹೆಚ್ಚು ಶಾಸಕರು 16.20 ಗಂಟೆ ಚರ್ಚೆ ಮಾಡಿದ್ದಾರೆ. ಕೆಲವರು ತೀಕ್ಷ್ಣ ಟೀಕೆ ಮಾಡಿದ್ದಾರೆ. ಟೀಕೆಗಳನ್ನು ಧನಾತ್ಮಕವಾಗಿ ಸ್ವೀಕರಿಸುತ್ತೇನೆ. ರಾಜ್ಯಪಾಲರ ಭಾಷಣಕ್ಕೆ ದಿಕ್ಕು ದೆಸೆ ಇಲ್ಲ ಎನ್ನುತ್ತಲೆ 16 ಗಂಟೆ ಚರ್ಚೆ ಮಾಡಿದ್ದಾರೆ. ಇನ್ನು ದಿಕ್ಕು ದೆಸೆ ಇದ್ದಿದ್ದರೆ ಇನ್ನೆಷ್ಟು ಗಂಟೆ ಭಾಷಣ ಮಾಡಲಾಗುತ್ತಿತ್ತೋ. ಆದರೆ, ಸರ್ಕಾರದ ಆಡಳಿತ ವೈಖರಿ ಬಗ್ಗೆ ಸಲಹೆಗಳನ್ನು ನೀಡಿರುವ ಆಡಳಿತ ಮತ್ತು ಪ್ರತಿಪಕ್ಷ ಪ್ರಮುಖರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಅಪವಿತ್ರ ಮೈತ್ರಿಯ ಸರ್ಕಾರ ಎಷ್ಟು ದಿನ ಇರುತ್ತೋ ಏನೋ ಎಂಬ ಆತಂಕವನ್ನು ಮಾಧುಸ್ವಾಮಿ ವ್ಯಕ್ತಪಡಿಸಿದ್ದಾರೆ. ಆತಂಕ ಬೇಡ ಈ ಸರ್ಕಾರ ಐದು ವರ್ಷ ಇರುತ್ತದೆ. ಮತ್ತೆ ಚುನಾವಣೆ ಎದುರಿಸುವ ಪ್ರಸಂಗ ಬರೋದಿಲ್ಲ. ನಮ್ಮ ಸರ್ಕಾರ ರಚನೆ ಆಗಿರೋದೇ ಈಗ, ನಮ್ಮ ಸರ್ಕಾರದ ಸಾಧನೆ ಹೇಳಿಕೊಳ್ಳಬೇಕಾದರೆ ಮುಂದಿನ ರಾಜ್ಯಪಾಲರ ಭಾಷಣದಲ್ಲಿ ಹೇಳಬಹುದು. ನಾವು ರೈತರಿಗೆ ಮನವಿ ಮಾಡುತ್ತೇವೆ. ಸರ್ಕಾರ ನಿಮ್ಮ ಪರವಾಗಿದೆ ಆತ್ಮಹತ್ಯೆಗೆ ಶರಣಾಗಬೇಡಿ. ನಮಗೆ ಸಮಯಾವಕಾಶಕೊಡಿ ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಡುತ್ತೇವೆ ಎಂದು ರೈತರಲ್ಲಿ ಮನವಿ ಮಾಡಿದರು.
ಹಿಂದೆ ಸರ್ಕಾರದಲ್ಲಿ ಇದ್ದವರು ಕೈಗೊಂಡ ನಿರ್ಧಾರಗಳಿಂದ ಕೆಲವು ಒಳ್ಳೆಯ ಹಾಗೂ ಕೆಲವು ಕೆಟ್ಟ ಪರಿಣಾಮಗಳೂ ಆಗಿವೆ. ಡಿ.ಕೆ.ರವಿ ಹಾಗೂ ಡಿವೈಎಸ್ ಪಿ ಎಂ.ಕೆ.ಗಣಪತಿ ಸಾವಿನ ಪ್ರಕರಣದಲ್ಲಿ ಪ್ರತಿಪಕ್ಷದಲ್ಲಿದ್ದಾಗ ನಾನು ಸಿಬಿಐಗೆ ತನಿಖೆಗೆ ಒತ್ತಾಯಿಸಿದ್ದೆ. ಡಿ.ಕೆ.ರವಿ ಪ್ರಕರಣ ಅತ್ಮಹತ್ಯೆ ಎಂದು ಸಿಬಿಐ ವರದಿ ನೀಡಿದೆ. ಮತ್ತು ಗಣಪತಿ ಪ್ರಕರಣದಲ್ಲಿ ಜಾರ್ಜ್ ಪಾತ್ರ ಏನೂ ಇಲ್ಲ ಎಂದು ನ್ಯಾಯಾಲಯ ತೀರ್ಪು ಕೊಟ್ಟಿದೆ. ಹಾಗಾಗಿ ಜಾರ್ಜ್ ರನ್ನು ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಂಡು ನಾನೇನು ಮಹಾಪರಾಧ ಮಾಡಿಲ್ಲ. ಬಿಜೆಪಿಯವರು ನನ್ನ ವಚನ ಭ್ರಷ್ಟತೆ ಬಗ್ಗೆ ಪ್ರಶ್ನಿಸುವ ಮೊದಲು ತಾವು ಎಷ್ಟು ವಚನ ಭ್ರಷ್ಟರಾಗಿದ್ದಾರೆ ಎಂಬುದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಗೌರವ ಇಟ್ಡುಕೊಂಡ ಕಾರಣಕ್ಕೆ ವಿರೋಧ ಪಕ್ಷ ನಾಯಕರನ್ನು ಅಭಿನಂದಿಸುತ್ತೇನೆ ಎಂದರು.
ಇದು 37 ಶಾಸಕರ ಸರ್ಕಾರ ಅಲ್ಲ.120 ಶಾಸಕರ ಸರ್ಕಾರ. 2006ರಲ್ಲಿ ಬಿಜೆಪಿಯವರು ನಮ್ಮ ಜತೆ ಕೈ ಜೋಡಿಸಿದಾಗ 74 ಶಾಸಕರ ಬೆಂಬಲ ಹೊಂದಿದ್ದ ಬಿಜೆಪಿಯ ರಿಗೆ 35 ಶಾಸಕರಿದ್ದ ನನಗೆ ಬೆಂಬಲ ನೀಡಿ ಮುಖ್ಯಮಂತ್ರಿ ಮಾಡಿದ್ದು ಮರೆತು ಹೋಯ್ತಾ. ಅಂದೂ ಕೂಡ ನಾನೇನು ಮುಖ್ಯಮಂತ್ರಿ ಮಾಡಿ ಎಂದು ನಿಮ್ಮ ಬಳಿ ಬಂದಿರಲಿಲ್ಲ. ರಾಜ್ಯಪಾಲರು ಮೊದಲು ನಿಮಗೇ 104 ಶಾಸಕರ ದೊಡ್ಡ ಪಕ್ಷ ಎಂದು ನಿಮಗೆ ಅವಕಾಶ ಕೊಟ್ಟರು. ಆದರೆ, ನಿಮಗೆ ಬಹುಮತ ಸಂಖ್ಯೆ ಬರಲಿಲ್ಲ. ಜುಲೈ 12 ರ ನಂತರ ಸರ್ಕಾರ ಉಳಿಯುವುದು ಕಷ್ಷ. ಜುಲೈ 27 ಚಂದ್ರಗ್ರಹಣ ಕುಮಾರಸ್ವಾಮಿ ಯವರಿಗೆ ಕಷ್ಡ ಎಂದು ಮಾಧ್ಯಮಗಳಲ್ಲಿ ಹೇಳುತ್ತಿದ್ದಾರೆ. ನನಗೆ ದೇವರ ಆಶೀರ್ವಾದ ಹಾಗೂ ಕಾಂಗ್ರೆಸ್ ನ ಬೆಂಬಲ ಇದೆ. ಏನೂ ಆಗಲ್ಲ ಮಹಾಭಾರತದ ಕರ್ಣ ಕೂಡ ಸಾಂದರ್ಬಿಕ ಶಿಶು. ನಮ್ಮಬಿಜೆಪಿಯವರು ಬಿಂಬಿಸಿದಂತೆ ಅನಾಥ ಶಿಶು ಅಲ್ಲ.
ಒಂದೂವರೆ ತಿಂಗಳಲ್ಲಿ ಜನತಾ ದರ್ಶನದಲ್ಲಿ ಹೇಗೆ ಸ್ಪಂದಿಸಿದ್ದೇನೆ ಎಂಬ ಬಗ್ಗೆ ನೂರು ಉದಾಹರಣೆಗಳನ್ನು ಕೊಡಬಲ್ಲೆ. ಅಂಗವಿಲ ಹೆಣ್ಣುಮಗಳೊಬ್ಬಳಿಗೆ 24 ಗಂಟೆಯಲ್ಲಿ ಕೆಲಸ ಕೊಡಿಸಿದ್ದೇನೆ. ಆ ಹೆಣ್ಣು ಮಗಳು ವಿಭೂತಿ ಬಳಿದುಕೊಂಡಿದ್ದಳು ಎಂದು ವಾಪಸ್ ಕಳಿಸಿಲ್ಲ. ಜಾತಿ ನೋಡಿ ನಾನು ಕೆಲಸ ಮಾಡಲ್ಲ. ನಾನು ಒಂದು ಜಾತಿಯ ಮುಖ್ಯಮಂತ್ರಿಯಲ್ಲ. ಆರೂವರೆ ಕೋಟಿ ಜನರ ಮುಖ್ಯಮಂತ್ರಿ. ನನ್ನ ಒಂದು ಜಾತಿಗೆ ಸೀಮಿತ ಮಾಡಬೇಡಿ. ರೈತರ 36000 ಕೋಟಿ ರೂ.ಸಾಲ ಮನ್ನಾ ಮಾಡಿರೋದು ಮೊದಲ ಹಂತ ಮಾತ್ರ. ಇನ್ಮೂ ಸ್ಕೀಂಗಳನ್ನು ರೂಪಿಸುತ್ತಿದ್ದೇವೆ. ಕೊಟ್ಟ ಮಾತು ಉಳಿಸಿಕೊಳ್ಳುತ್ತೇನೆ. ಅದಕ್ಕೆ ಸಮಯ ಬೇಕು.
ಇವತ್ತು ರೈತರ ಸಾಲ ಮನ್ನಾಗೆ ಹೋರಾಟದ ಮಾತುಗಳಾಡುತ್ತಿರುವ ಯಡಿಯೂರಪ್ಪ ಉಪಮುಖ್ಯಮಂತ್ರಿ ಯಾಗಿ ಸಾಲ ಮನ್ನಾ ಬಗ್ಗೆ ವಿಧಾನ ಪರಿಷತ್ ನಲ್ಲಿ ಏನು ಹೇಳಿದ್ರು ಎಂಬುದನ್ನು ನೆನಪಿಸುತ್ತೇನೆ.
Related Articles
Thank you for your comment. It is awaiting moderation.
Comments (0)